ಬೆಳಗಾವಿ: ಪತ್ರಕರ್ತ ಶಿವಕುಮಾರ್ ಸಾವಿಗೆ ಸಿಎಂ ಸಂತಾಪ
ಬೆಳಗಾವಿ, ಡಿ.15: ಚಳಿಗಾಲದ ಅಧಿವೇಶನ ವರದಿಗಾರಿಕೆ ಮಾಡುತ್ತಿದ್ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಹಿರಿಯ ವರದಿಗಾರ, ಸಹಾಯಕ ಸಂಪಾದಕ ಎನ್.ಡಿ.ಶಿವಕುಮಾರ್ ಅವರು ಅನಾರೋಗ್ಯದ ಕಾರಣದಿಂದ ಸೋಮವಾರ ನಿಧನ ಹೊಂದಿದ್ದಾರೆ. ಶಿವಕುಮಾರ್ ಅವರ ಅಕಾಲಿಕ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚಿಸಲಾಗಿದೆ.
ಬೆಂಗಳೂರಿನ
ಕೋರಮಂಗಲದ
ನಿವಾಸಿಯಾಗಿರುವ
ಶಿವಕುಮಾರ್
ಅವರು
ನಿಷ್ಠಾವಂತ,
ಪ್ರಾಮಾಣಿಕ
ಪತ್ರಕರ್ತ
ಎಂಬ
ಕೀರ್ತಿಗೆ
ಪಾತ್ರರಾಗಿದ್ದರು.
ಅಧಿವೇಶನ
ವರದಿಗಾಗಿ
ಆಗಮಿಸಿದ್ದ
ಶಿವಕುಮಾರ್
ಅವರಿಗೆ
ಭಾನುವಾರ
ರಾತ್ರಿ
ಡಯೇರಿಯಾ
ಕಾಣಿಸಿಕೊಂಡಿದೆ.
ತಕ್ಷಣ
ಅವರನ್ನು
ಆಸ್ಪತ್ರೆಗೆ
ದಾಖಲಿಸಲಾಯಿತಾದರೂ
ಚಿಕಿತ್ಸೆ
ಫಲಕಾರಿಯಾಗದೆ
ಸೋಮವಾರ
ಬೆಳಗ್ಗೆ
ಮೃತಪಟ್ಟಿದ್ದಾರೆ
ಎಂದು
ವೈದ್ಯರು
ತಿಳಿಸಿದ್ದಾರೆ.
ಮೃತರು
ಕೇವಲ
ನಾಲ್ಕು
ವರ್ಷಗಳ
ಹಿಂದಷ್ಟೇ
ವಿವಾಹವಾಗಿದ್ದು,
ಪತ್ನಿ
ಹಾಗೂ
ಎರಡೂವರೆ
ವರ್ಷದ
ಪುತ್ರಿಯನ್ನು
ಅಗಲಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕಳ್ಳಂಬೆಳ್ಳ ಸಮೀಪದ ನಂದಿಹಳ್ಳಿ ಮೂಲದವರಾದ ಶಿವಕುಮಾರ್ ಅವರು ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಡೆಕ್ಕನ್ ಹೆರಾಲ್ಡ್ ನಲ್ಲಿ ವೃತ್ತಿ ಆರಂಭಿಸಿದ ಶಿವಕುಮಾರ್ ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಹಿರಿಯ ವರದಿಗಾರ, ಸಹಾಯಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಶಿವಕುಮಾರ್ ಅವರು ಹಲವಾರು ತನಿಖಾ ವರದಿಗಳನ್ನು ಬರೆದಿದ್ದರು. ಇವರ ಬರವಣಿಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಶಿವಕುಮಾರ್ ಅವರು ನಾಲ್ಕು ವರ್ಷಗಳ ಹಿಂದೆ ಕ್ರೈಸ್ಟ್ ಕಾಲೇಜಿನಲ್ಲಿ ಉಪನ್ಯಾಸಕಿಯನ್ನು ವಿವಾಹವಾಗಿದ್ದು, ಎರಡೂವರೆ ವರ್ಷದ ಹೆಣ್ಣು ಮಗುವಿದೆ.
ಸಂತಾಪ:
ಎನ್.ಡಿ.ಶಿವಕುಮಾರ್
ಅವರ
ನಿಧನಕ್ಕೆ
ಬೆಳಗಾವಿ
ಅಧಿವೇಶನದ
ಉಭಯ
ಸದನಗಳಲ್ಲಿ
ಸಂತಾಪ
ವ್ಯಕ್ತಪಡಿಸಲಾಯಿತು.
ಮುಖ್ಯಮಂತ್ರಿ
ಸಿದ್ದರಾಮಯ್ಯ,
ಮಾಜಿ
ಮುಖ್ಯಮಂತ್ರಿಗಳಾದ
ಎಚ್.ಡಿ.ಕುಮಾರಸ್ವಾಮಿ,
ಜಗದೀಶ್
ಶೆಟ್ಟರ್,
ಸಚಿವರಾದ
ಆರ್.ವಿ.ದೇಶಪಾಂಡೆ,
ಮಾಜಿ
ಸಚಿವ
ಸುರೇಶ್ಕುಮಾರ್
ಸೇರಿದಂತೆ
ಪ್ರಮುಖ
ರಾಜಕೀಯ
ಪಕ್ಷಗಳ
ಮುಖಂಡರು
ಆಸ್ಪತ್ರೆಗೆ
ಭೇಟಿ
ನೀಡಿ
ಮೃತರಿಗೆ
ಶ್ರದ್ಧಾಂಜಲಿ
ಸಲ್ಲಿಸಿದರು.
ಎನ್.ಡಿ.ಶಿವಕುಮಾರ್ ಅವರ ನಿಧನಕ್ಕೆ ಬೆಂಗಳೂರು ವರದಿಗಾರರ ಕೂಟ, ಪ್ರೆಸ್ಕ್ಲಬ್ ಹಾಗೂ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿ ಶಿವಕುಮಾರ್ ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗದವರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಮೃತರ ಹುಟ್ಟೂರಾದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನಂದಿಹಳ್ಳಿ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಬೆಳಗಾವಿ ಜಿಲ್ಲಾಡಳಿತ ಎಲ್ಲಾ ಸಕಾಲಿಕ ನೆರವು ಮತ್ತು ಸಹಕಾರ ಒದಗಿಸಿದೆ.