ವಿದ್ಯಾರ್ಥಿನಿ ಮೇಲೆ ಹಲ್ಲೆ : ಯಶವಂತಪುರ ಎಸಿಪಿ ಅಮಾನತು
ಬೆಂಗಳೂರು, ಫೆಬ್ರವರಿ 7 : ತಾಂಜಾನಿಯ ಮೂಲದ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಯಶವಂತಪುರ ವಿಭಾಗದ ಎಸಿಪಿಯವರನ್ನು ಅಮಾನತು ಮಾಡಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 6 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದಿ, 9 ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು
ನಗರ
ಪೊಲೀಸ್
ಆಯುಕ್ತ
ಎನ್.ಎಸ್.ಮೇಘರಿಕ್
ಅವರು,
ಯಶವಂತಪುರ
ಉಪವಿಭಾಗದ
ಎಸಿಪಿ
ಅಶೋಕ
ನಾರಾಯಣ
ಪಿಸೆ
ಅವರನ್ನು
ಅಮಾತನುಗೊಳಿಸಿ
ಶನಿವಾರ
ಆದೇಶ
ಹೊರಡಿಸಿದ್ದಾರೆ.
ಕರ್ತವ್ಯಲೋಪ
ಎಸಗಿದ
ಆರೋಪದ
ಮೇಲೆ
ಅಶೋಕ
ನಾರಾಯಣ
ಅವರನ್ನು
ಅಮಾನತು
ಮಾಡಲಾಗಿದೆ.
['ವಿದ್ಯಾರ್ಥಿನಿ
ಮೇಲೆ
ಜನಾಂಗೀಯ
ದ್ವೇಷದಿಂದ
ಹಲ್ಲೆ
ನಡೆದಿಲ್ಲ']
ಜನವರಿ 31ರಂದು ಹೆಸರಘಟ್ಟ ರಸ್ತೆಯಲ್ಲಿ ಅಪಘಾತ ಸಂಭವಿಸಿ, ಗಲಾಟೆ ನಡೆದರೂ ಎಸಿಪಿ ಅವರು ಸ್ಥಳಕ್ಕೆ ತೆರಳಿರಲಿಲ್ಲ. ಪೊಲೀಸರಿಂದ ಆದ ಲೋಪಗಳ ಬಗ್ಗೆ ಇಲಾಖಾ ತನಿಖೆ ನಡೆಸಿ ವರದಿ ಕೊಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರು ಹೆಚ್ಚುವರಿ ಪೊಲೀಸ್ ಕಮಿಷನರ್ ಚರಣ್ ರೆಡ್ಡಿ ಅವರಿಗೆ ಸೂಚಿಸಿದ್ದರು. ವರದಿ ಆಧರಿಸಿ ಎಸಿಪಿ ಅಮಾನತುಗೊಳಿಸಲಾಗಿದೆ. [ರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದ ಬೆಂಗಳೂರಿಗರು]
ಜನರ ಗಲಾಟೆ ಬಗ್ಗೆ ಮಾಹಿತಿ ಪಡೆಯಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು ಜನವರಿ 31ರಂದು ಎಸಿಪಿಗೆ ಕರೆ ಮಾಡಿದ್ದರು. ಆಗ ಅವರು ಅಗತ್ಯ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ ಎಂದು ಸುಳ್ಳು ಹೇಳಿದ್ದರು. [ವಿದ್ಯಾರ್ಥಿನಿ ಮೇಲೆ ಹಲ್ಲೆ : 9 ಮಂದಿ ಬಂಧನ, ಮೂವರ ಅಮಾನತು]
ಅಪಘಾತದ ಬಗ್ಗೆ ತಕ್ಷಣವೇ ಪ್ರಾಥಮಿಕ ಮಾಹಿತಿ ಕೊಡಿ ಎಂದು ಆಯುಕ್ತರು ಕೇಳಿದಾಗ ಎಸಿಪಿ ಅಸಮರ್ಪಕ ಉತ್ತರ ನೀಡಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಕೋಪಗೊಂಡಿದ್ದ ಆಯುಕ್ತರು, ನೀವಿನ್ನೂ ಘಟನಾ ಸ್ಥಳಕ್ಕೆ ಹೋಗಿಯೇ ಇಲ್ಲ. ಮೊದಲು ಅಲ್ಲಿಗೆ ಹೋಗಿ ಕರ್ತವ್ಯ ನಿರ್ವಹಿಸಿ ಎಂದು ಸೂಚಿಸಿದ್ದರು. ಆದ್ದರಿಂದ, ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅಮಾನತುಗೊಳಿಸಲಾಗಿದೆ.