ರೌಡಿಶೀಟರ್ ನಾಗ ಮತ್ತು ಆತನ ಪುತ್ರರಿಗೆ ಮತ್ತಷ್ಟು ದಿನ ಜೈಲೇ ಗತಿ
ಪೊಲೀಸರು ಬಂಧಿತರನ್ನು ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ. ಇದಕ್ಕಾಗಿ ಅವರನ್ನು ತಮಿಳುನಾಡಿಗೆ ಕರೆದೊಯ್ಯಬೇಕು. ಹೀಗಾಗಿ ಇನ್ನೂ ಒಂದಷ್ಟು ದಿನ ಕಸ್ಟಡಿ ಅವಧಿ ವಿಸ್ತರಿಸಬೇಕು ಎಂದು ಕೋರಿಕೊಂಡರು.
ಬೆಂಗಳೂರು, ಮೇ 23: ರೌಡಿಶೀಟರ್ ವಿ.ನಾಗರಾಜ್ ಅಲಿಯಾಸ್ ನಾಗ ಹಾಗೂ ಆತನ ಇಬ್ಬರು ಮಕ್ಕಳು ಇನ್ನೂ ಒಂದಷ್ಟು ದಿನ ಜೈಲಿನಲ್ಲೇ ಕಳೆಯಬೇಕಾಗಿ ಬಂದಿದೆ. ನಾಗ ಮತ್ತು ಆತನ ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿಯ ಪೊಲೀಸ್ ಕಸ್ಟಡಿ ಅವಧಿಯನ್ನು ಮೇ 25ರವರೆಗೆ ವಿಸ್ತರಿಸಿ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.
ಈ ಹಿಂದೆ ನಾಗಾ ಬಂಧಿತನಾದಾಗ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಆದರೆ ಇಂದು ನಾಗನ ಕಸ್ಟಡಿ ಅವಧಿ ಪೂರ್ಣಗೊಂಡಿದ್ದರಿಂದ ಆತನನ್ನು ಹೆಣ್ಣೂರು ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಈ ವೇಳೆ ಪೊಲೀಸರು ಬಂಧಿತರನ್ನು ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ. ಇದಕ್ಕಾಗಿ ಅವರನ್ನು ತಮಿಳುನಾಡಿಗೆ ಕರೆದೊಯ್ಯಬೇಕು. ಹೀಗಾಗಿ ಇನ್ನೂ ಒಂದಷ್ಟು ದಿನ ಕಸ್ಟಡಿ ಅವಧಿ ವಿಸ್ತರಿಸಬೇಕು ಎಂದು ಕೋರಿಕೊಂಡರು.
ಪೊಲೀಸರ
ಬೇಡಿಕೆ
ಮೇರೆಗೆ
11ನೇ
ಎಸಿಎಂಎಂ
ನ್ಯಾಯಾಲಯ
ನಾಗಾ
ಬಂಧನದ
ಅವಧಿಯನ್ನು
ಮೇ
25ರ
ವರೆಗೆ
ಮುಂದೂಡಿದೆ.
ಇನ್ನು
ವಿಚಾರಣೆಗೆ
ಕರೆತಂದಿದ್ದ
ವೇಳೆ
ನಾಗಾ
ಕೋರ್ಟಿನಿಂದ
ಹೊರಗೆ
ಬರುವಾಗ
ಮಾಧ್ಯಮಗಳನ್ನು
ಕಂಡು
ಕಣ್ಣೀರಿಟ್ಟಿ
ಪ್ರಸಂಗವೂ
ನಡೆಯಿತು.