ವಿದ್ಯಾರ್ಥಿಗಳ ಪ್ರತಿಭಟನೆ: ಏರ್ ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್
ಬೆಂಗಳೂರು, ಫೆ. 27: ಬೆಂಗಳೂರಿನ ಹೆಬ್ಬಾಳದ ಕೆಂಪಾಪುರ ಜಂಕ್ಷನ್ ಬಳಿ ನಡೆದಿದ್ದ ಭೀಕರ ರಸ್ತೆ ಅಪಘಾತಕ್ಕೆ ಸಂಬಂಧಿಸಿ ಏರ್ಪೋರ್ಟ್ ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಭೀಕರ ಅಪಘಾತವನ್ನು ಖಂಡಿಸಿ ಹೆಬ್ಬಾಳ ಜಂಕ್ಷನ್ ಬಳಿ ಸಿಂಧಿ ಕಾಲೇಜು, ಪ್ರೆಸಿಡೆನ್ಸಿ ಕಾಲೇಜು ಮತ್ತು ವಿದ್ಯಾನಿಕೇತನ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಪ್ರತಿಭಟನೆಗೆ ಸ್ಥಳೀಯ ಸಂಘಸಂಸ್ಥೆಗಳು ಬೆಂಬಲ ನೀಡಿವೆ.[ಬೆಂಗಳೂರು: ರಸ್ತೆ ಅಪಘಾತ: 2 ಸಾವು, ಹಲವು ನೋವು]
ಹೆಬ್ಬಾಳ ಜಂಕ್ಷನ್ ನಲ್ಲಿ ಪಾದಾಚಾರಿಗಳಿಗೆ ರಸ್ತೆ ದಾಟಲು ತೀವ್ರ ತೊಂದರೆಯಾಗುತ್ತಿದ್ದು, ಸ್ಕೈವಾಕ್ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಜತೆಗೆ ಪೊಲೀಸ್ ಇಲಾಖೆ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಭೇಟಿ ನೀಡಿದ್ದು ವಿದ್ಯಾರ್ಥಿಗಳ ಮನವಿಯನ್ನು ಆಲಿಸಿದ್ದು ಪರಿಹಾರದ ಭರವಸೆ ನೀಡಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಸ್ಕೈ ವಾಕ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ.
ಟ್ರಾಫಿಕ್
ಜಾಮ್
ಪ್ರತಿಭಟನೆ
ಪರಿಣಾಮ
ಮೇಖ್ರಿ
ಸರ್ಕಲ್
ನಿಂದ
ಸುಮಾರು
7
ಕಿಮೀ
ವರೆಗೆ
ಟ್ರಾಫಿಕ್
ಜಾಮ್
ಆಗಿದೆ.
ವಿಮಾನ
ನಿಲ್ದಾಣಕ್ಕೆ
ತೆರಳಿವವರು
ಜಾಮ್
ನಲ್ಲಿ
ಸಿಕ್ಕಿಹಾಕಿಕೊಂಡಿದ್ದಾರೆ.
ಪ್ರತಿಭಟನಾಕಾರರ
ಮನವೊಲಿಸಲು
ಸಾಧ್ಯವಾಗುತ್ತಿಲ್ಲ.
ಪರಿಣಾಮ
ವಾಹನ
ಸವಾರರು
ತೀವ್ರ
ಪರದಾಟ
ಅನುಭವಿಸುತ್ತಿದ್ದಾರೆ.
ಅರ್ಪಿತಾಗೆ
ಶ್ರದ್ಧಾಂಜಲಿ
ಅಪಘಾತದಲ್ಲಿ
ಮೃತಪಟ್ಟ
ಸಿಂಧಿ
ಕಾಲೇಜಿನ
ವಿದ್ಯಾರ್ಥಿನಿ
ಅರ್ಪಿತಾ
ಅವರ
ಆತ್ಮಕ್ಕೆ
ಶಾಂತಿಕೋರಿ
ವಿದ್ಯಾರ್ಥಿಗಳು
ಶ್ರದ್ಧಾಂಜಲಿ
ಸಭೆ
ನಡೆಸಿದರು.
ಅರ್ಪಿತಾ
ಮತ್ತು
ಅನಂದ್
ಅವರ
ಅಂತ್ಯಕ್ರಿಯೆ
ಶುಕ್ರವಾರ
ನಡೆಯಲಿದೆ
ಎಂದು
ಕುಟುಂಬದ
ಮೂಲಗಳು
ತಿಳಿಸಿವೆ.
ಆನಂದ್
ತಾಯಿ
ಆಸ್ಪತ್ರೆಗೆ
ಅಪಘಾತದಲ್ಲಿ
ಮೃತಪಟ್ಟಿದ್ದ
ಕೆಲಸ
ಅರಸಿ
ಬೆಂಗಳೂರಿಗೆ
ಬಂದಿದ್ದ
ಚಿಕ್ಕಬಳ್ಳಾಪುರದ
ಆನಂದ್
ಮನೆಯಲ್ಲಿ
ನಿರವ
ಮೌನ.
ಮಗನ
ಸಾವಿನ
ಆಘಾತಕ್ಕೆ
ಸಿಲುಕಿರುವ
ತಾಯಿ
ಅಸ್ವಸ್ಥಗೊಂಡು
ಆಸ್ಪತ್ರೆ
ಸೇರಿದ್ದಾರೆ.