ಕೆಎಸ್ಆರ್ಟಿಸಿ, ಖಾಸಗಿ ಬಸ್ ಬೆಂಗಳೂರು ಪ್ರವೇಶಿಸುವಂತಿಲ್ಲ
ಬೆಂಗಳೂರು, ಜನವರಿ 28 : ಬೆಂಗಳೂರು ನಗರದ ಒಳಗೆ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಸುಗಳ ಪ್ರವೇಶವನ್ನು ನಿರ್ಬಂಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಫೆ.1 ರಿಂದ 10ರ ತನಕ ಈ ಆದೇಶ ಜಾರಿಯಲ್ಲಿರುತ್ತದೆ.
ಅರಮನೆ
ಮೈದಾನದಲ್ಲಿ
ಫೆಬ್ರವರಿ
3
ರಿಂದ
5ರವರೆಗೆ
ಜಾಗತಿಕ
ಬಂಡವಾಳ
ಹೂಡಿಕೆದಾರರ
ಸಮಾವೇಶ
ನಡೆಯಲಿದ್ದು,
ಸಮಾವೇಶದ
ವೇಳೆ
ನಗರದಲ್ಲಿ
ಸಂಚಾರ
ದಟ್ಟಣೆ
ಮತ್ತು
ವಾಯು
ಮಾಲಿನ್ಯ
ನಿಯಂತ್ರಿಸಲು
ಕೆಎಸ್ಆರ್ಟಿಸಿ
ಮತ್ತು
ಖಾಸಗಿ
ಬಸ್ಸುಗಳ
ಸಂಚಾರವನ್ನು
ನಿಷೇಧಿಸಿ
ಆದೇಶ
ಹೊರಡಿಸಲಾಗಿದೆ.
[2016ರ
ಫೆಬ್ರವರಿಯಲ್ಲಿ
ಜಿಮ್]
ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಬಸ್ಸುಗಳು ರಾತ್ರಿ 11 ಗಂಟೆಯಿಂದ ಮುಂಜಾನೆ 4 ಗಂಟೆಯ ತನಕ ಮಾತ್ರ ನಗರವನ್ನು ಪ್ರವೇಶಿಸಬಹುದಾಗಿದೆ. ಹೊರ ರಾಜ್ಯಗಳಿಂದ ಆಗಮಿಸುವ ಬಸ್ಸುಗಳಿಗೂ ಈ ನಿಯಮ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. [ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?]
ಬಸ್ ಮಾಲೀಕರ ಅಸಮಾಧಾನ : ಬುಧವಾರ ಇನ್ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಸಾರಿಗೆ ಇಲಾಖೆ ಹಾಗೂ ಬೆಂಗಳೂರು ಸಂಚಾರ ವಿಭಾಗದ ಪೊಲೀಸರ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಖಾಸಗಿ ಬಸ್ ಮಾಲೀಕರು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. [ಕೆಎಸ್ಆರ್ ಟಿಸಿ ನೇಮಕಾತಿ, ಅರ್ಜಿ ಸಲ್ಲಿಸಲು ಫೆ.4 ಕೊನೆ ದಿನ]
ಸಾರಿಗೆ ಇಲಾಖೆಯ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಸ್ ಮಾಲೀಕರು, ಪ್ರಾಯೋಗಿಕವಾಗಿ ಇಂತಹ ಆದೇಶ ಜಾರಿಗೆ ತಂದು, ನಗರದೊಳಗೆ ಶಾಶ್ವತವಾಗಿ ಖಾಸಗಿ ಬಸ್ಸುಗಳು ಬರದಂತೆ ಮಾಡುವುದು ಸಾರಿಗೆ ಇಲಾಖೆಯ ಹುನ್ನಾರವಾಗಿದೆ ಎಂದು ದೂರಿದರು.
ಬಸವೇಶ್ವರ ಬಸ್ ನಿಲ್ದಾಣಕ್ಕೆ ಸ್ಥಳಾಂತರ : ಸಾರಿಗೆ ಇಲಾಖೆ ಸರ್ಕಾರಿ ಬಸ್ಸುಗಳು ನಗರಕ್ಕೆ ಪ್ರವೇಶಿಸಬಾರದು ಎಂದು ಆದೇಶ ಹೊರಡಿಸಿರುವುದರಿಂದ, ಮೆಜೆಸ್ಟಿಕ್ನಿಂದ ಸಂಚರಿಸುತ್ತಿದ್ದ ಎಲ್ಲಾ ಬಸ್ಸುಗಳನ್ನು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಕೆಎಸ್ಆರ್ಟಿಸಿಯ ಅಧಿಕಾರಿಗಳು ಹೇಳಿದ್ದಾರೆ.