ಮೋದಿ ನಿರ್ಧಾರ ಗುರೂಜೀ ಸ್ವಾಗತಿಸಿದ್ದು ಯಾಕೆ ?
ಬೆಂಗಳೂರು, ನವೆಂಬರ್ 9 : ಎಲ್ಲರೂ ಸಮಾಧಾನವಾಗಿರಿ ಭ್ರಷ್ಟಾಚಾರದ ವಿರುದ್ಧ ಹೋರಾಡುವಾಗ ಈ ರೀತಿಯ ಬದಲಾವಣೆ ಅನಿವಾರ್ಯ ಎಂದು ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜೀ ತಿಳಿಸಿದ್ದಾರೆ.
ಬುಧವಾರ ಅವರು ಮೋದಿ ಸರ್ಕಾರದಿಂದ ಹೊಸದಾಗಿ 500, 1000 ರು ನೋಟುಗಳನ್ನು ಬದಲಿಸುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಇನ್ನು ಈ ವಿಷಯವಾಗಿ ಪ್ರತಿಕ್ರಿಯಿಸಿ, ಚಲಾವಣೆಯಲ್ಲಿರುವ ಹಣದ ಮೌಲವನ್ನು ವರ್ಧಿಸುವುದು ದೇಶಕ್ಕೆ ಒಳ್ಳೆಯದು, ಇದರಿಂದ ಕಪ್ಪುಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸಬಹುದು ಎಂದಿದ್ದಾರೆ.[ಐನೂರಕ್ಕೆ ಚಿಲ್ಲರೆಯಿಲ್ಲ, ತಿರಸ್ಕರಿಸಿದರೆ ಬಂಕ್ ಲೈಸನ್ಸ್ ಇಲ್ಲ]
ಐನೂರು ರು ನೋಟಿನ ಬದಲಾವಣೆ ಮತ್ತು ಸಾವಿರ ರು ನೋಟನ್ನು ಬ್ಯಾನ್ ಮಾಡಿರುವುದನ್ನು ಹಲವು ಉದ್ಯಮಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು ಮತ್ತು ಶ್ರೀ ಸಾಮಾನ್ಯರ ಶ್ಲಾಘನೆಗೆ ಕಾರಣವಾಗಿದೆ. ಇನ್ನೂ ಕೆಲವರು ಗೊಂದಲದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.[ಬೆಂಗಳೂರಿನಲ್ಲಿ ಐನೂರು ಸಾವಿರದ ಪರದಾಟದ ದನಿಗಳು]
ಸಾಮಾನ್ಯ ವರ್ಗ ಸಾವಧಾನದಿಂದ ಇದ್ದು ಭ್ರಷ್ಟಾಚಾರ ವಿರುದ್ಧ ಹೋರಾಡಬೇಕಿದೆ. ಸರ್ಕಾರದ ಈ ನಿರ್ಧಾರದಿಂದ ಯಾರು ಅಕ್ರಮವಾಗಿ ಹಣವನ್ನು ಸಂಪಾದಿಸಿದ್ದಾರೋ ಅವರಿಗೆ ಮಾತ್ರ ತೊಂದರೆಯಾಗಲಿದೆ.
ಸಮಾನ್ಯ ಮನುಷ್ಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಹಾಗಾಗಿ ಎಲ್ಲರೂ ಈ ವರ್ಷದಲ್ಲಿ ಭ್ರಷ್ಟತೆ ವಿರುದ್ಧ ಹೋರಾಡೋಣ ಎಂದು ತಿಳಿಸಿದ್ದಾರೆ.