ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿ ಭೀಕರ ಕೊಲೆ
ಬೆಂಗಳೂರು, ಫೆಬ್ರವರಿ 22 : ಮೊಬೈಲ್ ಚಾರ್ಜರ್ನಿಂದ ಕುತ್ತಿಗೆ ಬಿಗಿದು, ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬೆಂಗಳೂರಿನಲ್ಲಿ ಕೊಲೆ ಮಾಡಲಾಗಿದೆ. ಆರ್ಎಂಸಿ ಯಾರ್ಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆಯಾದವರನ್ನು
ಜಲ್ಬೆಟ್
ಕೋರೀಯಾ
(74)
ಎಂದು
ಗುರುತಿಸಲಾಗಿದೆ.
ಆರ್ಎಂಸಿ
ಯಾರ್ಡ್ನಲ್ಲಿರುವ
ಜಲ್ಬೆಟ್
ಅವರ
ನಿವಾಸದಲ್ಲಿ
ಸೋಮವಾರ
ಮಧ್ಯಾಹ್ನದ
ಶವ
ಪತ್ತೆಯಾಗಿದೆ.
ರಿಯಲ್
ಎಸ್ಟೇಟ್
ಉದ್ಯಮಿಯಾಗಿದ್ದ
ಜಲ್ಬೆಟ್
ಮೂರು
ವರ್ಷಗಳಿಂದ
ಆರ್ಎಂಸಿಯಾರ್ಡ್
ಲೇಔಟ್ನಲ್ಲಿ
ವಾಸವಾಗಿದ್ದರು.
[ಮಕ್ಕಳನ್ನು
ಕೊಂದು
ಮೋರಿಗೆ
ಶವ
ಎಸೆದ
ಪಾಪಿ
ತಂದೆ]
ಸೋಮವಾರ ಬೆಳಗ್ಗೆ ಎಷ್ಟು ಹೊತ್ತಾದರೂ ಜಲ್ಬೆಟ್ ಕೋರೀಯಾ ಅವರು ಮನೆಯಿಂದ ಹೊರಗೆ ಬಂದಿರಲಿಲ್ಲ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಲಸಕ್ಕೆ ಬಂದವರು ಕಾಲಿಂಗ್ ಬೆಲ್ ಒತ್ತಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅವರು ಕಿಟಕಿ ಮೂಲಕ ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. [ಯಲಹಂಕ: ಬಿಜೆಪಿ ಸದಸ್ಯ ಉದ್ಯಮಿ ಕೊಲೆ, ನಾಲ್ವರ ಸೆರೆ]
ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಮೊಬೈಲ್ ಚಾರ್ಜರ್ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಜಲ್ಬೆಟ್ ಕೋರೀಯಾ ಅವರ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ತನಿಖೆ ಮುಂದುವರೆದಿದೆ. [ನಕಲಿ ನೋಟಿನ ಜಾಲಕ್ಕೆ ಬೆಂಗಳೂರು ಕೇಂದ್ರ ಸ್ಥಾನ!]
ರೌಡಿ
ಶೀಟರ್
ಹತ್ಯೆ
:
ವೈಟ್
ಫೀಲ್ಡ್
ಪೊಲೀಸ್
ಠಾಣೆ
ವ್ಯಾಪ್ತಿಯಲ್ಲಿ
ರೌಡಿ
ಶೀಟರ್ನನ್ನು
ಕೊಲೆ
ಮಾಡಲಾಗಿದೆ.
ಕೊಲೆಯಾದವನನ್ನು
ವಾಸಿ
ಸುಹೇಲ್
(25)
ಎಂದು
ಗುರುತಿಸಲಾಗಿದೆ.
ಮಾತನಾಡುವ
ನೆಪದಲ್ಲಿ
ಸುಹೇಲ್
ಕರೆಸಿಕೊಂಡ
ಗುಂಪು
ರಾತ್ರಿ
ಪಾರ್ಟಿ
ಮಾಡಿ,
ತಡ
ರಾತ್ರಿ
ಸುಮಾರಿಗೆ
ಸುಹೇಲ್ನನ್ನು
ಕೊಲೆ
ಮಾಡಿ
ಅಲ್ಲಿಂದ
ಪರಾರಿಯಾಗಿದೆ.
ಹಳೆ ದ್ವೇಷದ ಹಿನ್ನಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸುಹೇಲ್ ವಿರುದ್ಧ ಬನಶಂಕರಿ, ಸುಬ್ರಮಣ್ಯಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 17ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು.