ಬೆಂಗಳೂರು ನಗರಕ್ಕೆ ಮೂರು ಫ್ಲೈಓವರ್ ಭಾಗ್ಯ
ಬೆಂಗಳೂರು, ಫೆ. 25 : ಬೆಂಗಳೂರು ನಗರದಲ್ಲಿ ಮೂರು ಫ್ಲೈ ಓವರ್ಗಳನ್ನು ನಿರ್ಮಾಣ ಮಾಡಲು ನೆರವು ನೀಡುವಂತೆ ಸಚಿವ ಅನಂತ ಕುಮಾರ್ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಮಂಗಳವಾರ
ಕೇಂದ್ರ
ರಾಸಾಯನಿಕ
ಮತ್ತು
ರಸಗೊಬ್ಬರ
ಸಚಿವ
ಅನಂತ
ಕುಮಾರ್
ನೇತೃತ್ವದ
ನಿಯೋಗ
ಸಚಿವ
ನಿತಿನ್
ಗಡ್ಕರಿ
ಅವರನ್ನು
ಭೇಟಿ
ಮಾಡಿ
ಈ
ಕುರಿತು
ಮನವಿ
ಸಲ್ಲಿಸಿದೆ.
ಬೆಂಗಳೂರು
ನಗರದಲ್ಲಿ
ವಾಹನ
ದಟ್ಟಣೆ
ಹೆಚ್ಚಾಗಿದೆ.
ಆದ್ದರಿಂದ
ಮೂರು
ಫ್ಲೈ
ಓವರ್
ನಿರ್ಮಾಣ
ಮಾಡಲು
ನೆರವು
ನೀಡುವಂತೆ
ಮನವಿ
ಮಾಡಿದ್ದಾರೆ.
ಮನವಿಯಲ್ಲೇನಿದೆ? : ಬೆಂಗಳೂರಿನ ಸಿಲ್ಕ್ ಬೋರ್ಡ್ನಿಂದ ಕಂಟೊನ್ಮೆಂಟ್, ಕೆಆರ್ಪುರಂನಿಂದ ಯಶವಂತಪುರ ಹಾಗು ವರ್ತೂರು ಕೋಡಿಯಿಂದ ಜ್ಞಾನಭಾರತಿ ಕ್ಯಾಂಪಸ್ವರೆಗೆ ಒಟ್ಟು 75 ಕಿ.ಮೀ ಉದ್ದದ 3 ಫ್ಲೈ ಓವರ್ ನಿರ್ಮಾಣ ಮಾಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. [ಬೆಂಗಳೂರಿನ 10 ಫ್ಲೈ ಓವರ್ ದುರಸ್ತಿ]
ರಾಜ್ಯ
ಸರ್ಕಾರ
ಈ
ಯೋಜನೆಗೆ
ಸಂಪೂರ್ಣ
ಸಹಕಾರ
ನೀಡಲಿದ್ದು,
ಯೋಜನೆಗಳಿಗೆ
ಕೇಂದ್ರ
ಸರ್ಕಾರವೂ
ನೆರವು
ನೀಡಬೇಕು
ಎಂದು
ನಿಯೋಗ
ನಿತಿನ್
ಗಡ್ಕರಿ
ಅವರಿಗೆ
ಮನವಿ
ಮಾಡಿದೆ.
ಬೆಂಗಳೂರು
ನಗರ
ಉಸ್ತುವಾರಿ
ಸಚಿವ
ರಾಮಲಿಂಗಾ
ರೆಡ್ಡಿ,
ಮೂಲಸೌಕರ್ಯ
ಸಚಿವ
ರೋಷನ್
ಬೇಗ್,
ಬಿಬಿಎಂಪಿ
ಮೇಯರ್
ಎನ್.ಶಾಂತಕುಮಾರಿ
ಮುಂತಾದವರು
ಈ
ನಿಯೋಗದಲ್ಲಿದ್ದರು.
ರೈಲ್ವೆ ನಿಲ್ದಾಣಕ್ಕೆ ರಾಯಣ್ಣ ಹೆಸರು : ನಿತಿನ್ ಗಡ್ಕರಿ ಅವರ ಭೇಟಿ ನಂತರ ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದ ನಿಯೋಗ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವೆಂದು ಮರುನಾಮಕರಣ ಮಾಡಬೇಕು ಎಂದು ಮನವಿ ಸಲ್ಲಿಸಿದೆ.
ಕೇಂದ್ರ
ಗೃಹ
ಸಚಿವ
ರಾಜನಾಥ್
ಸಿಂಗ್
ಅವರನ್ನು
ಭೇಟಿ
ಮಾಡಿ,
ಬೆಂಗಳೂರಿನಲ್ಲಿ
ರಾಷ್ಟ್ರೀಯ
ಭದ್ರತಾ
ಪಡೆಯ
(ಎನ್ಎಸ್ಜಿ)
ದಕ್ಷಿಣ
ವಲಯದ
ಮುಖ್ಯ
ಕಚೇರಿಯನ್ನು
ಸ್ಥಾಪಿಸಬೇಕು
ಎಂದು
ಮನವಿ
ಸಲ್ಲಿಸಲಾಗಿದೆ.