ನೀರು ಸಂರಕ್ಷಣೆಗೆ ಜಲಮಂಡಳಿಯ ಹೊಸ ತಂತ್ರ
ಬೆಂಗಳೂರು, ಜು. 01 : ನೀರು ಪೂರೈಕೆ ಹಾಗೂ ಸೋರಿಕೆ ಬೆಂಗಳೂರನ್ನು ತೀವ್ರತರವಾಗಿ ಕಾಡುತ್ತಿರುವ ಒಂದು ಬೃಹತ್ತಾದ ಸಮಸ್ಯೆ. ಇದನ್ನು ನಿವಾರಿಸಲು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಒಂದು ಉತ್ತಮ ಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಮುಂದಾಗಿದೆ.
ನಾಗರೀಕ ಪ್ರತಿನಿತ್ಯ 38 %ನಷ್ಟು ನೀರಿನ ಪೂರೈಕೆಯಾಗುತ್ತದೆ ಮತ್ತು ಸುಮಾರು 1,375 ಎಮ್ಎಲ್ಡಿ (million litres per day) ನೀರು ಅನಾವಶ್ಯಕ ಸೋರಿಕೆಯಾಗುತ್ತದೆ. ಇದನ್ನು ಉತ್ತಮ ನಿರ್ವಹಣೆ ಮೂಲಕ ನಿವಾರಿಸಲು ಸಾಧ್ಯ ಎಂದು ನಿರ್ಧರಿಸಿದ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಈ ಸಮಸ್ಯೆಗೆ ಸಂಬಂಧಿಸಿದಂತೆ ಮಾತ್ರವಲ್ಲ ಅಭಿವೃದ್ಧಿ ಚೌಕಟ್ಟಿಗೆ ಸಂಬಂಧಿಸಿದ ಆಸ್ತಿ, ನೆಲಮಟ್ಟದ ಜಲಾಶಯಗಳು ಹಾಗೂ ಒಳಚರಂಡಿ ಘಟಕಗಳಲ್ಲೂ ವಿಭಿನ್ನ ಬದಲಾವಣೆ ತರಲು ಪ್ರಯತ್ನ ಮಾಡುತ್ತಿದೆ.
2003 ರಲ್ಲಿ, ಮಂಡಳಿಯು 2025 ರ ಹೊತ್ತಿಗೆ ಬೆಂಗಳೂರು ನೀರು ಪೂರೈಕೆ ಮತ್ತು ಪರಿಸರ ನೈರ್ಮಲೀಕರಣ ಯೋಜನೆಗೆ ಸಂಬಂಧಪಟ್ಟಂತೆ, ಆಸ್ಟ್ರೇಲಿಯಾ ಏಜೆನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲಪ್ ಮೆಂಟ್ ನ ಪ್ರಾಯೋಜಕತ್ವದಲ್ಲಿ ಯೋಜನೆ ತಯಾರಿಸಿತ್ತು. ಈ ಯೋಜನೆಗೆ ಸುಮಾರು 11 ಕೋಟಿ ರೂ ವೆಚ್ಚ ತಗುಲಲಿದ್ದು, 2016 ರ ಆಗಸ್ಟ್ ಕ್ಕೆ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ ಎಂದು ಬಿಡಬ್ಲ್ಯೂಎಸ್ಎಸ್ ಬಿ ಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ.ಎನ್ ರವೀಂದ್ರ ಯೋಜನೆಯ ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಸಿಂಗಪೂರಿನ ಸಿಎಚ್2ಎಮ್ ಹಿಲ್ ಎಂಬ ಕಂಪನಿ ಯೋಜನೆ ರೂಪಿಸಲು ಮುಂದಾಗಿದೆ. ಈ ಹೊಸ ಯೋಜನೆ ವಿಶ್ವಾಸಾರ್ಹ ಹಾಗೂ ಸುಸ್ಥಿರವಾದುದಾಗಿರುವುದಲ್ಲದೇ, ಪರಿಣಾಮಕಾರಿ ಬಂಡವಾಳ ಹೂಡಿಕೆಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.ಅಲ್ಲದೇ ನೀರು ಸಂರಕ್ಷಣೆ , ಪುನರ್ಬಳಕೆ, ಮಳೆನೀರು ಕೊಯ್ಲು ಈ ಎಲ್ಲಾ ಪರಿಸರ ಸ್ನೇಹಿ ಕಾರ್ಯಕ್ಕೆ ಇದು ನೆರವಾಗಲಿದೆ ಎಂದು ಹೇಳಿದ್ದಾರೆ.