ಬ್ರೇಕಿಂಗ್ ನ್ಯೂಸ್ : ಕಲಬುರ್ಗಿ ಕೊಂದವ ಶವವಾಗಿ ಪತ್ತೆ?
ಬೆಳಗಾವಿ, ಅಕ್ಟೋಬರ್ 28 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ಆರೋಪಿ ರುದ್ರ ಪಾಟೀಲ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಬೆಳಗಾವಿಯಲ್ಲಿ ರುದ್ರ ಪಾಟೀಲ್ ರೇಖಾ ಚಿತ್ರ ಹೋಲುವ ವ್ಯಕ್ತಿಯ ಶವ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ
ಸಾಂಗ್ಲಿ
ಮೂಲದ
ರುದ್ರ
ಪಾಟೀಲ್
(32)
ಎಂ.ಎಂ.ಕಲಬುರ್ಗಿ
ಅವರ
ಹತ್ಯೆಯ
ಸಂಚು
ರೂಪಿಸಿದ್ದ
ಎಂದು
ಪೊಲೀಸರು
ಹೇಳಿದ್ದರು.
ನರೇಂದ್ರ
ಧಾಬೋಲ್ಕರ್,
ಗೋವಿಂದ
ಪನ್ಸಾರೆ
ಅವರ
ಹತ್ಯೆಯ
ಸಂಚನ್ನು
ಪಾಟೀಲ್
ರೂಪಿಸಿದ್ದ
ಎಂದು
ಕೆಲವು
ದಿನಗಳ
ಹಿಂದೆ
ಪೊಲೀಸರು
ಹೇಳಿದ್ದರು
ಮತ್ತು
ರೇಖಾಚಿತ್ರವನ್ನು
ಬಿಡುಗಡೆ
ಮಾಡಿದ್ದರು.
[ಕಲಬುರ್ಗಿ
ಹತ್ಯೆ
ಸಂಚು
ರೂಪಿಸಿದ್ದು
ರುದ್ರ
ಪಾಟೀಲ್]
ಸದ್ಯ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಣಿಕವಾಡಿ ಗ್ರಾಮದಲ್ಲಿ ಪಾಟೀಲ್ ಶವ ಪತ್ತೆಯಾಗಿದೆ. ಶವದ ತಲೆ, ಎದೆ ಮತ್ತು ಹೊಟ್ಟೆ ಭಾಗಕ್ಕೆ ಗುಂಡು ತಗುಲಿದೆ. ರುದ್ರ ಪಾಟೀಲ್ ಅವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬೆಳಗಾವಿ ಎಸ್ಪಿ ರವಿಕಾಂತೇಗೌಡ ಅವರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ['ಆಗ ಬರಹಗಾರರೆಲ್ಲ ದಿವ್ಯ ಮೌನಕ್ಕೆ ಶರಣಾಗಿದ್ದರಂತೆ']
ರುದ್ರ
ಪಾಟೀಲ್ಗಾಗಿ
ರಾಷ್ಟ್ರೀಯ
ತನಿಖಾ
ದಳ
ಮತ್ತು
ಸಿಬಿಐ
ಹುಡುಕಾಟ
ನಡೆಸುತ್ತಿದೆ.
ಸಾಂಗ್ಲಿ
ಮೂಲದ
ಈ
ವ್ಯಕ್ತಿ
ಅಕ್ರಮವಾಗಿ
ಸ್ಫೋಟಕಗಳನ್ನು
ಸಾಗಣೆ
ಮಾಡಿದ
ಆರೋಪ
ಎದುರಿಸುತ್ತಿದ್ದಾನೆ.
ರಾಷ್ಟ್ರೀಯ
ತನಿಖಾ
ದಳ
ಪಾಟೀಲ್
ಹುಡುಕಾಟಕ್ಕಾಗಿ
ರೆಡ್
ಕಾರ್ನರ್
ನೋಟಿಸ್
ಜಾರಿಗೊಳಿಸಿದೆ.
[ಗಡಿಯಲ್ಲಿ
ರುದ್ರ
ಪಾಟೀಲ್
ಗಾಗಿ
ಹುಡುಕಾಟ]
2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣ ನಗರದಲ್ಲಿರುವ ನಿವಾಸದಲ್ಲಿ ಎಂ.ಎಂ.ಕಲಬುರ್ಗಿ ಅವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಕರ್ನಾಟಕ ಸರ್ಕಾರ ಈ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.ಹತ್ಯೆಯ ಸುಳಿವು ಕೊಟ್ಟವರಿಗೆ ಸರ್ಕಾರ 5 ಲಕ್ಷ ರೂ.ಗಳ ಬಹುಮಾನವನ್ನು ಘೋಷಣೆ ಮಾಡಿದೆ.
ಎಂ.ಎಂ.ಕಲಬುರ್ಗಿ
ಹತ್ಯೆ
ಪ್ರಕರಣದ
ತನಿಖೆಯನ್ನು
ನಡೆಸುತ್ತಿರುವ
ಸಿಐಡಿ
ಕಲಬುರ್ಗಿ
ಅವರ
ಹತ್ಯೆ
ನಡೆದ
ಆಗಸ್ಟ್
30ರಂದು
ಪಾಟೀಲ್
ಬೆಳಗಾವಿಯಲ್ಲಿದ್ದ
ಎಂಬ
ಮಾಹಿತಿ
ಸಂಗ್ರಹಣೆ
ಮಾಡಿತ್ತು.
ಸದ್ಯ,
ಪತ್ತೆಯಾಗಿರುವ
ಶವಕ್ಕೂ
ರುದ್ರ
ಪಾಟೀಲ್
ಅವರ
ರೇಖಾ
ಚಿತ್ರಕ್ಕೂ
ಸಾಮ್ಯತೆ
ಇದೆ.
ಆದ್ದರಿಂದ
ಪೊಲೀಸರು
ಪರಿಶೀಲನೆ
ನಡೆಸುತ್ತಿದ್ದಾರೆ.