ಬಳ್ಳಾರಿ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ
ಬಳ್ಳಾರಿ, ಆ.26 : "ರಾಜ್ಯ ಸರ್ಕಾರವೇ ಬಳ್ಳಾರಿಯಲ್ಲಿ ಠಿಕಾಣಿ ಹೂಡಿ ಜನರಿಗೆ ಬಗೆ-ಬಗೆಯ ಆಮಿಷಗಳನ್ನು ಒಡ್ಡಿತ್ತು. ಆದ್ದರಿಂದ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ" ಎಂದು ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಹೇಳಿದ್ದಾರೆ.
ಉಪ
ಚುನಾವಣೆ
ಫಲಿತಾಂಶದ
ನಂತರ
ಬಳ್ಳಾರಿ
ಬಿಜೆಪಿ
ಕಚೇರಿಯಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ
ಬಿ.ಶ್ರೀರಾಮುಲು
ಮತ್ತು
ಬಳ್ಳಾರಿ
ಗ್ರಾಮಾಂತರ
ಕ್ಷೇತ್ರದ
ಬಿಜೆಪಿ
ಅಭ್ಯರ್ಥಿ
ಓಬಳೇಶ್
ಮುಂತಾದ
ನಾಯಕರು,
ಜನರ
ತೀರ್ಪನ್ನು
ನಾವು
ಒಪ್ಪಿಕೊಳ್ಳುತ್ತೇವೆ
ಎಂದು
ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವೇ ಬಳ್ಳಾರಿಯಲ್ಲಿ ಠಿಕಾಣಿ ಹೂಡಿ, ಜನರಿಗೆ ವಿವಿಧ ಯೋಜನೆಗಳನ್ನು ಪ್ರಕಟಿಸಿತ್ತು. ಆದ್ದರಿಂದ ಜನರು ಕಾಂಗ್ರೆಸ್ಗೆ ಅವಕಾಶ ನೀಡಿದ್ದಾರೆ. ಬಿಜೆಪಿ ಸೋಲಿನ ಸಂಪೂರ್ಣ ಹೊಣೆಯನ್ನು ನಾನು ಹೊರುತ್ತೇನೆ ಶ್ರೀರಾಮುಲು ತಿಳಿಸಿದರು. [ಬಳ್ಳಾರಿಯಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ ಚಿತ್ರಗಳು]
"ನಾವು
ಕಳೆದ
ಹತ್ತು
ವರ್ಷಗಳ
ಅವಧಿಯಲ್ಲಿ
8
ಸಾವಿರ
ಕೋಟಿ
ಅನುದಾನವನ್ನು
ಬಳ್ಳಾರಿಗೆ
ತಂದಿದ್ದೆವು.
ರಸ್ತೆ,
ಕುಡಿಯುವ
ನೀರು,
ಏತ
ನೀರಾವರಿ
ಯೋಜನೆ,
ಸೇತುವೆ
ನಿರ್ಮಾಣ
ಹೀಗೆ
ಹತ್ತು
ಹಲವಾರು
ಯೋಜನೆಗಳು
ಇನ್ನೂ
ಪ್ರಗತಿಯ
ಹಂತದಲ್ಲಿವೆ
ಇವುಗಳನ್ನು
ಕಾಂಗ್ರೆಸ್
ಸರ್ಕಾರ
ಪೂರ್ಣಗೊಳಿಸಬೇಕು"
ಎಂದು
ಒತ್ತಾಯಿಸಿದರು.
[ಬಳ್ಳಾರಿ
ಕೈವಶ,
ರೆಡ್ಡಿಪಾಳಯಕ್ಕೆ
ಮುಖಭಂಗ]
ಬಿಜೆಪಿ ಕಾರ್ಯಕರ್ತರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಮುಖಂಡರಿಗೆ, ಕಾರ್ಯಕರ್ತರಿಗೆ ಮತ್ತು ಬಿಜೆಪಿಯ ಕೇಂದ್ರ ಹಾಗೂ ರಾಜ್ಯದ ನಾಯಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಶ್ರೀರಾಮುಲು ತಿಳಿಸಿದರು.
ಜನರ ತೀರ್ಪಿಗೆ ತಲೆಬಾಗುವೆ : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರದ ಪರಾಜಿತ ಅಭ್ಯರ್ಥಿ ಓಬಳೇಶ್ ಕ್ಷೇತ್ರದ ಜನರು ನೀಡಿದ ತೀರ್ಪಿಗೆ ನಾನು ತಲೆ ಬಾಗುತ್ತೇನೆ. ಈ ಉಪ ಚುನಾವಣೆಗೆ ಮುಖ್ಯಮಂತ್ರಿ ಎರಡೆರಡು ಬಾರಿ ಪ್ರಚಾರಕ್ಕೆ ಬಂದಿದ್ದಾರೆ. 60 ಜನ ಶಾಸಕರು, ಡಜನ್ಗಟ್ಟಲೆ ಮಂತ್ರಿಗಳು ಕ್ಷೇತ್ರದಲ್ಲಿ ಬಿಡಾರ ಹೂಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಶ್ರೀರಾಮುಲು ಅವರ ಆಶಯದಂತೆ ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ಸೋಲು-ಗೆಲುವು ಮುಖ್ಯವಲ್ಲ. ಜನರು ನೀಡಿದ ತೀರ್ಪಿಗೆ ತಾವು ಬದ್ಧರಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ. ಕಾಂಗ್ರೆಸ್ಸಿನವರು ಇಲ್ಲದ ಆಮಿಷ ಒಡ್ಡಿ ಕ್ಷೇತ್ರದ ಜನರನ್ನು ಮರುಳು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವು ಜಯಗಳಿಸುತ್ತೇವೆ ಎಂದರು.