'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನಕ್ಕೆ ಚಾಲನೆ
ಬೆಂಗಳೂರು, ಅಕ್ಟೋಬರ್ 03 : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಅಶ್ವಥನಾರಾಯಣ್ ಅವರ ನಾಯಕತ್ವದಲ್ಲಿ 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನಕ್ಕೆ ಗಾಂಧಿ ಜಯಂತಿಯಂದು ಚಾಲನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ದೂರದೃಷ್ಟಿಯ 'ಸ್ವಚ್ಛ ಭಾರತ' ಅಭಿಯಾನದಡಿ ಈ ಕಾರ್ಯಕ್ರಮ ಆರಂಭಿಸಲಾಗಿದೆ.
ಅಕ್ಟೋಬರ್ 2ರ ಶುಕ್ರವಾರ ಡಾ.ಸಿ.ಎನ್. ಅಶ್ವಥನಾರಾಯಣ್, ನಟ ಯಶ್ ಮುಂತಾದವರು 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನದ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಬಿಬಿಎಂಪಿ, ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಬೆಂಬಲದೊಂದಿಗೆ ಪ್ರತಿ ಮನೆಯಲ್ಲಿಯೂ ಈ ಕುರಿತು ಅರಿವು ಮೂಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. [ಡಿಜಿಟಲ್ ಇಂಡಿಯಾದಿಂದ ರಾಜ್ಯಕ್ಕಾಗುವ ಲಾಭಗಳೇನು?]
ಸ್ವಚ್ಛ ಭಾರತ ಹಾಗೂ ಡಿಜಿಟಲ್ ಇಂಡಿಯಾ ಅಭಿಯಾನವನ್ನು ಮುಂದಿಟ್ಟುಕೊಂಡು ತ್ಯಾಜ್ಯ ನಿರ್ವಹಣೆ, ವಿಲೇವಾರಿಗಾಗಿ android app ಹಾಗೂ ನಾಗರಿಕ ದೂರುಗಳ ನಿರ್ವಹಣೆಗಾಗಿ ಕಾಲ್ ಸೆಂಟರ್ಗಳನ್ನು ಆರಂಭಿಸುವುದು ಸೇರಿದಂತೆ ಅಭಿಯಾನದ ಯಶಸ್ಸಿಗಾಗಿ ತಂತ್ರಜ್ಞಾನಗಳನ್ನು ಸದ್ಭಳಕೆ ಮಾಡಿಕೊಳ್ಳಲಾಗುತ್ತದೆ. [ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ ನಾರಾಯಣ ಸಂದರ್ಶನ]
ಮಲ್ಲೇಶ್ವರಂ
ಕ್ಷೇತ್ರವನ್ನು
ಉದ್ಯಾನ
ನಗರಿ
ಬೆಂಗಳೂರಿನ
ಇತರ
ಭಾಗಗಳಿಗೆ
ಹಾಗೂ
ಭಾರತಕ್ಕೆ
ಮಾದರಿಯನ್ನಾಗಿಸುವ
ದೂರದೃಷ್ಠಿಯಿಂದ
ಈ
ಅಭಿಯಾನವನ್ನು
ಆರಂಭಿಸಲಾಗಿದ್ದು,
ಶುಕ್ರವಾರ
ಇದಕ್ಕೆ
ಚಾಲನೆ
ಸಿಕ್ಕಿದೆ.
ಅರಿವು ಮೂಡಿಸುವುದು ಹೇಗೆ? : ಪ್ರಮುಖ ಸ್ಥಳಗಳಲ್ಲಿ ಅರ್ಥಪೂರ್ಣವಾದ ಸಂದೇಶಗಳನ್ನು ಪ್ರದರ್ಶಿಸುವುದು, ನಾಗರೀಕರು/ಸಂಸ್ಥೆಗಳು/ದೇವಾಲಯಗಳು/ಸಮುದಾಯಗಳು ಸ್ವಯಂ ಸೇವಕರು ಭಾಗವಹಿಸುವಂತೆ ಮಾಡುವುದು, ತರಬೇತಿ ನೀಡುವ ಮೂಲಕ ಅರಿವು ಮೂಡಿಸುವುದು ಮುಂತಾದ ಕಾರ್ಯಕ್ರಮಗಳ ಮೂಲಕ 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನದ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತದೆ.