ನಿಲುಮೆಗೆ 5: ಬೌದ್ಧಿಕ ದಾಸ್ಯದಲ್ಲಿ ಭಾರತ ಕೃತಿ ಲೋಕಾರ್ಪಣೆ
ಬೆಂಗಳೂರು, ಫೆ.28: ನಿಲುಮೆ ವೆಬ್ ತಾಣವು (nilume.net) ಕಳೆದ 5 ವರ್ಷಗಳಿಂದ ಕನ್ನಡ ಅಂತರ್ಜಾಲ ತಾಣದ ಮುಖ್ಯ ವೆಬ್ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಪುಸ್ತಕ ಪ್ರಕಾಶನ ಲೋಕಕ್ಕೆ ಕಾಲಿರಿಸುತ್ತಿದ್ದು, ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಕೃತಿಯನ್ನು ಜನರ ಮುಂದಿಡುತ್ತಿದೆ.
ನಿಲುಮೆ ತಾಣವು ಸಮಾಜ ವಿಜ್ಞಾನ, ಸಾಹಿತ್ಯ, ಕಲೆ, ಸಂಸ್ಕೃತಿ, ರಾಜಕೀಯ, ಕ್ರೀಡೆ, ವಾಣಿಜ್ಯ, ಮನೋರಂಜನೆ,ಪ್ರಚಲಿತ ವಿದ್ಯಾಮಾನಗಳು ಹೀಗೆ ಎಲ್ಲಾ ರೀತಿಯ ಬರಹಗಳಿಗೂ ಮತ್ತು ಮುಖ್ಯವಾಗಿ ನವ ಬರಹಗಾರರಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
ನಾವು ಪ್ರತಿನಿತ್ಯ ನಮ್ಮ ವೆಬ್ ತಾಣದಿಂದ 8 ಸಾವಿರಕ್ಕೂ ಹೆಚ್ಚಿನ ಓದುಗರಿಗೂ ಹಾಗೂ ನಿಲುಮೆ ಫೇಸ್ಬುಕ್ ಗುಂಪಿನ ಮೂಲಕ 20 ಸಾವಿರ ಜನರನ್ನು ತಲುಪುತ್ತಿದೆ. ಇತ್ತೀಚೆಗಷ್ಟೇ ನಿಲುಮೆ ಗುಂಪಿನ ಮೇಲೆ ನಡೆದ ದಾಳಿ ಬಗ್ಗೆ ಓದುಗರಿಗೆ ವಿವರಿಸಿ ಹೇಳಬೇಕಾಗಿಲ್ಲ.
ನಿಲುಮೆಯ
ಓದುಗರು,ಗೆಳೆಯರು,ಹಿತೈಷಿಗಳ
ಒತ್ತಾಸೆಯ
ಮೇರೆಗೆ,
5ನೇ
ವರ್ಷದ
ಸಂಭ್ರಮಾಚರಣೆಯ
ಶುಭ
ಸಂದರ್ಭದಲ್ಲಿ
"ನಿಲುಮೆ
ಪ್ರಕಾಶನ"ವನ್ನು
ಪ್ರಾರಂಭಿಸುತ್ತಿದೆ.
ನಿಲುಮೆ ಪ್ರಕಾಶನದ ಮೊದಲ ಪ್ರಕಟಣೆಯಾಗಿ,ಕುವೆಂಪು ವಿವಿಯ ಪ್ರೊ.ರಾಜಾರಾಮ್ ಹೆಗಡೆಯವರ "ಬೌದ್ಧಿಕ ದಾಸ್ಯದಲ್ಲಿ ಭಾರತ" ಪುಸ್ತಕವು,ಮಾರ್ಚ್ 1 ರ ಭಾನುವಾರ,ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ "ಮಿಥಿಕ್ ಸೊಸೈಟಿ"ಯಲ್ಲಿ ಬಿಡುಗಡೆಯಾಗಲಿದೆ.
ಅಂದು ಈ ಪುಸ್ತಕದ ಮೂಲ ಲೇಖಕರಾದ ಬೆಲ್ಜಿಯಂ ಗೆಂಟ್ ವಿವಿಯ ಪ್ರಾಧ್ಯಾಪಕರೂ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಮಾಜ ವಿಜ್ಞಾನಿಗಳಲ್ಲಿ ಗುರುತಿಸಲ್ಪಡುವ "ಪ್ರೊ.ಬಾಲಗಂಗಾಧರ",ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ|| ರಾ.ಗಣೇಶ್ ಹಾಗೂ,ಮೈಸೂರು ವಿವಿಯ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ ಪ್ರಧಾನ್ ಗುರುದತ್ತ ಅವರು ಅತಿಥಿಗಳಾಗಿ ಇರಲಿದ್ದಾರೆ.
ಈ ಪುಸ್ತಕದಲ್ಲಿ ವಸಾಹತುಶಹಿಯೂ ಹೇಗೆ ನಮ್ಮನ್ನು ಬೌದ್ಧಿಕವಾಗಿ ಬಂಧಿಸಿದೆ ಎಂಬುದನ್ನು ಅತ್ಯಂತ ಸರಳಭಾಷೆಯಲ್ಲಿ ಸಾಮಾನ್ಯ ಓದುಗರಿಗೂ ಮುಟ್ಟುವಂತೆ ಬರೆಯಲಾಗಿದೆ.ನಮ್ಮ ದೈನಂದಿನ ಅನುಭವಕ್ಕೂ ಮತ್ತು ಶಿಕ್ಷಣದಿಂದ ನಮ್ಮ ಸಮಾಜದ ಕುರಿತು ಪಡೆಯುವ ಜ್ಞಾನಕ್ಕೂ ಇರುವ ವ್ಯತ್ಯಾಸಗಳಿರುವುದು ಸಹ ನಮಗೆ ಒಂದಿಗೆ ಅರಿವಿಗೆ ಬರುತ್ತಿಲ್ಲ.ಬಂದರೂ ಅದರಿಂದ ಹೊರಬರುವುದು ಹೇಗೆ ಎಂಬ ಪ್ರಶ್ನೆಗಳು ಕಾಡುತ್ತವೆ. ಈ ಪುಸ್ತಕವು ನಮಗೆ ಆ ನಿಟ್ಟಿನಲ್ಲಿ ಸಹಾಯ ಮಾಡಬಲ್ಲದು.
ನಿಲುಮೆ ಬಳಗದ ಪರವಾಗಿ ರಾಕೇಶ್ ಶೆಟ್ಟಿ ಅವರು ಸಹೃದಯ ಓದುಗರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.