2017ರ ಜೂನ್ ತಿಂಗಳಿನಲ್ಲಿ ವಿಶ್ವ ಕನ್ನಡ ಸಮ್ಮೇಳನ
ಬೆಂಗಳೂರು, ಅಕ್ಟೋಬರ್ 28: 2017 ರ ಜೂನ್ ತಿಂಗಳಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ
ಸಮ್ಮೇಳನವು ಮೂರು ದಿನಗಳ ಕಾಲ ನಡೆಯುತ್ತದೆ. 2017 ರಲ್ಲಿ ದಾವಣಗೆರೆ ಅಥವಾ ಬಳ್ಳಾರಿಯಲ್ಲಿ ಸಮ್ಮೇಳನ ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ವಿಶ್ವ
ಕನ್ನಡ
ಸಮ್ಮೇಳನಕ್ಕೆ
30
ಕೋಟಿ
ಹಣ
ಮೀಸಲಿರಿಸಲಾಗಿದೆ.
2011
ರಲ್ಲಿ
ಬೆಳಗಾವಿಯಲ್ಲಿ
ನಡೆದ
ಸಮ್ಮೇಳನಕ್ಕೆ
35
ಕೋಟಿ
ಖರ್ಚಾಗಿತ್ತು.
ಈ
ಬಾರಿಯೂ
35
ಕೋಟಿ
ಅಂದಾಜಿಸಲಾಗಿದೆ
ಎಂದು
ಹೇಳಿದರು.
ಕಾರ್ಯಕ್ರಮ ಯಶಸ್ವಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದ್ದು, ಸಾಹಿತಿಗಳು, ಜನಪ್ರತಿನಿಧಿಗಳು ಹಾಗೂ ಕಲಾವಿದರನ್ನು ಕರೆದು ಈ ಸಂಬಂಧ ಸಮಾಲೋಚನೆ ಸಭೆ ನಡೆಸಲು ಸಿಎಂ ಸೂಚಿಸಿದ್ದಾರೆ ಎಂದು ಸಚಿವೆ ಉಮಾಶ್ರೀ ಹೇಳಿದರು.
Comments
vishwa kannada sammelana umashree ballari davanagere karnataka government ವಿಶ್ವ ಕನ್ನಡ ಸಮ್ಮೇಳನ ಉಮಾಶ್ರೀ ಬಳ್ಳಾರಿ ದಾವಣಗೆರೆ ಕರ್ನಾಟಕ ಸರ್ಕಾರ
English summary
Conference or the "Vishwa Kannada Sammelana" as it is popularly known will be held in June 2017, said Kannada and culture minister Umashree in a media conference
Story first published: Friday, October 28, 2016, 11:12 [IST]