ಆದಾಯ ಮೀರಿ ಗಳಿಕೆ: ಸಿಟಿ ರವಿ ವಿರುದ್ಧ ಎಸಿಬಿ ತನಿಖೆ
ಬೆಂಗಳೂರು, ಅಕ್ಟೋಬರ್ 08: ಮಾಜಿ ಸಚಿವ ಸಿಟಿ ರವಿ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗಳಿಕೆ ಹೊಂದಿರುವ ಆರೋಪ ಹೊರೆಸಲಾಗಿದೆ. ಈ ಕುರಿತಂತೆ ತನಿಖೆ ನಡೆಸಿ ನಾಲ್ಕು ತಿಂಗಳೊಳಗೆ ವರದಿ ಸಲ್ಲಿಸುವಂತೆ ಎಸಿಬಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಚಿಕ್ಕಮಗಳೂರು
ಮೂಲದ
ಸಿಟಿ
ರವಿ
ಅವರ
ವಿರುದ್ಧ
ಆರ್
ಟಿಐ
ಕಾರ್ಯಕರ್ತ
ಸಿ.
ಕುಮಾರ್
ಎಂಬುವವರು
2012ರಲ್ಲಿ
ಲೋಕಾಯುಕ್ತ
ನ್ಯಾಯಾಲಯಕ್ಕೆ
ದೂರು
ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ, ತನಿಖೆಗೆ ಆದೇಶಿಸಿದೆ. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪ್ರಕರಣದ ತನಿಖೆ ನಡೆಸಲಿದ್ದು, ನಾಲ್ಕು ತಿಂಗಳಲ್ಲಿ ವರದಿ ಸಲ್ಲಿಸಬೇಕಿದೆ. ಎಸಿಬಿಯ ಡಿವೈಎಸ್ಪಿ ದರ್ಜೆ ಅಧಿಕಾರಿಗಳು 2017ರ ಜನವರಿ 7ರೊಳಗೆ ವರದಿ ನೀಡಬೇಕಿದೆ.
Comments
ct ravi lokayukta illegal assets court bengaluru chikkamagaluru district news ಸಿಟಿ ರವಿ ಲೋಕಾಯುಕ್ತ ಬೆಂಗಳೂರು ಚಿಕ್ಕಮಗಳೂರು ಜಿಲ್ಲಾಸುದ್ದಿ
English summary
The Special Lokayukta Court ordered a probe into the assets of BJP leader and former Minister, C.T. Ravi. The court, hearing a 2010 private complaint lodged by activist A.C. Kumar, ordered the Anti-Corruption Bureau (ACB) to take up a probe and submit report within four months.
Story first published: Saturday, October 8, 2016, 11:18 [IST]