ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರ್ ಹಾಸ್ಯ: 'ಪನ್ನೀರ್' ಅಗಿಯೋಕಂತ ಶಶಿಕಲಾಗೆ ವಿಶೇಷ ಅಡುಗೆ ಮನೆ!

|
Google Oneindia Kannada News

ಬೆಂಗಳೂರು, ಜುಲೈ 13: ಕರ್ನಾಟಕ ಕಾರಾಗೃಹ ಇಲಾಖೆ ಡಿಐಜಿ ರೂಪಾ ಡಿ ಮೌದ್ಗೀಲ್ ಅವರು, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಶಶಿಕಲಾ ನಟರಾಜನ್ ಅವರ ಮೇಳೆ ಹೊರಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ವ್ಯಾಪಕ ಚರ್ಚೆ ಏರ್ಪಟ್ಟಿದೆ.

ಈ ಕುರಿತು ಕಾರಾಗೃಹ ಡಿಐಜಿ ಅವರಿಗೆ ರೂಪಾ ಅವರು ಬರೆದ ಪತ್ರದಲ್ಲಿ ಖೈದಿ ಶಶಿಕಲಾ ನಟರಾಜನ್ ಅವರು ವಿಐಪಿ ಸೌಲಭ್ಯ ಪಡೆಯುತ್ತಿದ್ದಾರೆ, ಅದಕ್ಕಾಗಿ 2 ಕೋಟಿ ರೂ.ಲಂಚ ಸಹ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ಫೋಟಕ ಸುದ್ದಿ : ವಿಶೇಷ ಸವಲತ್ತಿಗೆ ಶಶಿಕಲಾರಿಂದ 2 ಕೋಟಿ ಲಂಚ!ಸ್ಫೋಟಕ ಸುದ್ದಿ : ವಿಶೇಷ ಸವಲತ್ತಿಗೆ ಶಶಿಕಲಾರಿಂದ 2 ಕೋಟಿ ಲಂಚ!

ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಕಾರಾಗೃಹಗಳ ಮಹಾನಿರೀಕ್ಷಕ ಸತ್ಯನಾರಾಯಣರಾವ್ ಈ ಆರೋಪವನ್ನು ತಳ್ಳಿಹಾಕಿಯೂ ಆಗಿದೆ. ಆದರೆ ಈ ವಿಷಯ ಈಗ ರಾಜ್ಯ ಮಾತ್ರವಲ್ಲದೆ ರಾಷ್ಟ್ರದಾದ್ಯಂತ ತಲ್ಲಣವನ್ನುಂಟುಮಾಡಿದ್ದು, #SasikalaBribegate , #Sasikala ಎಂಬ ಹ್ಯಾಶ್ ಟ್ಯಾಗ್ ಗಳಲ್ಲಿ ಟ್ವಿಟ್ಟರಿನಲ್ಲಿ ಸಾಕಷ್ಟು ಹಾಸ್ಯ ಚಟಾಕಿಯಂತೂ ಹೊರಬರುತ್ತಿದೆ.

ರೂಪಾ ಅವರು ಪೊಲೀಸ್ ಕೇಂದ್ರ ಕಾರಾಗೃಹದ ಉಪ ಮಹಾನಿರೀಕ್ಷಕರಿಗೆ ಬರೆದ ಪತ್ರ ಇಲಾಖೆಯ ಒಳಗೇ ಇರುವ ಬದಲು ಮಾಧ್ಯಮಗಳಿಗೆ ತಲುಪಿದ್ದು ಹೇಗೆ ಎಂಬ ಬಗ್ಗೆಯೂ ಈಗ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಲಂಚ ಆರೋಪ ಸುಳ್ಳು, ತನಿಖೆಗೆ ಸಿದ್ಧ-ರೂಪಾಗೆ ಸತ್ಯನಾರಾಯಣ ತಿರುಗೇಟುಲಂಚ ಆರೋಪ ಸುಳ್ಳು, ತನಿಖೆಗೆ ಸಿದ್ಧ-ರೂಪಾಗೆ ಸತ್ಯನಾರಾಯಣ ತಿರುಗೇಟು

ಇದೇನೇ ಇದ್ದರೂ ಟ್ವಿಟ್ಟಿಗರಿಗಂತೂ ಈ ಸುದ್ದಿ ಇವತ್ತಿನ ಮೃಷ್ಟಾನ್ನ ಭೋಜನ ಎಂದರೆ ತಪ್ಪಿಲ್ಲ! ಮೃಷ್ಟಾನ್ನ ಭೋಜನದ ಕೆಲವು ಸ್ಯಾಂಪಲ್ ನಿಮಗಾಗಿ..!

