ಬೆಂಗಳೂರು : ಮಂಗಳವಾರ 3 ಕಡೆ ಸರಗಳ್ಳರ ಕೈಚಳಕ
ಬೆಂಗಳೂರು, ಜೂ.30 : ಬೆಂಗಳೂರಿಗೆ ಸರಗಳ್ಳರು ಮತ್ತೆ ಬಂದಿದ್ದಾರೆ. ಮಂಗಳವಾರ ನಗರದ ಮೂರು ಕಡೆ ಸರಗಳ್ಳತನ ನಡೆದಿದೆ. ಹಿಂದಿನ ಪ್ರಕರಣಗಳಂತೆ ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.
ಬನಶಂಕರಿ,
ಚಂದ್ರಾ
ಲೇಔಟ್,
ಮಹಾಲಕ್ಷ್ಮೀ
ಲೇಔಟ್ಗಳಲ್ಲಿ
ಮಂಗಳವಾರ
ಸರಗಳ್ಳತನ
ನಡೆದಿದೆ.
ಸರಗಳ್ಳರನ್ನು
ಗೂಂಡಾಕಾಯ್ದೆ
ಅನ್ವಯ
ಬಂಧಿಸಲಾಗುತ್ತದೆ
ಎಂದು
ನಗರ
ಪೊಲೀಸ್
ಆಯುಕ್ತ
ಎಂ.ಎನ್.ರೆಡ್ಡಿ
ಈಗಾಗಲೇ
ಎಚ್ಚರಿಕೆ
ನೀಡಿದ್ದಾರೆ.
[ಸರಗಳ್ಳರ
ವಿರುದ್ಧ
ಗೂಂಡಾ
ಕಾಯ್ದೆ]
ಬನಶಂಕರಿ : ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆ ಬಳಿ ಇದ್ದ 12 ಗ್ರಾಂ ಚಿನ್ನದ ಸರವನ್ನು ದೋಚಿ ಇಬ್ಬರು ಪರಾರಿಯಾಗಿದ್ದಾರೆ. ದ್ವಿಚಕ್ರವಾಹನದಲ್ಲಿ ಕಳ್ಳರು ಆಗಮಿಸಿದ್ದರು ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. [1 ಗಂಟೆಯಲ್ಲಿ 10 ಕಡೆ ಸರಗಳ್ಳತನ]
ಚಂದ್ರ ಲೇಔಟ್ : ವಿಳಾಸ ಕೇಳುವ ನೆಪದಲ್ಲಿ ಬಂದು 55 ಗ್ರಾಂ ಸರವನ್ನು ಕದ್ದಿರುವ ಘಟನೆ ಚಂದ್ರಾಲೇಔಟ್ನಲ್ಲಿ ನಡೆದಿದೆ. ಬೆಳಗ್ಗೆ 11.15 ಸುಮಾರಿಗೆ ಸುಮಿತ್ರ (60) ಅವರ ಬಳಿ ಇದ್ದ ಸರವನ್ನು ಕಳ್ಳರು ಅಪಹರಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್ : ಮಹಾಲಕ್ಷ್ಮೀ ಲೇಔಟ್ನಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಅಂಗಡಿಯಿಂದ ಮನೆಗೆ ವಾಪಸ್ ಆಗುತ್ತಿದ್ದ ಸಾವಿತ್ರಮ್ಮ ಅವರ ಬಳಿ ಬಂದ ಕಳ್ಳರು ಸುಮಾರು 40 ಗ್ರಾಂ ಚಿನ್ನದ ಸರವನ್ನು ದೋಚಿದ್ದಾರೆ.