ಮಹದಾಯಿಗೆ ಆಗ್ರಹಿಸಿ ರಾಮದುರ್ಗ ಶಾಸಕ ಅಶೋಕ್ ರಾಜೀನಾಮೆ
ರಾಮದುರ್ಗ(ಬೆಳಗಾವಿ), ಜುಲೈ 30: ಮಹದಾಯಿ ಯೋಜನೆಯಲ್ಲಿ ರಾಜ್ಯಕ್ಕೆ ಆದ ಅನ್ಯಾಯವನ್ನು ವಿರೋಧಿಸಿ ಬೆಳಗಾವಿ ಜಿಲ್ಲೆ ರಾಮದುರ್ಗದ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಒನ್ ಇಂಡಿಯಾ ಕನ್ನಡ ಜೊತಗೆ ಮಾತನಾಡಿದ ಅವರು, 'ನಾನು ನನ್ನ ಕ್ಷೇತ್ರದಲ್ಲಿರುವುದರಿಂದ ತಹಸೀಲ್ದಾರ್ ಮೂಲಕ ಸ್ಪೀಕರ್ ಗೆ ರಾಜೀನಾಮೆ ಪತ್ರವನ್ನು ನೀಡುತ್ತಿದ್ದೇನೆ. [ಗ್ಯಾಲರಿ: ಮಹದಾಯಿ ತೀರ್ಪು ಖಂಡಿಸಿ ರೈತರ ಆಕ್ರೋಶ]
ಒಂದು
ವೇಳೆ
ಖುದ್ದಾಗಿ
ಬಂದು
ರಾಜೀನಾಮೆ
ಸಲ್ಲಿಸಬೇಕೆಂದು
ಸಭಾಧ್ಯಕ್ಷರು
ಹೇಳಿದರೆ
ಬೆಂಗಳೂರಿಗೆ
ತೆರಳಿ
ಖುದ್ದಾಗಿ
ಸ್ಪೀಕರ್
ಅವರಿಗೆ
ರಾಜೀನಾಮೆ
ಪತ್ರವನ್ನು
ಸಲ್ಲಿಸುವೆ
ಎಂದು
ಹೇಳಿದರು.
[ಮಹದಾಯಿ
ನೀರು
ಹಂಚಿಕೆ
:
ಕಥೆ
ವ್ಯಥೆ
ಟೈಮ್
ಲೈನ್]
ಕಳಸಾ
ಬಂಡೂರಿ
ಕೇವಲ
ಪ್ರತಿಭಟನೆಗಳು
ಮಾಡಿದರೇ
ಮಾತ್ರ
ಪರಿಹಾರ
ಆಗುವುದಿಲ್ಲ
ಈ
ಭಾಗದ
ಎಲ್ಲಾ
ಶಾಸಕರು,
ಸಂಸದರು,
ಜಿಲ್ಲಾ,
ತಾಲೂಕು
ಮತ್ತು
ಗ್ರಾಮ
ಪಂಚಾಯಿತಿಗಳ
ಸದಸ್ಯರುಗಳು
ರಾಜೀನಾಮೆ
ನೀಡುವ
ಮೂಲಕ
ಪ್ರಧಾನಮಂತ್ರಿಗಳಿಗೆ
ಮನವರಿಕೆ
ಮಾಡಿಕೊಡಬೇಕಿದೆ
ಎಂದರ.
ಮಹದಾಯಿ ಕುಡಿಯುವ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಇದರಿಂದ ನಾನು ಯಾರ ಒತ್ತಡಕ್ಕೆ ಒಳಗಾಗದೆ ಸ್ವ-ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆಂದು ಹೇಳಿದರು.
ಮಹದಾಯಿಗೆ ಬೆಂಬಲ ನೀಡಲು 2 ಜಿಲ್ಲಾ ಪಂಚಾಯಿತಿಯ ಸದಸ್ಯರು, 9 ತಾಲೂಕು ಮಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, 13 ಜನ ಪುರಸಭೆ ಸದಸ್ಯರು, 22 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗು ಉಪಾಧ್ಯಕ್ಷರು ಸಾಮೂಹಿಕವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಂದು ತಿಳಿಸಿದರು.