ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ 'ವಿದ್ಯುತ್ ಉಳಿಸಿ ಲಕ್ಷಾಧೀಶರಾಗಿ' ಸ್ಪರ್ಧೆ

By Kiran B Hegde
|
Google Oneindia Kannada News

ಬೆಂಗಳೂರು, ನ. 24: ವಿದ್ಯುತ್ ಬಳಕೆ ಮಿತಿಗೊಳಿಸುವ ಪ್ರವೃತ್ತಿಯನ್ನು ಪ್ರೋತ್ಸಾಹಿಸಲು ನಗರದ ಗ್ರೀನ್ ಎನರ್ಜಿ ಫೌಂಡೇಶನ್ ಹಾಗೂ ರಾಕೋಲ್ಡ್ ಥರ್ಮಲ್ ಸಂಸ್ಥೆ ವತಿಯಿಂದ ಸ್ವಿಚ್ ಟು ಗ್ರೀನ್ ಯೋಜನೆಯಡಿ 'ವಿದ್ಯುತ್ ಉಳಿಸಿ ಲಕ್ಷಾಧಿಪತಿಗಳಾಗಿ' ಸ್ಪರ್ಧೆ ಆಯೋಜಿಸಲಾಗಿದೆ. [ವಿದ್ಯುತ್ ತಯಾರಿಸಿ ಸರ್ಕಾರಕ್ಕೆ ಮಾರಿ]

ಗೃಹ ನಿರ್ಮಾಣ ಸಂಸ್ಥೆ, ಕನಿಷ್ಠ 100 ಫ್ಲಾಟ್‌ಗಳನ್ನು ಹೊಂದಿರುವ ವಸತಿ ಸಮುಚ್ಛಯಗಳು ಹಾಗೂ ನಾಗರಿಕ ಅಭಿವೃದ್ಧಿ ಸಂಘದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇದಕ್ಕಾಗಿ ಗೃಹ ನಿರ್ಮಾಣ ಸಂಸ್ಥೆ ಅಥವಾ ಫ್ಲಾಟ್ ಮಾಲೀಕರು ತಮ್ಮದೇ ವಿದ್ಯುತ್ ನಿರ್ವಹಣಾ ಸಮಿತಿ (ಇಎಂಸಿ) ಸ್ಥಾಪಿಸಿಕೊಳ್ಳಬೇಕು. ನಂತರ ಆಯ್ಕೆ ಸಮಿತಿಯಿಂದ ನೇಮಿಸಲಾದ ಸ್ವಯಂ ಸೇವಕರು ನಾಮ ನಿರ್ದೇಶನಗೊಂಡ ಗೃಹ ನಿರ್ಮಾಣ ಸಂಸ್ಥೆಯ ಕಾರ್ಯಶೀಲತೆ ಪರಿಶೀಲಿಸಿ ವರದಿ ಸಲ್ಲಿಸುವರು. [ಶಿವನಸಮುದ್ರ ಬಳಿ ಸೌರ ವಿದ್ಯುತ್ ಘಟಕ]

ವಿದ್ಯುತ್ ಉಳಿಕೆಯಲ್ಲಿ ಎಷ್ಟರ ಮಟ್ಟಿಗೆ ಯೋಜನೆ ಫಲಪ್ರದವಾಗಿದೆ ಎಂಬ ವರದಿ ಆಧಾರದ ಮೇಲೆ ವಿಜೇತರನ್ನು ಗುರುತಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಯಂತ್ ಮೊ. 9886102219, ಇ ಮೇಲ್ [email protected] ಸಂಪರ್ಕಿಸಬಹುದು. [ಕರ್ನಾಟಕದಲ್ಲಿ ಹರ್ಬಜನ್ ಸೌರ ಘಟಕ]

power

ಸ್ಪರ್ಧೆ ಉದ್ದೇಶವೇನು?

ಮನೆಗಳಲ್ಲಿ ವಿದ್ಯುತ್ ಬಳಕೆ ಮಿತಿಗೊಳಿಸುವುದನ್ನು ಪ್ರೋತ್ಸಾಹಿಸಲು ಈ ಸ್ಪರ್ಧೆ ಆಯೋಜಿಸಲಾಗಿದೆ. ಯೋಜನೆಯ ಲಾಭವನ್ನು ಬೆಂಗಳೂರಿನ 10ರಿಂದ 12 ಸಾವಿರ ನಿವಾಸಿಗಳಿಗೆ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಹಿಂದೆ ಪುಣೆಯಲ್ಲಿ ಇಂತಹ ಪರಿವರ್ತನಾ ಕಾರ್ಯಕ್ರಮದಲ್ಲಿ ಸುಮಾರು 8000 ಜನರು ಭಾಗವಹಿಸಿದ್ದರು. ಇದರಿಂದ 48 ಸಾವಿರ ಯೂನಿಟ್ ವಿದ್ಯುತ್ ಉಳಿತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಗ್ರೀನ್ ಎನರ್ಜಿ ಫೌಂಡೇಶನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. [ಕರ್ನಾಟಕದಲ್ಲಿ 5 ಸೌರ ವಿದ್ಯುತ್ ಘಟಕ]

English summary
Green Energy Foundation of Bengaluru and Rakold Thermal Company has organised a competition regarding power saving. Nov 30 is the last date to register name for this competition. Creating awareness regarding saving power is the motto of the competition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X