ಪನ್ನೀರ್ ಅಗಿಯೋಕೆ ವಿಶೇಷ ಅಡುಗೆ ಮನೆ!

ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ನಟರಾಜನ್ ಅವರಿಗೆ ಪ್ರತ್ಯೇಕ ವಿಶೇಷ ಅಡುಗೆ ಮನೆ ನೀಡಲಾಗಿದೆಯಂತೆ. ಬಹುಶಃ ಅವರು ದಿನದ ಮೂರು ಹೊತ್ತೂ 'ಪನ್ನೀರ'ನ್ನು ಅಗಿದು ತಿನ್ನುತಗ್ತಾರೇನೋ! ಎಂದು ರಮೇಶ್ ಶ್ರೀವತ್ಸ ಎನ್ನುವವರು ಹಾಸ್ಯ ಚಟಾಕಿ ಹಾರಿಸಿದ್ದಾರೆ!

ಶಶಿಕಲಾ ಸಹ ಗಾಂಜಾ ಸೇವಿಸುತ್ತಾರಾ..?!

ರೂಪಾ ಅವರು ಹೇಳಿರುವ ಪ್ರಕಾರ ಇಲ್ಲಿನ 25 ಖೈದಿಗಳ ವೈದ್ಯಕೀಯ ಪರೀಕ್ಷೆ ಮಾಡಿದಾಗ 18 ಜನ ಗಾಂಜಾ ಸೇವಿಸಿದ್ದು ದೃಢವಾಗಿದೆ. ಹಾಗಾದರೆ ಶಶಿಕಲಾ ಸಹ ಗಾಂಜಾ ಸೇವಿಸುತ್ತಾರಾ..? ಎಂದು ಹರಿ ಪ್ರಭಾಕರನ್ ಎನ್ನುವವರು ಟ್ವೀಟ್ ಮಾಡಿದ್ದಾರೆ!

ಜೈಲಿನಲ್ಲಿ ಶಶಿಕಲಾಗೆ ವಿಐಪಿ ಆತಿಥ್ಯ, ಉನ್ನತ ತನಿಖೆಗೆ ಸಿಎಂ ಆದೇಶಜೈಲಿನಲ್ಲಿ ಶಶಿಕಲಾಗೆ ವಿಐಪಿ ಆತಿಥ್ಯ, ಉನ್ನತ ತನಿಖೆಗೆ ಸಿಎಂ ಆದೇಶ

ಶಶಿಕಲಾ ಇಂದ ಇನ್ನೇನು ನಿರೀಕ್ಷಿಸೋಕೆ ಸಾಧ್ಯ?

ವಿವಿಐಪಿ ಸೌಲಭ್ಯಕ್ಕಾಗಿ ಶಶಿಕಲಾ 2 ಕೋಟಿ ಲಂಚ ನೀಡಿದ್ದಾರೆ ಎಂಬ ಆರೋಪವಿದೆ. ಶಶಿಕಲಾ ಥರದ ಮಹಿಳೆಯಿಂದ ನಾವು ಇನ್ನೇನನ್ನು ನಿರೀಕ್ಷಿಸುವುದಕ್ಕೆ ಸಾಧ್ಯ ಎಂದು ಕೀರ್ತಿ ಎಂಬುವವರು ಪ್ರಶ್ನಿಸಿದ್ದಾರೆ!

ಅಡುಗೆಯವಳೇ ತಮಿಳುನಾಡಿನ ಮುಂದಿನ ಸಿಎಂ!

ಶಶಿಕಲಾ ಅವರಿಗೆ ಅಡುಗೆ ಮಾಡುವುದಕ್ಕೆಂದೇ ಒಬ್ಬ ಖೈದಿಯನ್ನು ನೇಮಿಸಿಕೊಂಡಿದ್ದಾರಂತೆ. ತಮಿಳುನಾಡಿನ ಮುಂದಿನ ನಾಯಕಿ ಯಾರು ಎಂಬುದು ತಿಳಿಯಿತು! ಆಕೆಗೆ ಅಡುಗೆ ಮಾಡಿ ಕೊಡುತ್ತಿರುವವಳೇ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಎಂದು ರಾಜೇಶ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
Karnataka IPS officer Roopa D's letter, which has alleged that Sasikala Natarajan, currently lodged in the Bengaluru central prison, is being given special treatment. No the issue creating a bid debate in social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X