ಮಕರ ಸಂಕ್ರಾಂತಿಗಾಗಿ ಕೆಎಸ್ಆರ್ಟಿಸಿಯಿಂದ ಹೆಚ್ಚುವರಿ ಬಸ್
ಬೆಂಗಳೂರು, ಜನವರಿ 12 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ 500 ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಿದೆ. ಜನವರಿ 14 ಮತ್ತು 15ರಂದು ಈ ಬಸ್ಸುಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ಸಂಚಾರ ನಡೆಸಲಿವೆ.
ಮೆಜೆಸ್ಟಿಕ್,
ಮೈಸೂರು
ರಸ್ತೆಯ
ಸ್ಯಾಟಲೈಟ್
ಬಸ್
ನಿಲ್ದಾಣದಿಂದ
ವಿಶೇಷ
ಬಸ್ಸುಗಳು
ಸಂಚಾರ
ನಡೆಸಲಿವೆ.
ವಿಜಯನಗರ,
ಜೆ.ಪಿ.ನಗರ,
ಜಯನಗರ
4ನೇ
ಬ್ಲಾಕ್,
ನವರಂಗ್,
ಕೆಂಗೇರಿ
ಉಪ
ನಗರದಿಂದಲೂ
ಪ್ರಯಾಣಿಕರ
ಬೇಡಿಕೆ
ಆಧರಿಸಿ
ಬಸ್ಸುಗಳನ್ನು
ಓಡಿಸಲಾಗುತ್ತದೆ
ಎಂದು
ಕೆಎಸ್ಆರ್ಟಿಸಿ
ಪ್ರಕಟಣೆಯಲ್ಲಿ
ತಿಳಿಸಲಾಗಿದೆ.
[KSRTC
ವೆಬ್
ಸೈಟ್]
ಜನವರಿ 15ರಂದು ಮಕರ ಸಂಕ್ರಾಂತಿ ಹಬ್ಬವಿದೆ ಇದೆ. ಜನವರಿ 14ರ ಗುರುವಾರ, ಜನವರಿ 15ರ ಶುಕ್ರವಾರದಂದು ಬೆಂಗಳೂರಿನಿಂದ ಕರ್ನಾಟಕದ ವಿವಿಧ ಪ್ರದೇಶಗಳು ಮತ್ತು ಅಂತರ್ ರಾಜ್ಯಗಳಿಗೆ ಬಸ್ಸುಗಳು ಸಂಚಾರ ನಡೆಸಲಿವೆ. ಜನವರಿ 17ರ ಭಾನುವಾರ ಬಸ್ಸುಗಳು ಬೆಂಗಳೂರಿಗೆ ವಾಪಸ್ ಆಗಲಿವೆ. [2016ರ ಸರ್ಕಾರಿ ರಜೆ ದಿನಗಳ ಪಟ್ಟಿ]
ನಿಲ್ದಾಣದ ವಿವರಗಳು : ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ತಿರುಪತಿ ಮುಂತಾದ ಸ್ಥಳಗಳಿಗೆ ಬಸ್ಸುಗಳು ಸಂಚಾರ ನಡೆಸಲಿವೆ. [KSRTCಯಲ್ಲಿ ಕೆಲಸ ಖಾಲಿ ಇದೆ]
ಮೈಸೂರು ರಸ್ತೆಯ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಕಡೆಯ ಬಸ್ಸುಗಳು ಸಂಚಾರ ನಡೆಸಲಿವೆ. ತಮಿಳುನಾಡು, ಆಂಧ್ರಪ್ರದೇಶದ ಕಡೆ ಸಾಗುವ ಬಸ್ಸುಗಳು ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡಲಿವೆ.
ವಿಜಯನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್, ಮಲ್ಲೇಶ್ವರದ 18ನೇ ಕ್ರಾಸ್ ಮುಂತಾದ ಕಡೆಗಳಿಂದ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರದ ಕಡೆ ಬಸ್ಸುಗಳನ್ನು ಓಡಿಸಲಾಗುತ್ತದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.