ಜನಾರ್ದನ ರೆಡ್ಡಿ ನಿವಾಸದ ಮೇಲೆ ಎಸ್ಐಟಿ ದಾಳಿ
ಬಳ್ಳಾರಿ, ಸೆಪ್ಟೆಂಬರ್ 23 : ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ತನಿಖಾ ದಳ ಬಳ್ಳಾರಿಯಲ್ಲಿರುವ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸಿದೆ. ಎಸ್ಐಟಿ ರೆಡ್ಡಿ ಆಪ್ತ ಸ್ವಸ್ತಿಕ್ ನಾಗರಾಜ್ ಅವರನ್ನು ಮಂಗಳವಾರ ಬಂಧಿಸಿತ್ತು.
ಬುಧವಾರ
ಲೋಕಾಯುಕ್ತ
ಎಸ್ಐಟಿ
ಅಧಿಕಾರಿಗಳು
ಬಳ್ಳಾರಿಯ
ಶಿರಗುಪ್ಪ
ರಸ್ತೆಯಲ್ಲಿರುವ
ಮಾಜಿ
ಸಚಿವ
ಜನಾರ್ದನ
ರೆಡ್ಡಿ
ನಿವಾಸ
ಸೇರಿದಂತೆ
ಎಂಟು
ಕರೆ
ದಾಳಿ
ನಡೆಸಿದ್ದು,
ದಾಖಲೆಗಳನ್ನು
ಪರಿಶೀಲನೆ
ನಡೆಸುತ್ತಿದ್ದಾರೆ.
[ಜೈಲಿನಿಂದ
ಬೇಲ್
ತನಕ:
ಗಾಲಿ
ಜನಾರ್ದನ
ರೆಡ್ಡಿ
ಟೈಮ್
ಲೈನ್]
ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಕ್ರಮ ಅದಿರು ಸಾಗಣೆ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುತ್ತಿದೆ. ಜಿಬಿಎಸ್ ಟ್ರಾನ್ಸ್ಪೋರ್ಟ್ ಮೂಲಕ ಅಕ್ರಮವಾಗಿ ಅದಿರು ಸಾಗಣೆ ಮಾಡಿದ ಆರೋಪದ ಮೇಲೆ ಜನಾರ್ದನ ರೆಡ್ಡಿ ಆಪ್ತರಾದ ಸ್ವಸ್ತಿಕ್ ನಾಗರಾಜ್ ಅವರನ್ನು ಮಂಗಳವಾರ ಬಂಧಿಸಿತ್ತು. [ಚಿತ್ರ: ಅಗ್ರಹಾರದಿಂದ ಹೊರ ಬಂದ ರೆಡ್ಡಿಗೆ ಬಹುಪರಾಕ್]
ಹೊಸಪೇಟೆಯಲ್ಲಿನ ನಿವಾಸದಲ್ಲಿ ಸ್ವಸ್ತಿಕ್ ನಾಗರಾಜ್ ಅವರನ್ನು ಬಂಧಿಸಿದ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿ ಸೆ.24ರ ತನಕ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬುಧವಾರ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಯಾವುದು ಎಸ್ಐಟಿ ತನಿಖೆ : ಅಕ್ರಮ ಗಣಿಗಾರಿಕೆ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. 50 ಸಾವಿರ ಮೆಟ್ರಿಕ್ ಟನ್ಗಿಂತ ಕಡಿಮೆ ಇರುವ ಗಣಿ ಅಕ್ರಮಗಳ ಬಗ್ಗೆ ಲೋಕಾಯುಕ್ತ ಎಸ್ಐಟಿ ತನಿಖೆ ನಡೆಸುತ್ತಿದೆ. ರೆಡ್ಡಿ ಮತ್ತು ಅವರ ಆಪ್ತರಿಂದ ಹಣ ಪಡೆದು ಅದಿರು ಸಾಗಣೆಗೆ ಅನುಮತಿ ಕೊಟ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಎಸ್ಐಟಿ ತನಿಖೆ ನಡೆಯುತ್ತಿದೆ.