'ಸಂಕಾನಟ್ಟಿಯ ಚಂದ್ರಿ' ನೋಡಲು ಹೋಗೋಣ ಬನ್ನಿ
ಬೆಂಗಳೂರು, ಜುಲೈ, 31 : ವಿಜಯನಗರ ಬಿಂಬ (ರಿ) ರಂಗ ಶಿಕ್ಷಣ ಕೇಂದ್ರ, ಹಿರಿಯರ ವಿಭಾಗದ ಮೂರನೇ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳು 20ನೇ ವರ್ಷದ ಸಂಭ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ದಲ್ಲಿ ಆಗಸ್ಟ್ 1 ರಂದು ಶನಿವಾರ ನಾಟಕ ಪ್ರದರ್ಶನ ಏರ್ಪಡಿಸಿದೆ.
ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸುತ್ತಿರುವ ಸಂಕಾನಟ್ಟಿಯ ಚಂದ್ರಿ ನಾಟಕ ಬರ್ಟೋಲ್ಟ್ ಬ್ರೆಕ್ಟ್ ಮೂಲದ್ದಾಗಿದ್ದು, ಕನ್ನಡಕ್ಕೆ ಅನುವಾದಿಸಿದವರು ರಂ. ಶಾ (ಆರ್.ಎಸ್ ಲೋಕಾಮರ್). ಇದನ್ನು ನಿರ್ದೇಶಿಸಿ ರಂಗರೂಪ ನೀಡಿದವರು ಎಸ್. ವಿ ಸುಷ್ಮಾ.
ಈ ನಾಟಕಕ್ಕೆ ವಸ್ತ್ರ ವಿನ್ಯಾಸವು ಶೋಭಾ ವೆಂಕಟೇಶ್ , ರಂಗಸಜ್ಜಿಕೆ ವಿಶ್ವನಾಥ್ ಮಂಡಿ ಅವರಿಂದ ನಿರ್ವಹಿಸಲ್ಪಟ್ಟಿದ್ದು, ಈ ನಾಟಕಕ್ಕೆ ಡಾ. ಎಸ್. ವಿ ಕಶ್ಯಪ್ ಅವರು ಹಾಡುಗಳನ್ನು ನೀಡಿದ್ದು, ಈ ಹಾಡುಗಳಿಗೆ ಸುಶ್ರಾವ್ಯವಾದ ರಾಗ ಸಂಯೋಜನೆ ಮಾಡಿದವರು ರಾಜ್ ಗುರು ಹೊಸಕೋಟೆ.
ಇವರೆಲ್ಲರ ಸಹಭಾಗಿತ್ವದಲ್ಲಿ 2 ಪ್ರದರ್ಶನಗಳನ್ನು ಏರ್ಪಡಿಸಿದ್ದು, ನಾಟಕವು ಕಲಾಗ್ರಾಮ ಮಲ್ಲತ್ತಳ್ಳಿ ಯಲ್ಲಿ ಶನಿವಾರ 3.30 ಕ್ಕೆ ಹಾಗೂ ಸಂಜೆ 7.30ಕ್ಕೆ ನಡೆಯಲಿದೆ. ನಾಟಕ ಪ್ರದರ್ಶನದ ಟಿಕೆಟ್ ಬುಕ್ ಮೈ ಶೋನಲ್ಲಿ ಲಭ್ಯವಿದ್ದು, ಟಿಕೆಟ್ 50 ರೂಗಳನ್ನು ಹೊಂದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ www.vijayanagarabimba.com, 9844152967, 9845265967