ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ನಿರ್ಧಾರ ಗುರೂಜೀ ಸ್ವಾಗತಿಸಿದ್ದು ಯಾಕೆ ?

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 9 : ಎಲ್ಲರೂ ಸಮಾಧಾನವಾಗಿರಿ ಭ್ರಷ್ಟಾಚಾರದ ವಿರುದ್ಧ ಹೋರಾಡುವಾಗ ಈ ರೀತಿಯ ಬದಲಾವಣೆ ಅನಿವಾರ್ಯ ಎಂದು ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜೀ ತಿಳಿಸಿದ್ದಾರೆ.

ಬುಧವಾರ ಅವರು ಮೋದಿ ಸರ್ಕಾರದಿಂದ ಹೊಸದಾಗಿ 500, 1000 ರು ನೋಟುಗಳನ್ನು ಬದಲಿಸುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

new currency declared invalid- Sri Sri says stay calm

ಇನ್ನು ಈ ವಿಷಯವಾಗಿ ಪ್ರತಿಕ್ರಿಯಿಸಿ, ಚಲಾವಣೆಯಲ್ಲಿರುವ ಹಣದ ಮೌಲವನ್ನು ವರ್ಧಿಸುವುದು ದೇಶಕ್ಕೆ ಒಳ್ಳೆಯದು, ಇದರಿಂದ ಕಪ್ಪುಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸಬಹುದು ಎಂದಿದ್ದಾರೆ.[ಐನೂರಕ್ಕೆ ಚಿಲ್ಲರೆಯಿಲ್ಲ, ತಿರಸ್ಕರಿಸಿದರೆ ಬಂಕ್ ಲೈಸನ್ಸ್ ಇಲ್ಲ]

ಐನೂರು ರು ನೋಟಿನ ಬದಲಾವಣೆ ಮತ್ತು ಸಾವಿರ ರು ನೋಟನ್ನು ಬ್ಯಾನ್ ಮಾಡಿರುವುದನ್ನು ಹಲವು ಉದ್ಯಮಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು ಮತ್ತು ಶ್ರೀ ಸಾಮಾನ್ಯರ ಶ್ಲಾಘನೆಗೆ ಕಾರಣವಾಗಿದೆ. ಇನ್ನೂ ಕೆಲವರು ಗೊಂದಲದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.[ಬೆಂಗಳೂರಿನಲ್ಲಿ ಐನೂರು ಸಾವಿರದ ಪರದಾಟದ ದನಿಗಳು]

ಸಾಮಾನ್ಯ ವರ್ಗ ಸಾವಧಾನದಿಂದ ಇದ್ದು ಭ್ರಷ್ಟಾಚಾರ ವಿರುದ್ಧ ಹೋರಾಡಬೇಕಿದೆ. ಸರ್ಕಾರದ ಈ ನಿರ್ಧಾರದಿಂದ ಯಾರು ಅಕ್ರಮವಾಗಿ ಹಣವನ್ನು ಸಂಪಾದಿಸಿದ್ದಾರೋ ಅವರಿಗೆ ಮಾತ್ರ ತೊಂದರೆಯಾಗಲಿದೆ.

ಸಮಾನ್ಯ ಮನುಷ್ಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಹಾಗಾಗಿ ಎಲ್ಲರೂ ಈ ವರ್ಷದಲ್ಲಿ ಭ್ರಷ್ಟತೆ ವಿರುದ್ಧ ಹೋರಾಡೋಣ ಎಂದು ತಿಳಿಸಿದ್ದಾರೆ.

English summary
The founder of Art of Living Sri Sri Ravishankar on Wednesday welcomed the Modi government's move to demonitize Rs 500 and Rs 1,000 notes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X