ಬುಧವಾರ ರಾತ್ರಿ ತನಕ ನಿಷೇಧಾಜ್ಞೆ ಮುಂದುವರಿಕೆ
ಬೆಂಗಳೂರು, ಸೆಪ್ಟೆಂಬರ್ 13 : ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆಯನ್ನು ಬುಧವಾರ ರಾತ್ರಿ ತನಕ ವಿಸ್ತರಣೆ ಮಾಡಲಾಗಿದೆ. 16 ಠಾಣಾ ವ್ಯಾಪ್ತಿಯಲ್ಲಿರುವ ಕರ್ಪ್ಯೂವನ್ನು ಮುಂದುವರೆಸುವ ಬಗ್ಗೆ ಸಂಜೆ ವೇಳೆಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.
ಬೆಂಗಳೂರು
ನಗರ
ಪೊಲೀಸ್
ಆಯುಕ್ತ
ಎನ್.ಎಸ್.ಮೇಘರಿಕ್
ಅವರು
ಸೋಮವಾರ
ಸಂಜೆ
17
ಗಂಟೆಗಳ
ಅವಧಿಗೆ
ಸಿಆರ್ಪಿಸಿ
144
ಸೆಕ್ಷನ್
ಅನ್ವಯ
ನಿಷೇಧಾಜ್ಞೆ
ಜಾರಿಗೊಳಿಸಿ
ಆದೇಶ
ಹೊರಡಿಸಿದ್ದರು.
ಇದನ್ನು
ಬುಧವಾರ
ರಾತ್ರಿ
ತನಕ
ವಿಸ್ತರಣೆ
ಮಾಡಲಾಗಿದೆ.[ಬೆಂಗಳೂರಿನಲ್ಲಿ
144
ಸೆಕ್ಷನ್
ಅನ್ವಯ
ನಿಷೇಧಾಜ್ಞೆ
ಜಾರಿ]
ಸೋಮವಾರ ಮಧ್ಯರಾತ್ರಿಯಿಂದ ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂವನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಕರ್ಪ್ಯೂ ಮುಂದುವರೆಸುವ ಬಗ್ಗೆ ಇಂದು ಸಂಜೆ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ.[ಚಿತ್ರಗಳು : ಹಿಂಸಾಚಾರಕ್ಕೆ ತಿರುಗಿದ ಕಾವೇರಿ ಪ್ರತಿಭಟನೆ]
ಎಲ್ಲಿ ಕರ್ಪ್ಯೂ ಜಾರಿಯಲ್ಲಿದೆ? : ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಬ್ಯಾಟರಾಯನಪುರ, ಕೆಂಗೇರಿ, ಮಾಗಡಿ ರೋಡ್, ರಾಜಾಜಿನಗರ, ರಾಜರಾಜೇಶ್ವರಿ ನಗರ, ಕೆಪಿ ಅಗ್ರಹಾರ, ಚಂದ್ರಾಲೇಔಟ್, ಯಶವಂತಪುರ, ಮಹಾಲಕ್ಷೀ ಲೇಔಟ್, ಪೀಣ್ಯ, ಆರ್ ಎಂಸಿ ಯಾರ್ಡ್. ನಂದಿನಿ ಲೇಔಟ್, ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿಯಲ್ಲಿದೆ.