ಬೆಂಗಳೂರು : ಜೀವಂತ ಹೃದಯ ಸಾಗುತ್ತಿದೆ ದಾರಿ ಬಿಡಿ
ಬೆಂಗಳೂರು, ಜುಲೈ 31 : ಬೆಂಗಳೂರು ಇಂದು ಮತ್ತೊಂದು ಜೀವಂತ ಹೃದಯ ಸಾಗಣೆಗೆ ಸಾಕ್ಷಿಯಾಗಲಿದೆ. ಯಶವಂತಪುರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಸಂಚಾರಿ ಪೊಲೀಸರು ಆಂಬ್ಯುಲೆನ್ಸ್ ಸಂಚಾರಕ್ಕಾಗಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದಾರೆ.
ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯ ಸಾಗಣೆ ಮಾಡಲಾಗುತ್ತದೆ. 17 ವರ್ಷದ ಯುವಕನ ಹೃದಯವನ್ನು 43 ವರ್ಷದ ವ್ಯಕ್ತಿಗೆ ಆಳವಡಿಸಲಾಗುತ್ತದೆ. [ಅಂಗಾಂಗ ದಾನ ಮಾಡಿ ನಾಲ್ವರಿಗೆ ಮರು ಜೀವ ನೀಡಿದರು]
ಅಂದಹಾಗೆ ಕಳೆದ ಗುರುವಾರ ಮತ್ತು ಭಾನುವಾರ ಬೆಂಗಳೂರು ಎರಡು ಜೀವಂತ ಹೃದಯ ಸಾಗಣೆಗೆ ಸಾಕ್ಷಿಯಾಗಿತ್ತು. ಜುಲೈ 23ರ ಗುರುವಾರ ಮಂಡ್ಯ ಮೂಲದ 22 ವರ್ಷದ ಚೇತನ್ ಹೃದಯವನ್ನು ದಾನ ಮಾಡಿದ್ದರು. ಸಾಗರ್ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಲಾಗಿತ್ತು. [ಸಾವಿನ ಬಳಿಕ ಮತ್ತೊಂದು ಜೀವಕ್ಕೆ ಚೇತನ ತುಂಬಿದ ಚೇತನ್]
ಜುಲೈ
26
ಭಾನುವಾರ
ಬನ್ನೇರುಘಟ್ಟ
ರಸ್ತೆಯ
ಸಾಗರ್
ಆಸ್ಪತ್ರೆಯಿಂದ
ಹೊಸೂರು
ರಸ್ತೆಯಲ್ಲಿರುವ
ನಾರಾಯಣ
ಹೃದಯಾಲಯಕ್ಕೆ
ಜೀವಂತ
ಹೃದಯವನ್ನು
ತೆಗೆದುಕೊಂಡು
ಹೋಗಲಾಗಿತ್ತು.
ಚೆನ್ನೈ
ಮೂಲದ
ಇಳವರಸನ್
(32)
ತಮ್ಮ
ಹೃದಯ,
ಕಿಡ್ನಿ,
ಕಣ್ಣು,
ಲೀವರ್
ದಾನ
ಮಾಡಿದ್ದರು.
Dear Friends,BTP making another signal free Corridor to transport "LIVE HEART" today around 11AM. The LIVE HEART is...
Posted by Bengaluru Traffic Police onThursday, July 30, 2015
ಹೃದಯ ದಾನದ ಪ್ರಕರಣಗಳು
*
2014ರಲ್ಲಿ
ಎರಡು
ಬಾರಿ
ಬೆಂಗಳೂರಿನಿಂದ
ಚೆನ್ನೈಗೆ
ಜೀವಂತ
ಹೃದಯವನ್ನು
ಸಾಗಣೆ
ಮಾಡಲಾಗಿತ್ತು
*
2015ರ
ಜನವರಿಯಲ್ಲಿ
ಎಂಎಸ್
ರಾಮಯ್ಯ
ಆಸ್ಪತ್ರೆಯಿಂದ
ಬಿಜಿಎಸ್
ಆಸ್ಪತ್ರೆಗೆ
ಹೃದಯ
ಸಾಗಣೆ
ಮಾಡಲಾಗಿತ್ತು
*
2015ರ
ಫೆ.
28ರಂದು
ಬೆಂಗಳೂರಿನಿಂದ
ಹೈದರಾಬಾದ್
ಜೀವಂತ
ಹೃದಯವನ್ನು
ಸಾಗಣೆ
ಮಾಡಲಾಗಿತ್ತು
*
2015ರ
ಏ.13ರಂದು
ಮಂಗಳೂರಿನಿಂದ
ಜೀವಂತ
ಹೃದಯವನ್ನು
ಬಿಜಿಎಸ್
ಆಸ್ಪತ್ರೆಗೆ
ತೆಗೆದುಕೊಂಡು
ಬರಲಾಗಿತ್ತು
*
2015ರ
ಜುಲೈ
23ರಂದು
ಚೇತನ್
ಹೃದಯವನ್ನು
ದಾನ
ಮಾಡಲಾಗಿತ್ತು
*
2015ರ
ಜುಲೈ
26ರಂದು
ಇಳವರಸನ್
ಹೃದಯ
ದಾನ
ಮಾಡಿದ್ದರು.