ಹೊಸ ಭಾರತದ ಉದಯ! ಮೋದಿಗೆ ಹ್ಯಾಟ್ಸಾಫ್ ಎಂದ ರಜನಿ
ಪ್ರಧಾನಿ ನರೇಂದ್ರ ಮೋದಿ ಅವರು ನೋಟುಗಳ ಮಾನ್ಯತೆ ರದ್ದು ಪಡಿಸಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಿರುವುದನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುಕ್ತವಾಗಿ ಸ್ವಾಗತಿಸಿದ್ದಾರೆ.
ಬೆಂಗಳೂರು, ನವೆಂಬರ್ 09: ಪ್ರಧಾನಿ ನರೇಂದ್ರ ಮೋದಿ ಅವರು ನೋಟುಗಳ ಮಾನ್ಯತೆ ರದ್ದು ಪಡಿಸಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಿರುವುದನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುಕ್ತವಾಗಿ ಸ್ವಾಗತಿಸಿದ್ದಾರೆ.
ಮಂಗಳವಾರ(ನವೆಂಬರ್
8)
ಮಧ್ಯರಾತ್ರಿಯಿಂದ
500
ಹಾಗೂ
1000
ರು
ಮುಖಬೆಲೆಯ
ನೋಟುಗಳು
ಬೆಲೆ
ಕಳೆದುಕೊಂಡು
ಬರೀ
ಕಾಗದದ
ಚೂರುಗಳಾಗಿವೆ.
ನವೆಂಬರ್
10ರಿಂದ
500
ಹಾಗೂ
ರೂ.2000
ರು
ಮುಖ
ಬೆಲೆಯ
ಹೊಸ
ನೋಟುಗಳು
ಚಲಾವಣೆಗೆ
ಬರಲಿವೆ.[ದೇಶದೆಲ್ಲೆಡೆ
ಎಟಿಎಂಗಳಲ್ಲಿ
ನೂಕು
ನುಗ್ಗಲು]
ಸೆಪ್ಟೆಂಬರ್ 24ರಂದು ಕೊನೆಯ ಬಾರಿಗೆ ಟ್ವೀಟ್ ಮಾಡಿದ್ದ ಸೂಪರ್ ಸ್ಟಾರ್ ರಜನಿ ಅವರು ಮೋದಿ ಅವರ ನಡೆಯನ್ನು ಮೆಚ್ಚಿ ಹ್ಯಾಟ್ಸಾಫ್ ಹೇಳಿದ್ದಾರೆ. ಹೊಸ ಭಾರತ ಉದಯವಾಗಿದೆ ಜೈ ಹಿಂದ್ ಎಂದಿದ್ದಾರೆ.[ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]
ರಜನಿ ಚಿತ್ರದ ದೃಶ್ಯ : ಇದು ಅಸಲಿಗೆ ರಜನಿ ಅವರ 'ಶಿವಾಜಿ' ಚಿತ್ರದಲ್ಲಿ ಬರುವ ದೃಶ್ಯ ಹಾಗು ಡೈಲಾಗ್ ನ ನೈಜ ರೂಪವಾಗಿದೆ. 500, 1000 ರು ಬೆಲೆ ನೋಟುಗಳನ್ನು ನಿಷೇಧಿಸಿ ಭ್ರಷ್ಟಾಚಾರ ನಿಯಂತ್ರಿಸುವ ಬಗ್ಗೆ ಡೈಲಾಗ್ ಗಳಿವೆ ಇದನ್ನು ಈಗ ಮೋದಿ ಅವರು ಜಾರಿಗೆ ತಂದಿದ್ದಾರೆ ಎಂದು ರಜನಿ ಅಭಿಮಾನಿಗಳು ಸಕತ್ ಖುಷಿ ಪಟ್ಟಿದ್ದಾರೆ.[500 ಹಾಗೂ 1,000 ನೋಟು ನೋಡಲು ಹೇಗಿದೆ?]
ಇದಲ್ಲದೆ ಅರುಣಾಚಲಂ ಚಿತ್ರದಲ್ಲಿನ ಸನ್ನಿವೇಶದಂತೆ ಕೆಲ ಗಂಟೆಗಳಲ್ಲೇ ಕೈಲಿರುವ ನೋಟುಗಳನ್ನು ಖರ್ಚು ಮಾಡುವ ಸನ್ನಿವೇಶ ಈಗ ಎಲ್ಲರಿಗೂ ಎದುರಾಗಿದೆ.[500 ಹಾಗೂ 1000 ರು ಕರೆನ್ಸಿ ನೋಟು ಚಲಾವಣೆ ಬಂದ್: ಮೋದಿ]
@superstarrajini @narendramodi ನಿಮ್ಮ ಮಾತು ಕೇಳಿ ತುಂಬ ಸಂತೋಷ ವಾಯಿತು , ರಜನಿ ಕಾಂತ್ ಅವರೆ 🙏🙏🙏💃💃👌👌👌
— Hemalatha (@hemakini) November 8, 2016
@superstarrajini @narendramodi 😘😘 pic.twitter.com/Vmf6m5s0Ck
— shankar narayanan (@CoolNarayanan) November 8, 2016
Kudos to @shankarshanmugh sir , for already mentioned this concept in #Sivaji movie .@superstarrajini @narendramodi pic.twitter.com/Zv5QxBw4fO
— suresh kumar (@urstrulysuresh1) November 8, 2016
@superstarrajini How to spend all ₹500 & ₹1000 in 2 hours? Arunachalam movie moment.
— Sudarsan (@sudarsa) November 8, 2016
(ಒನ್ಇಂಡಿಯಾ ಸುದ್ದಿ)