ಯುವತಿ ಕೈ ಹಿಡಿದು ಎಳೆದಾಡಿದ ಕಾಮಾಂಧರ ಸೆರೆ
ಬೆಂಗಳೂರು, ನ. 26: ಕೆಲಸಕ್ಕೆ ತೆರಳಲು ಕದಿರೇನಳ್ಳಿ ಮೇಲ್ಸೆತುವೆ ಬಳಿ ಕ್ಯಾಬ್ ಗಾಗಿ ಕಾಯುತ್ತಿದ್ದ ಯುವತಿಯ ಕೈ ಹಿಡಿದು ಎಳೆದಾಡಿದ ಮೂವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.
ಮರಗೆಲಸ ಮಾಡಿಕೊಂಡಿರುವ ಭೂವನೇಶ್ವರಿ ನಗರದ ಸತೀಶ್(25) ಕಾರ್ತಿಕ್ (23)ಮತ್ತು ಮಣಿ (26) ಬಂಧಿತರು ಎಂದು ಬನಶಂಕರಿ ಪೊಲೀಸರು ತಿಳಿಸಿದ್ದಾರೆ.[ಲೈಂಗಿಕ ದೌರ್ಜನ್ಯ ಹೆಸರಲ್ಲಿ ವಂಚನೆ ಯತ್ನ: ಪತ್ರಕರ್ತ ಸೆರೆ]
ಬನಶಂಕರಿ ಭವಾನಿ ನಗರದಲ್ಲಿ ವಾಸವಿರುವ ಯುವತಿ ರಾತ್ರಿ ಪಾಳಿ ಕೆಲಸಕ್ಕೆಂದು ವೈಟ್ ಫೀಪ್ಡ್ ಗೆ ತೆರಳಲು ತನ್ನ ತಂದೆಯ ಜತೆ ಕದಿರೇನಳ್ಳಿ ಮೇಲ್ಸೆತುವೆ ಬಳಿ ಬಂದಿದ್ದಾಳೆ. ಈ ವೇಳೆ ಅಲ್ಲಿಗೆ ಆಗಮಿಸಿದ ಪಾನಮತ್ತ ಯುವಕರ ತಂಡ ಯುವತಿಯನ್ನು ಚುಡಾಯಿಸಿದೆ. ಅಲ್ಲದೇ ಆಕೆಯ ಕೈ ಹಿಡಿದು ಎಳೆಯಲು ಮುಂದಾಗಿದ್ದಾರೆ.[ವಿವಾದದಲ್ಲೇ ಮುಳುಗೆದ್ದ ಟಾಪ್ 10 'ದೇವಮಾನವರು']
ಇದನ್ನು ಗಮನಿಸಿದ ಸ್ಥಳೀಯರು ಮತ್ತು ಯುವತಿ ತಂದೆ ಕೈ ಗೆ ಸಿಕ್ಕ ಸತೀಶನಿಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಕಾರ್ತಿಕ್ ಮತ್ತು ಮಣಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ ಇವರ ಬಗ್ಗೆ ಸ್ಪಷ್ಟ ಮಾಹಿತಿ ಕಲೆಹಾಕಿದ ಪೊಲೀಸರು ಮಂಗಳವಾರ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.