ಶಂಕರ್ ನಾಗ್ ಕನಸು ಈಗ ನನಸಾಗುತ್ತಿದೆ: ಅರುಂಧತಿ
ಬೆಂಗಳೂರು, ಜ. 19: ನಟ, ರಂಗಕರ್ಮಿ ಶಂಕರ್ನಾಗ್ ಅವರ ಕನಸು ಕೊನೆಗೂ ನನಸಾಗುವ ಕಾಲ ಬಂದಿದೆ. ಹತ್ತು ವರ್ಷಗಳ ಬಳಿಕ 'ರಂಗ ಶಂಕರ' ಕರ್ನಾಟಕದ ಬೇರೆ ಊರುಗಳಿಗೆ ಸಂಚರಿಸಲು ಸಿದ್ಧವಾಗಿದೆ. ಜನವರಿ 21 ರಿಂದ ರಂಗಶಂಕರ ಲೋಕ ಸಂಚಾರ ಆರಂಭಗೊಳ್ಳಲಿದೆ.
ಜನವರಿ 21ರಿಂದ ರಂಗ ಶಂಕರ ಲೋಕಸಂಚಾರ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ತಾಲೂಕುಗಳು, ಜಿಲ್ಲಾ ಕೇಂದ್ರಗಳಲ್ಲೂ ನಾಟಕ ಪ್ರದರ್ಶನ ನೀಡುವ ಉದ್ದೇಶ ಹೊಂದಲಾಗಿದೆ. ಸದ್ಯಕ್ಕೆ ತುಮಕೂರು, ಚಿತ್ರದುರ್ಗ, ಹಾವೇರಿ ಹಾಗೂ ದಾವಣಗೆರೆಯಲ್ಲಿ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಕೇತ್ ಟ್ರಸ್ಟ್ ನ ಎಸ್ ಸುರೇಂದ್ರ ನಾಥ್ ಹೇಳಿದರು.
ಬೆಂಗಳೂರಿನ
ಹೊರಗಡೆ
ಎರಡನೇ
ಸ್ತರದ
ನಗರಗಳಲ್ಲಿ
ನಾಟಕ
ಪ್ರದರ್ಶನ,
ರಂಗ
ಶಿಬಿರಗಳನ್ನು
ಆಯೋಜಿಸುವುದು
ಶಂಕರ್
ಕನಸಾಗಿತ್ತು.
ಈ
ತಿಂಗಳ
ರಂಗಶಂಕರ
ಲೋಕ
ಸಂಚಾರ
ಬಳಿಕ
ಫೆಬ್ರವರಿಯಲ್ಲಿ
ಮೈಸೂರು,
ಮಂಡ್ಯ,
ಕೆ.ಆರ್
ಪೇಟೆಗಳಲ್ಲಿ
ಲೋಕ
ಸಂಚಾರ
ಮುಂದುವರೆಯಲಿದೆ.
ಒಟ್ಟು
15
ಜನರ
ಎರಡು
ತಂಡ
ನಾಟಕ
ಪ್ರದರ್ಶನ
ನೀಡಲಿದೆ.
ಇವರಿಗೆ
ರಂಗಶಂಕರ
ವತಿಯಿಂದ
ವೇತನ
ನೀಡಲಾಗುತ್ತದೆ
ಎಂದು
ನಟಿ,
ಸಂಕೇತ್
ಟ್ರಪ್ಟ್
ವ್ಯವಸ್ಥಾಪಕಿ
ಅರುಂಧತಿ
ನಾಗ್
ತಿಳಿಸಿದರು.
ಎಲ್ಲೆಲ್ಲಿ
ಯಾವ
ಯಾವ
ನಾಟಕ
ವಿವರ
:
ದಾವಣಗೆರೆಯ
ಚಿಂದೋಡಿ
ಲೀಲಾ
ಕಲಾಕ್ಷೇತ್ರದಲ್ಲಿ
*
ಜನವರಿ
21ರಂದು
ಮುಲ್ಲಾ
ನಾಸಿರುದ್ದೀನ್
*
ಜನವರಿ
22ರಂದು
ದ್ವೀಪ
*
ಜನವರಿ
23ರಂದು
ಗುಮ್ಮ
ಬಂದ
ಗುಮ್ಮ
*
ಜನವರಿ.24ರಂದು
ಮರ್ಯಾದೆ
ಪ್ರಶ್ನೆ
ನಾಟಕ
ಹಾವೇರಿ
ಜಿಲ್ಲೆಯ
ಶೇಷಗಿರಿಯ
ಸಿಎಂ
ಉದಾಸಿ
ಕಲಾಕ್ಷೇತ್ರದಲ್ಲಿ
*
ಜನವರಿ
22
ರಂದು
ಗುಮ್ಮ
ಬಂದ
ಗುಮ್ಮ
*
ಜನವರಿ
23ರಂದು
ಮರ್ಯಾದೆ
ಪ್ರಶ್ನೆ
ನಾಟಕ
ಪ್ರದರ್ಶನ
ತುಮಕೂರಿನ
ಎಸ್ಐಟಿ
ಬಿರ್ಲಾ
ರಂಗಮಂದಿರದಲ್ಲಿ.
*
ಜನವರಿ
22
ರಂದು
ಮರ್ಯಾದೆ
ಪ್ರಶ್ನೆ
*
ಜನವರಿ
23
ರಂದು
ದ್ವೀಪ
*
ಜನವರಿ
24
ರಂದು
ಗುಮ್ಮ
ಬಂದ
ಗುಮ್ಮ
ನಾಟಕ
ಪ್ರದರ್ಶನವಿದೆ.
ಚಿತ್ರದುರ್ಗದ
ಸಾಣೇಹಳ್ಳಿಯಲ್ಲಿ
*
ಜನವರಿ
21ರಂದು
ಗುಮ್ಮ
ಬಂದ
ಗುಮ್ಮ
ನಾಟಕ
ಏರ್ಪಡಿಸಲಾಗಿದೆ
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಂಗಭೂಮಿಯನ್ನು ಪಠ್ಯೇತರ ಚಟವಟಿಕೆಯಾಗಿ ಆಳವಡಿಸಲು ಶಿಕ್ಷಕರಿಗೆ ನಾಟಕ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಶಂಕರ್ನಾಗ್ರ ಆಶಯದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ನಾಟಕ ಪ್ರದರ್ಶನ ಕೊಂಡೊಯ್ಯುವುದು ನಮ್ಮ ಉದ್ದೇಶ ಎಂದು ಸಾಹಿತಿ ಗಿರೀಶ್ ಕಾರ್ನಾಡ್ ಹೇಳಿದರು. ಸುದ್ದಿ ಗೋಷ್ಠಿಯಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್, ರಂಗಕರ್ಮಿ ಸುರೇಶ್, ನಿರ್ದೇಶಕ ಎಸ್ ಸುರೇಂದ್ರನಾಥ್ ಉಪಸ್ಥಿತರಿದ್ದರು.