ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕಟ್ಟಡ ಕುಸಿತ: ಓನರ್, ಕಂಟ್ರ್ಯಾಕ್ಟರ್ ಬಂಧನ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 05: ಬೆಳ್ಳಂದೂರು ಗೇಟ್ ಮಾರತ್ತಹಳ್ಳಿ ರಿಂಗ್ ರಸ್ತೆ, ಇಕೋ ಸ್ಪೇಸ್ ಹತ್ತಿರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದಿರುವ ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 4ಕ್ಕೇರಿದೆ. ಈ ನಡುವೆ ಕಟ್ಟಡದ ಮಾಲೀಕ ಹಾಗೂ ಗುತ್ತಿಗೆದಾರನನ್ನು ಎಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಗುರುವಾರದ ಅಪ್ಡೇಟ್ಸ್ ಹೀಗಿದೆ:

ಬುಧವಾರ ಮಧ್ಯಾಹ್ನ 16 ಜನ ಇದ್ದ ಮಾಹಿತಿ ಅಗ್ನಿಶಾಮಕದಳಕ್ಕೆ ಸಿಕ್ಕಿತು. 3 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ತೀವ್ರವಾಗಿ ಗಾಯಗೊಂಡ ಓರ್ವ ವ್ಯಕ್ತಿ ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. [ಬೆಳ್ಳಂದೂರು ಕಟ್ಟಡ ಕುಸಿತ: ಅಗ್ನಿ ಶಾಮಕದ ಸಿಬ್ಬಂದಿಗೆ ಶ್ಲಾಘನೆ]

ಅವಶೇಷಗಳ ಅಡಿಯಲ್ಲಿ ಇನ್ನೂ 6 ಮಂದಿ ಇರುವ ಶಂಕೆ ವ್ಯಕ್ತವಾಗಿದೆ. ಒಟ್ಟು 6 ಜನರನ್ನು ರಕ್ಷಣೆ ಮಾಡಲಾಗಿದೆ ಎಂದುಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತ ಮುನಿವೀರಪ್ಪ ಹೇಳಿದ್ದಾರೆ.

ಶ್ರೀನಿವಾಸ ರೆಡ್ಡಿ ಬಂಧನ

ಶ್ರೀನಿವಾಸ ರೆಡ್ಡಿ ಬಂಧನ

2015ರ ಆಗಸ್ಟ್ 13ರಂದು ಅನುಮತಿ ಪಡೆದಿರುವ ವಿನಯ್ ಕುಮಾರ್ ದೋಂಗಲು, ಶ್ರೀನಿವಾಸ ರೆಡ್ಡಿ ಅವರು 6 ತಿಂಗಳ ಹಿಂದೆ ಕಾಮಗಾರಿ ಆರಂಭಿಸಿದ್ದರು. [ಗ್ಯಾಲರಿ: ಬೆಳ್ಳಂದೂರು ಕಟ್ಟಡ ಕುಸಿತದ ಅವಶೇಷಗಳು]

 3 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ

3 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ

16 ಜನ ಇದ್ದ ಮಾಹಿತಿ ಅಗ್ನಿಶಾಮಕದಳಕ್ಕೆ ಸಿಕ್ಕಿತು. 3 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ತೀವ್ರವಾಗಿ ಗಾಯಗೊಂಡ ಓರ್ವ ವ್ಯಕ್ತಿ ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ

ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ

ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವ ಶಂಕೆ ವ್ಯಕ್ತವಾಗಿದೆ. 3 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು 5 ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತೇನೆ. ಮೇಯರ್ ಜತೆಗೂ ಮಾತನಾಡುತ್ತೇನೆ ಎಂದ ಶಾಸಕ ರಘು ಆಚಾರ್

ಕಟ್ಟಡ ಕುಸಿತ: ಅಧಿಕಾರಿಗಳನ್ನು ವಜಾ ಮಾಡಿದ ಮೇಯರ್

ಕಟ್ಟಡ ಕುಸಿತ: ಅಧಿಕಾರಿಗಳನ್ನು ವಜಾ ಮಾಡಿದ ಮೇಯರ್

ಮಹದೇವಪುರ ವಲಯದ ಬಿಬಿಎಂಪಿ ಸಹಾಯಕ ಇಂಜಿನಿಯರ್(ಎಇ) ರಾಘವೇಂದ್ರ, ಎಇಇ ಕೋದಂಡ ರೆಡ್ಡಿ ಸಸ್ಪೆಂಡ್ ಮಾಡಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಅದೇಶ ಹೊರಡಿಸಿದ್ದಾರೆ.

ನೆರೆ ರಾಜ್ಯದವರಿಂದ ನಿರ್ಮಾಣ ಕಾರ್ಯ

ನೆರೆ ರಾಜ್ಯದವರಿಂದ ನಿರ್ಮಾಣ ಕಾರ್ಯ

ಇಲ್ಲಿನ ಬಹುತೇಕ ಅಪಾರ್ಟ್​ವೆುಂಟ್​ಗಳು ನೆರೆ ರಾಜ್ಯದವರು ಹಾಗೂ ಅನಿವಾಸಿ ಭಾರತೀಯರ ಒಡೆತನದಲ್ಲಿವೆ. ಬಿಲ್ಡರ್​ಗಳು ಭೂ ಮಾಲೀಕರ ಬಳಿ ಗುತ್ತಿಗೆ ಆಧಾರದಲ್ಲಿ ನಿವೇಶನ ಪಡೆದು ಕಟ್ಟಡಗಳನ್ನು ನಿರ್ವಿುಸುತ್ತಾರೆ ಎಂಬ ಮಾಹಿತಿ ಬಹಿರಂಗ

English summary
A Five-storey building collapsed near Bellandur gate, Eco space, Marathalli outer Ring road, Bengaluru, killing four and injuring several others said. Bengaluru Additional Police Commissioner P Harikrishnan told reporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X