ಕಲಾ ಪ್ರವೀಣೆ ಬಳ್ಳಾರಿಯ ಅನಿತಾಗೆ ಐಎಎಸ್ ಮಾಡುವ ಕನಸು
ಬಳ್ಳಾರಿ, ಮೇ 25 : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಬಳ್ಳಾರಿಯ ಅನಿತಾ ಬಸಪ್ಪ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಐಎಎಸ್ ಅಧಿಕಾರಿ ಆಗಬೇಕು ಎಂಬುದು ಅನಿತಾ ಅವರ ಕನಸಾಗಿದೆ. [ಕಲೆಯಲ್ಲಿ ಅರಳಿದ ಧಾರವಾಡದ ಪ್ರತಿಭೆ ಶಶಿಕಲಾ]
ಬಳ್ಳಾರಿ
ಜಿಲ್ಲೆ
ಕೊಟ್ಟೂರು
ತಾಲೂಕಿನ
ಇಂದೂ
ಪಿಯು
ಕಾಲೇಜಿನ
ಅನಿತಾ
ಬಸಪ್ಪ
600
ಕ್ಕೆ
585
ಅಂಕಗಳನ್ನು
ಪಡೆದು
ಕಲಾ
ವಿಭಾಗದಲ್ಲಿ
ರಾಜ್ಯಕ್ಕೆ
ಪ್ರಥಮ
ಸ್ಥಾನ
ಪಡೆದಿದ್ದಾರೆ.
ಅನಿತಾ
ಅವರ
ಮನೆಯ
ಬಡತನ
ಅವರ
ಓದಿಗೆ
ಅಡ್ಡಿಯಾಗಿಲ್ಲ.
[ಫಲಿತಾಂಶ
ನೋಡಲು
ಇಲ್ಲಿ
ಕ್ಲಿಕ್
ಮಾಡಿ]
ಅನಿತಾ
ಅವರ
ತಂದೆ
ಬಸಪ್ಪ
ಅವರು
ಕೊಟ್ಟೂರು
ಬಸ್
ನಿಲ್ದಾಣದಲ್ಲಿ
ಬಾಳೆ
ಹಣ್ಣು
ಮಾರಾಟ
ಮಾಡುತ್ತಾರೆ.
ಮನೆಯ
ಕಷ್ಟದ
ನಡುವೆಯೂ
ಅನಿತಾ
ಅವರ
ಓದಿಗೆ
ಮನೆಯವರು
ಸಂಪೂರ್ಣ
ಬೆಂಬಲ
ನೀಡಿದ್ದಾರೆ.
[ಬಳ್ಳಾರಿಯ
ಯಶ್ವಿತಾ
ಸಾಧನೆಗೆ
ಅಡ್ಡಿಯಾಗದ
ಬಡತನ]
ಫಲಿತಾಂಶದ ಬಳಿಕ ಒನ್ ಇಂಡಿಯಾ ಜೊತೆ ಮಾತನಾಡಿದ ಅನಿತಾ ಅವರು ಸಂತಸ ಹಂಚಿಕೊಂಡರು. 'ಐಎಎಸ್ ಅಧಿಕಾರಿಯಾಗಿ ಸಮಾಜ ಸೇವೆ ಮಾಡಬೇಕು ಎಂಬ ಕನಸು ಹೊಂದಿರುವುದಾಗಿ' ತಿಳಿಸಿದರು. [2ನೇ ಪಿಯುಸಿ ಫಲಿತಾಂಶ: ಯಾವ ಜಿಲ್ಲೆ ಯಾವ ಸ್ಥಾನದಲ್ಲಿದೆ?]
'ಎರಡು ಅಥವ ಮೂರನೇ ಸ್ಥಾನಗಳಿಸುವ ನಿರೀಕ್ಷೆ ಇತ್ತು. ಆದರೆ, ಮೊದಲ ಸ್ಥಾನ ಪಡೆದಿರುವುದು ಸಂತಸ ಮೂಡಿಸಿದೆ. ನನ್ನ ಸಾಧನೆಗೆ ತಂದೆ-ತಾಯಿ ಸೇರಿದಂತೆ ಕುಟುಂಬದವರೆಲ್ಲರ ಸಹಕಾರವೂ ಇದೆ' ಎನ್ನುತ್ತಾಳೆ ಅನಿತಾ. [ಇಂಗ್ಲಿಶ್ ನಲ್ಲಿ ಓದಿ]