ವಿಬ್ ಗಯಾರ್ ಶಾಲೆ ಆವರಣದಲ್ಲಿ ಚಿರತೆ ಇಲ್ಲ
ಬೆಂಗಳೂರು, ಫೆಬ್ರವರಿ 7 : ವರ್ತೂರು ಬಳಿ ಇರುವ ವಿಬ್ ಗಯಾರ್ ಶಾಲೆಯಲ್ಲಿ ಚಿರತೆ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶಾಲೆಯ ಆವರಣದಿಂದ ಚಿರತೆ ಹೊರಹೋದ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದಾರೆ. [ಚಿರತೆ ಹಿಡಿಯುವ ಕಾರ್ಯಾಚರಣೆ ಚಿತ್ರಗಳು]
ಬೆಂಗಳೂರು
ಉತ್ತರ
ವಲಯದ
ಅರಣ್ಯ
ಸಂರಕ್ಷಣಾಧಿಕಾರಿ
ಕರಿಯಪ್ಪ
ಅವರು
ಈ
ಕುರಿತು
ಮಾಧ್ಯಮಗಳಿಗೆ
ಮಾಹಿತಿ
ನೀಡಿದ್ದಾರೆ.
'ಚಿರತೆ
ಶಾಲೆಯ
ಆವರಣದಿಂದ
ಹೊರಹೋಗಿರುವ
ಹೆಜ್ಜೆ
ಗುರುತುಗಳು
ಪತ್ತೆಯಾಗಿವೆ.
ಆದರೂ,
ಇನ್ನೊಮ್ಮೆ
ಖಚಿತಪಡಿಸಿಕೊಳ್ಳಲು
ಶಾಲೆಯಲ್ಲಿ
ಹುಡುಕಾಟ
ನಡೆಸಲಾಗುತ್ತದೆ'
ಎಂದು
ಹೇಳಿದ್ದಾರೆ.
[ವಿಬ್
ಗಯಾರ್
ಶಾಲೆಗೆ
ನುಗ್ಗಿದ
ಚಿರತೆ]
ಭಾನುವಾರ ಮುಂಜಾನೆ 4.15ಕ್ಕೆ ಚಿರತೆ ಶಾಲೆಯ ಆವರಣಕ್ಕೆ ಪ್ರವೇಶ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. 6.45ರ ಸುಮಾರಿಗೆ ಅಲ್ಲಿಂದ ಹೊರ ಹೋಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ, ಈ ಬಗ್ಗೆ ಖಚಿತಪಡಿಸಕೊಳ್ಳಲು 15ಕ್ಕೂ ಹೆಚ್ಚು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ. [Vibgyor ಶಾಲೆಯಲ್ಲಿ ಅತ್ಯಾಚಾರ]
ಆತಂಕ ಮೂಡಿಸಿದ್ದ ಚಿರತೆ : ವರ್ತೂರು ಬಳಿ ಇರುವ ವಿಬ್ ಗಯಾರ್ ಶಾಲೆಗೆ ಚಿರತೆ ನುಗ್ಗಿದೆ ಎಂಬ ಮಾಹಿತಿ ಇಂದು ಬೆಳಗ್ಗೆ ತಿಳಿದುಬಂದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ಆರಂಭಿಸಿದ್ದರು. ಚಿರತೆಯನ್ನು ಹಿಡಿಯಲು ಬೋನನ್ನು ಸಹ ತರಲಾಗಿತ್ತು. [ಚಿಕ್ಕಮಗಳೂರು : ಕಾಲೇಜಿಗೆ ನುಗ್ಗಿದ ಚಿರತೆ]
ಶಾಲೆಯ ಆವರಣದೊಳಗೆ ಚಿರತೆ ಆಗಮಿಸುತ್ತಿರುವುದನ್ನು ಭದ್ರತಾ ಸಿಬ್ಬಂದಿ ಸಿಸಿಟಿವಿಯಲ್ಲಿ ಗಮನಿಸಿದ್ದರು. ಈ ಬಗ್ಗೆ ವರ್ತೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸುತ್ತಿದ್ದರು.