ಕಿಡ್ನಿ ಮಾರಾಟ ದಂಧೆ ತನಿಖೆಗೆ ರಾಜ್ಯ ಸರ್ಕಾರ ಆದೇಶ
ಬೆಂಗಳೂರು, ಜುಲೈ, 18 :ರಾಜ್ಯದಲ್ಲಿ ಕಿಡ್ನಿ ಮಾರಾಟ ಜಾಲ ವ್ಯಾಪಕವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ದಂಧೆಯ ಸಂಪೂರ್ಣ ತನಿಖೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಶನಿವಾರ ಆದೇಶ ನೀಡಿದ್ದಾರೆ.
ಕಿಡ್ನಿ
ದಂಧೆಗೆ
ಸಂಬಂಧಿಸಿ
ಒಟ್ಟು
11
ಮಂದಿಯನ್ನು
ಪೊಲೀಸರು
ಬಂಧಿಸಿದ್ದರು.
ಕಾರ್ಯಾಚರಣೆ
ಮುಂದುವರಿಸಿ
ಶನಿವಾರ
ಮತ್ತೆ
ಮೂವರು
ಆರೋಪಿಗಳನ್ನು
ಬಂಧಿಸಿದ್ದಾರೆ.
ಬಂಧಿತರು
ಕಿಡ್ನಿ
ನೀಡುವಂತೆ
ಜನರನ್ನು
ಪ್ರೇರೇಪಿಸುತ್ತಿದ್ದರು
ಎಂದು
ಪೊಲೀಸರು
ತಿಳಿಸಿದ್ದಾರೆ.
[ರಾಮನಗರ
ಮಹಿಳೆ
ಕಿಡ್ನಿಯನ್ನೇ
ಕಿತ್ತುಕೊಂಡ
ಸಾಲದ
ಹೊರೆ]
ಮಾಗಡಿ ಕಿಡ್ನಿ ಪ್ರಕರಣಕ್ಕೆ ಸಂಬಂಧಿಸಿದ ವಿಕ್ಟೋರಿಯ ಆಸ್ಪತ್ರೆ ಸಿಬ್ಬಂದಿಯನ್ನು ಕೆಲಸದಿಂದ ವಜಾಮಾಡಲಾಗಿದೆ. ಇನ್ನು ಮುಂದೆ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಅಲ್ಲದೇ ಶಸ್ತ್ರ ಚಿಕಿತ್ಸೆಗೆ ಅನುಮೋದನೆ ಪಡೆದುಕೊಳ್ಳಬೇಕು ಎಂದು ಪಾಟೀಲ್ ತಿಳಿಸಿದ್ದಾರೆ.
ಆದೇಶವನ್ನು ಮೀರಿ ಯಾವುದಾದರೂ ಆಸ್ಪತ್ರೆಗಳು ನಡೆದುಕೊಂಡಿದ್ದು ಕಂಡುಬಂದರೆ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ನಾಗರಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವರು ತಿಳಿಸಿದ್ದಾರೆ.