ದ್ವಿತೀಯ ಪಿಯುಸಿ ಅಂಕಗಳ ಗೊಂದಲ, ಪ್ರತಿಭಟನೆ
ಬೆಂಗಳೂರು, ಮೇ 22 : ಮೇ 26ರಂದು ಪ್ರಕಟಗೊಳ್ಳಬೇಕಾಗಿದ್ದ ಸಿಇಟಿ ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದೆ. ದ್ವಿತೀಯ ಪಿಯುಸಿ ಅಂಕಗಳ ಗೊಂದಲದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಸಮಯ
12.30
:
'ಮೌಲ್ಯಮಾಪನ
ಮಾಡುವಾಗ
ಎಚ್ಚರ
ವಹಿಸಬೇಕು.
ಇದನ್ನೆಲ್ಲ
ನಿಮಗೆ
ಹೊಸದಾಗಿ
ಹೇಳಿಕೊಡಬೇಕೆ?'
ಎಂದು
ಸಚಿವ
ಕಿಮ್ಮನೆ
ರತ್ನಾಕರ್
ಅಧಿಕಾರಿಗಳನ್ನು
ತರಾಟೆಗೆ
ತೆಗೆದುಕೊಂಡಿದ್ದಾರೆ.
ಪೋಷಕರು
ಮತ್ತು
ವಿದ್ಯಾರ್ಥಿಗಳನ್ನು
ಸಮಾಧಾನಪಡಿಸುತ್ತೇವೆ
ಎಂದು
ಸಚಿವರಿಗೆ
ಅಧಿಕಾರಿಗಳು
ಭರವಸೆ
ನೀಡಿದ್ದಾರೆ.
ಸಮಯ 12.15 : ವಿಧಾನಸೌಧದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಸಭೆ ಆರಂಭವಾಗಿದೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಕತ್ರಿ, ಜಂಟಿ ನಿರ್ದೇಶಕ ರಿತ್ತಿ ಮುಂತಾದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಸಮಯ 12 ಗಂಟೆ : ದ್ವಿತೀಯ ಪಿಯುಸಿ ಪರೀಕ್ಷೆ ಅಂಕಗಳ ಗೊಂದಲ ಮುಂದುವರೆದಿರುವಂತೆಯೇ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್ ಮೊಹಸೀನ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. [2015ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ]
ಸಮಯ 11.45 : ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಸುರೇಶ್ ಕುಮಾರ್ ಪಿಯು ಬೋರ್ಡ್ ಕಚೇರಿಗೆ ಆಗಮಿಸಿದ್ದು, ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಗೊಂದಲವನ್ನು ತಕ್ಷಣ ಬಗೆಹರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.[ಫಲಿತಾಂಶ : ಯಾವ ಜಿಲ್ಲೆಗೆ ಯಾವ ಸ್ಥಾನ]
ಸಮಯ 11 ಗಂಟೆ : ದ್ವಿತೀಯ ಪಿಯು ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಯಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದೆ ಶುಕ್ರವಾರ ಪತ್ರಿಭಟನೆ ಮುಂದುವರೆಸಿದ್ದಾರೆ. ಮೇ 26ರಂದು ಪ್ರಕಟಗೊಳ್ಳಲಿರುವ ಸಿಇಟಿ ಪರೀಕ್ಷೆ ಫಲಿತಾಂಶವನ್ನು ಮುಂದೂಡಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಯವಾಗಿದೆ. [ಪಿಯು ಗೊಂದಲ : ಕಡೆಗೂ ಎಚ್ಚೆತ್ತ ಕಿಮ್ಮನೆ ರತ್ನಾಕರ]
ಪ್ರಾಥಮಿಕ
ಮತ್ತು
ಪ್ರೌಢ
ಶಿಕ್ಷಣ
ಸಚಿವ
ಕಿಮ್ಮನೆ
ರತ್ನಾಕರ್
ವಿಧಾನಸೌಧದಲ್ಲಿ
ಇಲಾಖೆಯ
ಅಧಿಕಾರಿಗಳ
ಸಭೆ
ನಡೆಸುತ್ತಿದ್ದು,
ಮಧ್ಯಾಹ್ನ
1
ಗಂಟೆಗೆ
ಪತ್ರಿಕಾಗೋಷ್ಠಿ
ನಡೆಸುವುದಾಗಿ
ಮಾಧ್ಯಮಗಳಿಗೆ
ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ
ಎಚ್ಡಿಕೆ
ಬೆಂಬಲ
:
ವಿದ್ಯಾರ್ಥಿಗಳು
ನಡೆಸುತ್ತಿರುವ
ಪ್ರತಿಭಟನೆಗೆ
ಮಾಜಿ
ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ
ಬೆಂಬಲ
ನೀಡಿದ್ದು,
ಪಿಯು
ಕಚೇರಿಗೆ
ಆಗಮಿಸಿದರು.
'ಸರ್ಕಾರ
ವಿದ್ಯಾರ್ಥಿಗಳ
ಬದುಕಿನೊಂದಿಗೆ
ಆಟವಾಡದೆ
ಉತ್ತರ
ಪತ್ರಿಕೆಗಳ
ಮೌಲ್ಯಮಾಪನ
ಮತ್ತು
ಫಲಿತಾಂಶದಲ್ಲಿರುವ
ಗೊಂದಲವನ್ನು
ಬಗೆಹರಿಸಬೇಕು'
ಎಂದು
ಅವರು
ಒತ್ತಾಯಿಸಿದರು.