ಪರಪ್ಪನ ಅಗ್ರಹಾರ : ತರಕಾರಿ ವಾಹನದಲ್ಲಿ ಕೈದಿ ಪರಾರಿ!
ಬೆಂಗಳೂರು, ಆಗಸ್ಟ್ 31 : ಪರಪ್ಪನ ಅಗ್ರಹಾರ ಜೈಲಿನ ಭದ್ರತೆ ಬಗ್ಗೆ ಮತ್ತೆ ಪ್ರಶ್ನೆ ಹುಟ್ಟಿಕೊಂಡಿದೆ. ವಿಚಾರಣಾಧೀನ ಕೈದಿಯೊಬ್ಬ ಬುಧವಾರ ಬೆಳಗ್ಗೆ ಜೈಲಿನಿಂದ ಪರಾರಿಯಾಗಿದ್ದಾನೆ. ಕೈದಿ ಹುಡುಕಾಟಕ್ಕಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ.
ಬುಧವಾರ
ಮುಂಜಾನೆ
4
ಗಂಟೆ
ಸುಮಾರಿಗೆ
ಜೈಲಿಗೆ
ತರಕಾರಿ
ತಂದಿದ್ದ
ವಾಹನದಲ್ಲಿ
ಡೇವಿಡ್
ಎಂಬ
ಕೈದಿ
ಪರಾರಿಯಾಗಿದ್ದಾನೆ.
ಪರಪ್ಪನ
ಅಗ್ರಹಾರ
ಪೊಲೀಸ್
ಠಾಣೆಗೆ
ಜೈಲಿನ
ಸಿಬ್ಬಂದಿ
ಈ
ಕುರಿತು
ದೂರು
ನೀಡಿದ್ದಾರೆ.
ಪೊಲೀಸರು
ವಿಶೇಷ
ತಂಡ
ರಚನೆ
ಮಾಡಿದ್ದಾರೆ.[ಕಲಬುರಗಿ
ಜೈಲಿನಿಂದ
27
ಕೈದಿಗಳಿಗೆ
ಬಿಡುಗಡೆ
ಭಾಗ್ಯ]
ಪರಪ್ಪನ ಅಗ್ರಹಾರ ಜೈಲಿಗೆ ಪ್ರತಿದಿನ ತರಕಾರಿ ಹೊತ್ತ ಲಾರಿ ಎರಡು ಬಾರಿ ಆಗಮಿಸುತ್ತದೆ. ಇಂದು ಮುಂಜಾನೆ 3 ಗಂಟೆಗೆ ಬಂದಿದ್ದ ಲಾರಿ 4 ಗಂಟೆ ಸುಮಾರಿಗೆ ವಾಪಸ್ ಹೋಗಿದೆ. ಆಗ ಡೇವಿಡ್ ಪರಾರಿಯಾಗಿದ್ದಾನೆ.[ಜೈಲಿನ ಹೆಬ್ಬಾಗಿಲಿನಿಂದಲೇ ಖೈದಿ ಎಸ್ಕೇಪ್]
ಇದೇ ಮೊದಲಲ್ಲ : ಪರಪ್ಪನ ಅಗ್ರಹಾರ ಜೈಲಿನಿಂದ ಕೈದಿ ಪರಾರಿಯಾಗುತ್ತಿರುವುದು ಇದೇ ಮೊದಲಲ್ಲ. 2013ರ ಸೆಪ್ಟೆಂಬರ್ನಲ್ಲಿ ಸೈಕೋ ಕಿಲ್ಲರ್ ಜಯಶಂಕರ್ ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ. ಜೈಲಿನಿಂದ ತಪ್ಪಿಸಿಕೊಳ್ಳುವಾಗ ಕಾಲಿಗೆ ಗಾಯಗಳಾಗಿತ್ತು. ಆದ್ದರಿಂದ ಹೆಚ್ಚು ದೂರ ಹೋಗಲಾಗದೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.[ಪರಾರಿಯಾಗಿದ್ದ ಜೈ ಶಂಕರ್ ಸಿಕ್ಕಿಬಿದ್ದ]
2015ರ ಏಪ್ರಿಲ್ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಚಿತ್ರದುರ್ಗ ಜಿಲ್ಲೆಯ ಮಂಜುನಾಥ (33) ಎಂಬ ಕೈದಿ ಸಂದರ್ಶಕರಿಗೆ ಕೊಡುವ ಗೇಟ್ಪಾಸ್ ಬಳಸಿಕೊಂಡು ಜೈಲಿನ ಮುಖ್ಯದ್ವಾರದ ಮೂಲಕವೇ ಪರಾರಿಯಾಗಿದ್ದ. ನಂತರ, ಚಿತ್ರದುರ್ಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.