ಆತ್ಮಹತ್ಯೆಗೆ ಯತ್ನಿಸಿದ ಪಿಎಸ್ ಐ ರೂಪಾ ಆರೋಗ್ಯದಲ್ಲಿ ಚೇತರಿಕೆ
ಬೆಂಗಳೂರು, ಜುಲೈ 19: ಡಿವೈಎಸ್ಪಿ ಕಲ್ಲಪ್ಪ, ಎಂಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಕಣ್ಮುಂದೆ ಇರುವಾಗಲೇ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯ ಪಿಎಸ್ ಐ ರೂಪಾ ತುಂಬದ ಅವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಇತ್ತೀಚಿನ ವರದಿಯಂತೆ ರೂಪಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಕರ್ತವ್ಯ
ನಿರತರಾಗಿದ್ದ
ಸಂದರ್ಭದಲ್ಲೇ
ರೂಪಾ
ಅವರು
ನಿದ್ರೆ
ಮಾತ್ರೆ
ಸೇವಿಸಿ
ಆತ್ಮಹತ್ಯೆಗೆ
ಯತ್ನಿಸಿದ
ಘಟನೆ
ನಡೆದಿದೆ.
ವಿಜಯನಗರ
ಠಾಣೆಯ
ಪೊಲೀಸ್
ಸಬ್
ಇನ್ಸ್
ಪೆಕ್ಟರ್
ಅವರು
ನಿದ್ರೆ
ಮಾತ್ರೆ
ಸೇವಿಸಿದ
ಬಳಿಕ,
ಡಿವೈಎಸ್ಪಿ
ಗಣಪತಿ
ಅವರ
ಹಾದಿ
ಹಿಡಿಯುತ್ತಿದ್ದೇನೆ,
ನಿಮಗೆಲ್ಲ
ಬುದ್ಧಿ
ಬರಲಿ
ಎಂದು
ಹೇಳಿದ್ದಾರೆ.[ಗಣಪತಿ
ಆತ್ಮಹತ್ಯೆ
:
ಕೆಜೆ
ಜಾರ್ಜ್
ವಿರುದ್ಧ
ಎಫ್
ಐಆರ್]
ರೂಪಾ ಅವರ ಆತ್ಮಹತ್ಯೆ ಯತ್ನಕ್ಕೆ ಹಿರಿಯ ಅಧಿಕಾರಿಗಳ ಕಿರುಕುಳ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಸ್ವಸ್ಥಗೊಂಡ ರೂಪಾ ಅವರನ್ನು ರಾಜಾಜಿನಗರದ ಸುಗುಣ ಆಸ್ಪತ್ರೆಗೆ ಸೇರಿಸಲಾಗಿದ್ದು, ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ರೂಪಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ಡಾ. ರವೀಂದ್ರ ಅವರು ಹೇಳಿದ್ದಾರೆ.[ಪೊಲೀಸರ ಆತ್ಮಹತ್ಯೆಗೆ ಪ್ರಮುಖ ಕಾರಣಗಳೇನು?]
ಘಟನೆ ಹಿನ್ನಲೆ : ಇತ್ತೀಚೆಗೆ ಕಳ್ಳತನ ಪ್ರಕರಣವೊಂದರಲ್ಲಿ ಜಪ್ತಿ ಮಾಡಿದ ಮೊಬೈಲ್ ಫೋನ್ ಗೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣಾಧಿಕಾರಿ ಸಂಜೀವ್ ಗೌಡ ಹಾಗೂ ರೂಪಾ ಅವರ ನಡುವೆ ಜಗಳವಾಗಿತ್ತು. ಜೊತೆಗೆ ರೂಪಾ ಅವರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ರಿಜಿಸ್ಟ್ರಿಯಲ್ಲೂ ಠಾಣಾಧಿಕಾರಿ ನಮೂದಿಸಿದ್ದರು.
ಇದರಿಂದ ಮನನೊಂದಿದ್ದ ರೂಪಾ ಅವರು ಸುಮಾರು 23 ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ, ಠಾಣೆಯಿಂದ ಪೊಲೀಸ್ ವಸತಿ ಸಮುಚ್ಚಯಕ್ಕೆ ತೆರಳಿದ್ದಾರೆ. ಆಕೆ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದನ್ನು ಕೇಳಿಸಿಕೊಂಡ ಇನ್ಸ್ ಪೆಕ್ಟರ್ ಒಬ್ಬರು ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಮನೆಗೆ ಬರುತ್ತಲೇ ಕುಸಿದು ಬಿದ್ದ ರೂಪಾರನ್ನು ಇನ್ಸ್ ಪೆಕ್ಟರ್ ಅವರು ಆಸ್ಪತ್ರೆಗೆ ಸೇರಿಸಿದ್ದಾರೆ.
ಆರೋಗ್ಯದಲ್ಲಿ ಚೇತರಿಕೆ: ಸುಗುಣ ಆಸ್ಪತ್ರೆಗೆ ಡಿಸಿಪಿ ಸಂದೀಪ್ ಪಾಟೀಲ್, ಬೆಂಗಳೂರು ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಅವರು ಭೇಟಿ ನೀಡಿ, ರೂಪಾ ಅವರ ಆರೋಗ್ಯ ವಿಚಾರಿಸಿದ್ದಾರೆ. ರೂಪಾ ಅವರು ನೋವು ನಿವಾರಕಾ ಮಾತ್ರೆಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದ್ದು, ಈಗ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆಯುಕ್ತ ಚರಣ್ ರೆಡ್ಡಿ ಅವರು ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ತಿಳಿಸಿದರು.