ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಶಿಕಲಾ, ಜಯಾ ಬೆಂಬಲಿಗರ ಮಾರಾಮಾರಿ; ಪರಿಸ್ಥಿತಿ ಉದ್ವಿಗ್ನ

ಶಶಿಕಲಾ ಬೆಂಗಳೂರಿಗೆ ಬರುತ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನವಾಗಿದೆ. ಶಶಿಕಲಾ ನಟರಾಜನ್ ವಿರುದ್ಧ ಆಕ್ರೋಶಗೊಂಡಿರುವ ಜಯಲಲಿತಾ ಅಭಿಮಾನಿಗಳು ಚಿನ್ನಮ್ಮನ ಅಭಿಮಾನಿಗಳ ಕಾರುಗಳ ಮೇಲೆ ಕಲ್ಲು ತೂರಲು ಆರಂಭಿಸಿದ್ದಾರೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಶಶಿಕಲಾ ಬೆಂಗಳೂರಿಗೆ ಬರುತ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನವಾಗಿದೆ. ಶಶಿಕಲಾ ನಟರಾಜನ್ ವಿರುದ್ಧ ಆಕ್ರೋಶಗೊಂಡಿರುವ ಜಯಲಲಿತಾ ಅಭಿಮಾನಿಗಳು ಚಿನ್ನಮ್ಮನ ಅಭಿಮಾನಿಗಳ ಕಾರುಗಳ ಮೇಲೆ ಕಲ್ಲು ತೂರಲು ಆರಂಭಿಸಿದ್ದಾರೆ. ಇದರಿಂದ ಪರಪ್ಪನ ಅಗ್ರಹಾರದ ಸುತ್ತಾ ಪರಿಸ್ಥಿತಿ ಕಾವೇರಿದೆ.

5 ಸ್ಕಾರ್ಪಿಯೋ ಮತ್ತು ಒಂದು ಇನ್ನೊವಾ ಕಾರು ಕಲ್ಲುತೂರಾಟದಿಂದ ಜಖಂಗೊಂಡಿದೆ. ಶಶಿಕಲಾ ಜಯಲಲಿತಾರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಜಯಾ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮೊರೆ ಹೋಗಿದ್ದಾರೆ.[LIVE: ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ನಟರಾಜನ್ ಆಗಮನ]

Parappana Agrahara: Sasikala followers vehicle attacked

ಕೈಯಿಂದಲೇ ಗುದ್ದಿ ವ್ಯಕ್ತಿಯೊಬ್ಬ ಕಾರಿನ ಗ್ಲಾಸುಗಳನ್ನು ಪುಡಿ ಪುಡಿ ಮಾಡಿದ್ದಾನೆ. ಪರಪ್ಪನ ಅಗ್ರಹಾರದ ಸುತ್ತಾ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸಮರೋಪಾದಿಯಲ್ಲಿ ಪೊಲೀಸರು ರಕ್ಷಣಾ ಕೆಲಸದಲ್ಲಿ ನಿರತರಾಗಿದ್ದಾರೆ.

English summary
Jayalalitha’s followers attacked on Sasikala followers in the Parappana Agrahara premises. Police cleared crowd by lathi charge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X