ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು
ಬೆಂಗಳೂರು, ಫೆಬ್ರವರಿ 17 : ರಸ್ತೆ ಅಪಘಾತದಲ್ಲಿ ದೇಹ ಎರಡು ತುಂಡಾದರೂ ನನ್ನ ದೇಹದ ಭಾಗಗಳನ್ನು ದಾನ ಮಾಡಿ ಎಂದು ಹೇಳಿದ ಯುವಕ ಇತರರ ಬಾಳಿಗೆ ಬೆಳಕಾಗಿದ್ದಾನೆ. ಅಪಘಾತದಲ್ಲಿ ಮೃತಪಟ್ಟ ಯುವಕನ ಎರಡು ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ.
ನೆಲಮಂಗಲ
ಬಳಿಯ
ರಾಷ್ಟ್ರೀಯ
ಹೆದ್ದಾರಿ
4ರ
ತಿಪ್ಪಗೊಂಡನಹಳ್ಳಿ
ಬಳಿ
ಮಂಗಳವಾರ
ಬೆಳಗ್ಗೆ
ನಡೆದ
ಅಪಘಾತದಲ್ಲಿ
ಎನ್.ಹರೀಶ್
(26)
ದೇಹ
ಎರಡು
ಭಾಗವಾಗಿತ್ತು.
ಆಂಬ್ಯುಲೆನ್ಸ್ನಲ್ಲಿ
ಸಾಗಿಸುವಾಗ
8
ನಿಮಿಷಗಳ
ಕಾಲ
ಜೀವ
ಹಿಡಿದುಕೊಂಡಿದ್ದ
ಹರೀಶ್
ತನ್ನ
ದೇಹದ
ಯಾವ
ಅಂಗಾಗಳನ್ನು
ದಾನ
ಮಾಡಲು
ಸಾಧ್ಯವೋ
ಅವೆಲ್ಲವನ್ನು
ದಾನ
ಮಾಡಿ
ಎಂದು
ಹೇಳಿ
ಪ್ರಾಣ
ಬಿಟ್ಟಿದ್ದಾರೆ.
[ಅಂಗಾಂಗ
ದಾನ
ಮಾಡಿ
ನಾಲ್ವರಿಗೆ
ಮರು
ಜೀವ
ನೀಡಿದರು]
ಜೀವ ತೆಗೆಯಿತು ಲಾರಿ : ಎನ್.ಹರೀಶ್ ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೆರೆಗೋಡನಹಳ್ಳಿಯವರು. ವೈಟ್ಫೀಲ್ಡ್ನಲ್ಲಿನ ಎಸ್ಎಸ್ಎಂಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಲಗ್ಗೆರೆಯಲ್ಲಿ ಸ್ನೇಹಿತರ ಜೊತೆ ವಾಸವಾಗಿದ್ದರು. [ಸತ್ತ ಕರುವಿಗೆ ನ್ಯಾಯ ಕೇಳುತ್ತಿರುವ 'ಪುಣ್ಯಕೋಟಿ'ಯ ಕಥೆ]
ಸೋಮವಾರ ಊರಿಗೆ ಹೋಗಿದ್ದ ಹರೀಶ್ ಮಂಗಳವಾರ ಬೆಳಗ್ಗೆ 8.30ರ ಸುಮಾರಿಗೆ ಊರಿನಿಂದ ಬೆಂಗಳೂರಿಗೆ ವಾಪಸ್ ಆಗುವಾಗ ತಿಪ್ಪಗೊಂಡನಹಳ್ಳಿ ಬಳಿ ಅವರ ಬೈಕ್ಗೆ ಲಾರಿ ಡಿಕ್ಕಿ ಹೊಡೆದಿದೆ. ರಸ್ತೆಯ ಮೇಲೆ ಬಿದ್ದ ಅವರ ಹೊಟ್ಟೆಯ ಮೇಲೆ ಲಾರಿಯ ಹತ್ತಿದೆ. ವೇಗವಾಗಿ ಸಾಗುತ್ತಿದ್ದ ಲಾರಿ, ಹರೀಶ್ ಅವರನ್ನು ಕೆಲವು ದೂರ ಎಳೆದುಕೊಂಡು ಹೋಗಿದೆ. [ಸಾವಿನ ಬಳಿಕ ಮತ್ತೊಂದು ಜೀವಕ್ಕೆ ಚೇತನ ತುಂಬಿದ ಚೇತನ್]
ಇದರಿಂದಾಗಿ ಹರೀಶ್ ದೇಹ ಎರಡು ಭಾಗವಾಗಿದೆ. ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಅವರನ್ನು ನೋಡಿದ ಸ್ಥಳೀಯರು ಆಂಬ್ಯುಲೆನ್ಸ್ಗೆ ಫೋನ್ ಮಾಡಿದ್ದಾರೆ. ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುವಾಗಲೇ ಹರೀಶ್ ಮೃತಪಟ್ಟಿದ್ದಾರೆ. ಆದರೆ, ಸಾಯುವ ಮೊದಲು ನನ್ನ ಅಂಗಾಗಗಳನ್ನು ದಾನ ಮಾಡಿ ಎಂದು ಹೇಳಿದ್ದರು.
ಹರೀಶ್ ಅವರ ಇಚ್ಛೆಯಂತೆ ಅವರ ಎರಡು ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ ಎಂದು ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಹೇಳಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ವರದರಾಜನನ್ನು ಬಂಧಿಸಲಾಗಿದೆ.