ಬೆಂಗಳೂರು ನಗರಕ್ಕೆ ಬೇಸಿಗೆಯಲ್ಲಿ ನೀರಿನ ಕೊರತೆ ಇಲ್ಲ
ಬೆಂಗಳೂರು, ಜ.21 : ಈ ಬಾರಿ ಬೇಸಿಗೆಯಲ್ಲಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಜಲಮಂಡಳಿ ಅಧ್ಯಕ್ಷರು ಭರವಸೆ ವ್ಯಕ್ತಪಡಿಸಿದ್ದಾರೆ. ನಗರದ ನೀರಿನ ಬೇಡಿಕೆಯನ್ನು ತಣಿಸಲು ಸಾಕಾಗುವಷ್ಟು ನೀರಿದೆ ಎಂದು ಅವರು ಹೇಳಿದ್ದಾರೆ.
ಬೃಹತ್
ಬೆಂಗಳೂರು
ಮಹಾನಗರ
ಪಾಲಿಕೆ
ಮೇಯರ್
ಎನ್.ಶಾಂತಕುಮಾರಿ
ಅವರ
ಅಧ್ಯಕ್ಷತೆಯಲ್ಲಿ
ಮಂಗಳವಾರ
ನಗರದ
ಕುಡಿಯುವ
ನೀರಿನ
ಸಮಸ್ಯೆ
ಬಗ್ಗೆ
ಚರ್ಚಿಸಲು
ಸಭೆ
ನಡೆಯಿತು.
ಸಭೆಯಲ್ಲಿ
ಮಾತನಾಡಿದ
ಜಲಮಂಡಳಿ
ಅಧ್ಯಕ್ಷ
ಅಂಜುಮ್
ಪರ್ವೇಜ್
ನಗರದಲ್ಲಿ
ನೀರಿನ
ಸಮಸ್ಯೆ
ಉಂಟಾಗುವುದಿಲ್ಲ
ಎಂದರು.
ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರಿನ ಸಂಗ್ರಹವಿದೆ. ಆದ್ದರಿಂದ, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]
ಕಾವೇರಿ ಮೂಲದಿಂದ 1,400 ದಶಲಕ್ಷ ಲೀಟರ್ (ಎಂಎಲ್ಡಿ) ನೀರು, ಇತರ ಮೂಲಗಳಿಂದ 400 ಎಂಎಲ್ಡಿ ನೀರು ನಗರಕ್ಕೆ ಪ್ರತಿದಿನ ಪೂರೈಕೆಯಾಗುತ್ತಿದೆ. ನಗರದ ಬೇಡಿಕೆಗೆ ಇಷ್ಟು ನೀರು ಸಾಕಾಗಲಿದ್ದು, ಬೇಸಿಗೆ ಅವಧಿಯಲ್ಲೂ ನೀರು ಪೂರೈಸಲು ಯಾವುದೇ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದರು. [ಬೆಂಗಳೂರಿನಲ್ಲಿ ನೀರಿಗೆ ಎಷ್ಟು ಹಣ ನೀಡುತ್ತೀರಿ?]
ಒಂದು ವೇಳೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾದರೆ ವಿದ್ಯುತ್ ಉತ್ಪಾದನೆಗೆ ಮೀಸಲಿರುವ ನೀರನ್ನು ಕುಡಿಯುವ ನೀರಿನ ಪೂರೈಕೆಗಾಗಿ ಬಳಸಿಕೊಳ್ಳಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಒಪ್ಪಿಗೆ ನೀಡಿದೆ ಎಂದು ಸಭೆಯಲ್ಲಿ ತಿಳಿಸಿದರು.
ಜಲಮಂಡಳಿಗೆ ಅಗತ್ಯ ಸೌಲಭ್ಯಗಳು ಸಿಕ್ಕರೆ ನೀರಿನ ಪೂರೈಕೆಯಲ್ಲಿ ವಿಳಂಬವಾಗುವುದಿಲ್ಲ. ಬಿಬಿಎಂಪಿ 220 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದಾಗ ಜಲಮಂಡಳಿಯಲ್ಲಿ ಎಷ್ಟು ಸೌಲಭ್ಯಗಳಿದ್ದವೋ ಈಗಲೂ ಅಷ್ಟೇ ಇವೆ. ಆದ್ದರಿಂದ ನೀರಿನ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ ಎಂದರು.