ಖಳನಟರ ಸಾವು: ಮಾಸ್ತಿಗುಡಿ ಚಿತ್ರ ತಂಡದ ವಿರುದ್ಧ ಎಫ್ ಐಆರ್
ಅನಿಲ್ ಮತ್ತು ರಾಘವ್ ಉದಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ತಿಗುಡಿ ಚಿತ್ರ ತಂಡದ ಐವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಐಪಿಸಿ ಸೆಕ್ಷನ್ 304(A) ಹಾಗೂ 308 ಅನ್ವಯ ಕೇಸು ದಾಖಲಾಗಿದೆ.
ತಾವರೆಕೆರೆ, ನವೆಂಬರ್ 08 : ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಸಂದರ್ಭದಲ್ಲಿ ಖಳನಟ ಅನಿಲ್ ಹಾಗೂ ರಾಘವ್ ಉದಯ್ ಅವರ ದುರಂತ ಸಾವಿಗೀಡಾಗಿದ್ದು ತಿಳಿದಿರಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಪೊಲೀಸರು, ಚಿತ್ರತಂಡದ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.[ಮಾಸ್ತಿಗುಡಿ ದುರಂತ: ಇಬ್ಬರು ನಟರ ಶವಕ್ಕಾಗಿ ತೀವ್ರ ಶೋಧ]
ಅನಿಲ್
ಮತ್ತು
ರಾಘವ್
ಉದಯ್
ಅವರ
ಸಾವಿನ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಮಾಸ್ತಿಗುಡಿ
ಚಿತ್ರ
ತಂಡದ
ಐವರ
ವಿರುದ್ಧ
ಜಾಮೀನು
ರಹಿತ
ಪ್ರಕರಣ
ದಾಖಲಿಸಿಕೊಳ್ಳಲಾಗಿದೆ.ಐಪಿಸಿ
ಸೆಕ್ಷನ್
304(A)
ಹಾಗೂ
308
ಅನ್ವಯ
ಕೇಸು
ದಾಖಲಾಗಿದೆ.
ಈ
ಐವರನ್ನು
ಬಂಧಿಸಿ
ತನಿಖೆ
ನಡೆಸುವ
ಸಾಧ್ಯತೆಗಳಿವೆ.
[ಮಾಸ್ತಿಗುಡಿ
ದುರಂತ:
ಅನಿಲ್,
ಉದಯ್
ದುರಂತ
ಸಾವಿನ
ವಿಡಿಯೋ]
ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರನ್ನು ಎ-1 ಆರೋಪಿಯಾಗಿದ್ದು, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿಯನ್ನಾಗಿ ಪ್ರಕರಣ ದಾಖಲಿಸಲಾಗಿದೆ. ಸಾಹಸ ಸಹ ನಿರ್ದೇಶಕ ಎ-5 ಆರೋಪಿಯಾಗಿದ್ದು, ಚಿತ್ರದ ನಾಯಕ ನಟ ದುನಿಯಾ ವಿಜಯ್ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.[ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಬಂಧನ]
ಸೋಮವಾರ
ಮಧ್ಯಾಹ್ನ
ರಾಮನಗರ
ಜಿಲ್ಲೆ
ತಾವೆರೆಕೆರೆ
ಪೊಲೀಸ್
ಠಾಣೆ
ವ್ಯಾಪ್ತಿಯ
ತಿಪ್ಪಗೊಂಡನಹಳ್ಳಿ
ಕೆರೆಯಲ್ಲಿ
ಚಿತ್ರದ
ಕ್ಲೈಮ್ಯಾಕ್ಸ್
ಹಂತದ
ದೃಶ್ಯಗಳನ್ನು
ಚಿತ್ರೀಕರಣ
ಮಾಡಲಾಗುತ್ತಿತ್ತು.
ಹೆಲಿಕಾಪ್ಟರ್ನಿಂದ
ನೀರಿಗೆ
ಹಾರಿ
ನಾಯಕನಿಂದ
ತಪ್ಪಿಸಿಕೊಳ್ಳುವ
ಸನ್ನಿವೇಶದಲ್ಲಿ
ಇಬ್ಬರು
ನಟರು
ನೀರುಪಾಲಾಗಿದ್ದರು.
ಇಬ್ಬರ
ದೇಹ
ಇನ್ನೂ
ಪತ್ತೆಯಾಗಿಲ್ಲ
ಎಂದು
ಮಾಹಿತಿ
ಲಭಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್ ಡಿಆರ್ ಎಫ್), ಸ್ಥಳೀಯ ನುರಿತ ಈಜುಪಟುಗಳು, ಸ್ಕೂಬಾ ಡೈವರ್ ಗಳು, ರೋಬೊ ವಿಷನ್ ಕೆಮೆರಾವುಳ್ಳ ತಂಡ ಎಲ್ಲರೂ ಶವಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.