ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪ್ರಮುಖ ರಸ್ತೆಗೆ ಹುತಾತ್ಮ ಲೆ.ಕ. ನಿರಂಜನ್ ಹೆಸರು

ಈ ಹಿಂದೆ ದೊಡ್ಡಬೊಮ್ಮಸಂದ್ರದ ಮುಖ್ಯರಸ್ತೆಗೆ ನಿರಂಜನ್ ಹೆಸರಿಡಲು ಪಾಲಿಕೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ನಂತರ ಸ್ವಾತಂತ್ರ್ಯ ಯೋಧ ರಾಮಯ್ಯ ಹೆಸರಿಡುವಂತೆ ಮೇಯರ್ ಸೂಚಿಸಿದ್ದರು. ಹೀಗೆ ದೊಡ್ಡಬೊಮ್ಮಸಂದ್ರ ರಸ್ತೆಗೆ ಯಾರ ಹೆಸರು ಎಂಬ ಗೊಂದಲ ಮೂಡ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 22: ಪಠಾಣ್ ಕೋಟ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಕನ್ನಡಿಗ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಹೆಸರನ್ನು ಬೆಂಗಳೂರಿನ ಪ್ರಮುಖ ರಸ್ತೆಗೆ ಇಡಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಈ ಮೂಲಕ ನಿರಂಜನ್ ಹೆಸರು ನಾಮಕರಣಕ್ಕಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.

ರಸ್ತೆ ಕಸ ಗುಡಿಸುವ ಯಾಂತ್ರೀಕೃತ ಮೆಷೀನ್ ಗಳಿಗೆ ಸೋಮವಾರ ವಿಧಾನ ಸೌಧದ ಮುಂಭಾಗದಲ್ಲಿ ಚಾಲನೆ ನೀಡಿದ ನಂತರ ಮಾಧ್ಯಮಗಳ ಜತೆ ಜಾರ್ಜ್ ಈ ವಿಷಯವನ್ನು ಹಂಚಿಕೊಂಡರು.

Martyr Niranjan name to Bengaluru’s major road – KJ George

ಈ ಹಿಂದೆ ದೊಡ್ಡಬೊಮ್ಮಸಂದ್ರದ ಮುಖ್ಯರಸ್ತೆಯೊಂದಕ್ಕೆ ಲೆ.ಕ. ನಿರಂಜನ್ ಹೆಸರನ್ನು ನಾಮಕರಣ ಮಾಡಲು ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ನಂತರ ನಿರಂಜನ್ ಹೆಸರಿನ ಬದಲಿಗೆ ಸ್ವಾತಂತ್ರ್ಯ ಯೋಧ ರಾಮಯ್ಯ ಅವರ ಹೆಸರನ್ನು ನಾಮಕರಣ ಮಾಡುವಂತೆ ಮೇಯರ್ ಸೂಚಿಸಿದ್ದರು. ಹೀಗೆ ದೊಡ್ಡಬೊಮ್ಮಸಂದ್ರ ರಸ್ತೆಗೆ ಯಾರ ಹೆಸರು ಎಂಬ ಗೊಂದಲ ಮೂಡಿತ್ತು.

ಇದೀಗ ಈ ರಸ್ತೆ ನಾಮಕರಣ ವಿವಾದಕ್ಕೆ ಕೊನೆ ಹಾಡಲು ನಿರ್ಧರಿಸಿರುವ ಸರಕಾರ ದೊಡ್ಡಬೊಮ್ಮಸಂದ್ರ ರಸ್ತೆಯನ್ನು ಬಿಟ್ಟು ಬೇರೊಂದು ಪ್ರಮುಖ ರಸ್ತೆಗೆ ಲೆ.ಕರ್ನಲ್ ನಿರಂಜನ್ ಹೆಸರನ್ನಿಡಲು ತೀರ್ಮಾನಿಸಿದೆ.

English summary
Minister for Bengaluru Development KJ George on Monday said that they will be naming Lt Col Niranjan EK’s name to one of the major road in the city in his honour. Niranjan EK was the lieutenant colonel in the Indian Army, who lost his life in the 2016 Pathankot attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X