ತಾಂಜೇನಿಯಾ ಯುವತಿ ಮೇಲೆ ಹಲ್ಲೆ, ವರದಿ ಕೇಳಿದ ರಾಹುಲ್
ಬೆಂಗಳೂರು, ಫೆಬ್ರವರಿ 04 : ಉದ್ಯಾನ ನಗರಿ ಬೆಂಗಳೂರಿನಲ್ಲಿ ತಾಂಜೇನಿಯಾ ಮೂಲದ ಯುವತಿ ಮೇಲೆ ನಡೆದ ಹಲ್ಲೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಖಂಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಘಟನೆ ಕುರಿತು ವರದಿ ನೀಡುವಂತೆ ಕರ್ನಾಟಕ ಕಾಂಗ್ರೆಸ್ಗೆ ಸೂಚಿಸಿದ್ದಾರೆ.[ವಿಡಿಯೋ : ತಾಂಜಾನಿಯಾ ಮಹಿಳೆ ಮೇಲೆ ದಾಳಿ]
ಕರ್ನಾಟಕ
ಕಾಂಗ್ರೆಸ್
ಉಸ್ತುವಾರಿ
ದಿಗ್ವಿಜಯ್
ಸಿಂಗ್
ಅವರು
ಗುರುವಾರ
ಬೆಳಗ್ಗೆ
ಈ
ಕುರಿತು
ಟ್ವಿಟ್
ಮಾಡಿದ್ದು,
ರಾಹುಲ್
ಗಾಂಧಿ
ಅವರು
ಯುವತಿ
ಮೇಲೆ
ನಡೆದ
ಹಲ್ಲೆಯನ್ನು
ಖಂಡಿಸಿದ್ದಾರೆ.
ಈ
ಬಗ್ಗೆ
ವರದಿ
ನೀಡುವಂತೆ
ಸೂಚನೆ
ನೀಡಿದ್ದಾರೆ
ಎಂದು
ತಿಳಿಸಿದ್ದಾರೆ.
ಜನವರಿ
31ರ
ರಾತ್ರಿ
ತಾಂಜೇನಿಯಾ
ಮೂಲದ
ಯುವತಿಯನ್ನು
ಅರೆಬೆತ್ತಲೆಗೊಳಿಸಿ
ಹಲ್ಲೆ
ಮಾಡಲಾಗಿತ್ತು.
[ತಾಂಜಾನಿಯಾ
ಯುವತಿಯ
ಬೆತ್ತಲೆಗೊಳಿಸಿ
ಹಲ್ಲೆ]
4
ಜನರ
ಬಂಧನ
:
ಸೋಲದೇವನಹಳ್ಳಿ
ಸಮೀಪದ
ಗಣಪತಿಪುರದಲ್ಲಿ
ಸ್ಥಳೀಯರು
ತಾಂಜೇನಿಯಾ
ಮೂಲದ
ಯುವತಿಯನ್ನು
ಅರೆಬೆತ್ತಲೆಗೊಳಿಸಿ
ಹಲ್ಲೆ
ಮಾಡಿದ್ದರು.
ಈ
ಪ್ರಕರಣಕ್ಕೆ
ಸಂಬಂಧಿಸಿದಂತೆ
ನಾಲ್ವರು
ಆರೋಪಿಗಳನ್ನು
ಸೋಲದೇವನಹಳ್ಳಿ
ಪೊಲೀಸರು
ಬಂಧಿಸಿದ್ದಾರೆ.
[ಮಹಿಳಾ
ದೌರ್ಜನ್ಯ
ವಿರುದ್ಧ
ದನಿಯಾದ
ವಾಮಾ
ಬಲ್ದೋಟ]
Strongly condemn Incident with the Tanzanian Lady in Bangalore. Police must act strongly against the culprits.
— digvijaya singh (@digvijaya_28) February 4, 2016
ರಾಹುಲ್ ಗಾಂಧಿ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆ ಕುರಿತು ವಿವರವಾದ ವರದಿ ನೀಡುವಂತೆ ಕರ್ನಾಟಕ ಕಾಂಗ್ರೆಸ್ಗೆ ಸೂಚಿಸಿದ್ದಾರೆ.
Rahul Gandhi asks Karnataka Govt to explain and send report immediately.
— digvijaya singh (@digvijaya_28) February 4, 2016
ಜನವರಿ 31ರಂದು ಯುವತಿ ಮೇಲೆ ಹಲ್ಲೆ ನಡೆದ ಸ್ಥಳಕ್ಕೆ ಗುರುವಾರ ಬೆಳಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು ಭೇಟಿ ನೀಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಂದ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ.