ಬೆಂಗಳೂರಿನಲ್ಲಿ ಹಾಲು ತರಲು ಹೋದ ಮಹಿಳೆ ಕೊಲೆ
ಬೆಂಗಳೂರು, ಅ.28 : ಮಂಗಳವಾರ ಮುಂಜಾನೆ ಹಾಲು ತರಲು ಮನೆಯಿಂದ ಹೊರಗೆ ಹೋಗಿದ್ದ ಮಹಿಳೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಕೊಲೆಯಾದ
ಮಹಿಳೆಯನ್ನು
ಶಂಕರನಗರದ
4ನೇ
ಕ್ರಾಸ್
ನಿವಾಸಿ
ಮುತ್ತುಲಕ್ಷ್ಮೀ
(52)
ಎಂದು
ಗುರುತಿಸಲಾಗಿದೆ.
ಇಂದು
ಮುಂಜಾನೆ
5.30ರ
ಸುಮಾರಿಗೆ
ಮುತ್ತುಲಕ್ಷ್ಮೀ
ಅವರು
ಹಾಲು
ತರಲು
ಮೂರನೇ
ಮಹಡಿಯಲ್ಲಿರುವ
ತಮ್ಮ
ಮನೆಯಿಂದ
ಅಂಗಡಿಗೆ
ಬಂದಿದ್ದರು.
ಬೆಳಗ್ಗೆ 6.15ರ ಸುಮಾರಿಗೆ ಮುತ್ತುಲಕ್ಷ್ಮೀ ಅವರ ಮೃತದೇಹ ಅವರ ಮನೆ ಸಮೀಪವಿರುವ ಮೋರಿಯ ಬಳಿ ಪತ್ತೆಯಾಗಿದೆ. ಸ್ಥಳೀಯರು ಇದನ್ನು ಗಮನಿಸಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಸರಗಳ್ಳರು ಈ ಕೊಲೆ ಮಾಡಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಮಹಾಕ್ಷ್ಮೀ ಲೇಔಟ್ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಬೆಳ್ಳಂಬೆಳಗ್ಗೆಯೇ ಹತ್ಯೆ ನಡೆದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.