ಎಸಿಬಿ ರಚನೆ ವಿವಾದ : ಸರ್ಕಾರಕ್ಕೆ ಗಡುವು ಕೊಟ್ಟ ಬಿಜೆಪಿ
ಬೆಂಗಳೂರು, ಮಾರ್ಚ್ 28 : ಕರ್ನಾಟಕ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು. ಸರ್ಕಾರ ಈ ವಿಚಾರದಲ್ಲಿ ಹಠ ಮುಂದುವರೆಸಿದರೆ ಕಾನೂನು ಹೋರಾಟವನ್ನು ನಡೆಸಲಾಗುತ್ತದೆ ಎಂದು ನಾಯಕರು ಎಚ್ಚರಿಕೆ ನೀಡಿದರು. [ಸುದ್ದಿದನಿ : ಬಿಜೆಪಿ ನಾಯಕರ ಪ್ರತಿಭಟನೆ]
ಸರ್ಕಾರ
ಎಸಿಬಿ
ರಚನೆಯ
ಆದೇಶವನ್ನು
ವಾಪಸ್
ಪಡೆಯಬೇಕು
ಎಂದು
ಒತ್ತಾಯಿಸಿ
ಬಿಜೆಪಿ
ನಾಯಕರು
ಸೋಮವಾರ
ಮೌರ್ಯ
ಸರ್ಕಲ್ನ
ಗಾಂಧಿ
ಪ್ರತಿಮೆ
ಬಳಿ
ಪ್ರತಿಭಟನೆ
ನಡೆಸಿದರು.
ಸರ್ಕಾರ
ತನ್ನ
ಆದೇಶ
ವಾಪಸ್
ಪಡೆಯುವ
ತನಕ
ಬಿಜೆಪಿ
ಹೋರಾಟ
ಮುಂದುವರೆಸಲಿದೆ
ಎಂದು
ನಾಯಕರು
ಹೇಳಿದರು.
[ಎಸಿಬಿ
ವಿವಾದ
:
ಕಾಂಗ್ರೆಸ್
ಹೈಕಮಾಂಡಿಗೆ
ಬಿಜೆಪಿ,
ಜೆಡಿಎಸ್
ಪತ್ರ]
ಬಿಜೆಪಿ
ರಾಷ್ಟ್ರೀಯ
ಉಪಾಧ್ಯಕ್ಷ
ಬಿ.ಎಸ್.ಯಡಿಯೂರಪ್ಪ,
ಕರ್ನಾಟಕ
ಬಿಜೆಪಿ
ಅಧ್ಯಕ್ಷ
ಪ್ರಹ್ಲಾದ್
ಜೋಶಿ,
ಕೇಂದ್ರ
ಸಚಿವ
ಅನಂತ
ಕುಮಾರ್,
ಸಂಸದೆ
ಶೋಭಾ
ಕರಂದ್ಲಾಜೆ,
ಪ್ರತಿಪಕ್ಷ
ನಾಯಕ
ಜಗದೀಶ್
ಶೆಟ್ಟರ್
ಮುಂತಾದ
ನಾಯಕರು
ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದರು.
[ಎಸಿಬಿ
ಬಗ್ಗೆ
ಗೊಂದಲ
:
ಸಿದ್ದರಾಮಯ್ಯ
ನೀಡಿದ
ಸ್ಪಷ್ಟನೆಗಳು]
ಕಾನೂನು
ಹೋರಾಟ
ಮಾಡುತ್ತೇವೆ
:
ಪ್ರತಿಭಟನೆ
ಉದ್ದೇಶಿಸಿ
ಮಾತನಾಡಿದ
ಬಿ.ಎಸ್.ಯಡಿಯೂರಪ್ಪ
ಅವರು,
'ಎಸಿಬಿ
ರಚನೆ
ಆದೇಶವನ್ನು
ವಾಪಸ್
ಪಡೆಯುವ
ತನಕ
ಬಿಜೆಪಿ
ಹೋರಾಟ
ಮಾಡಲಿದೆ.
ಸರ್ಕಾರ
ತನ್ನ
ಆದೇಶವನ್ನು
ವಾಪಸ್
ಪಡೆಯದಿದ್ದರೆ
ಕಾನೂನು
ಹೋರಾಟವನ್ನು
ಮಾಡಬೇಕಾಗುತ್ತದೆ'
ಎಂದು
ಎಚ್ಚರಿಕೆ
ನೀಡಿದರು.
[ಎಸಿಬಿ
ರಚನೆ
:
ಸರ್ಕಾರಕ್ಕೆ
ಶೆಟ್ಟರ್
ಕೇಳಿದ
ಪ್ರಶ್ನೆಗಳು]
ಶಾಸಕರ
ವಿರೋಧ
ಕಟ್ಟಿಕೊಂಡಿದ್ದಾರೆ
:
'ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಕಾಂಗ್ರೆಸ್
ಶಾಸಕರ
ವಿರೋಧವನ್ನು
ಕಟ್ಟಿಕೊಂಡು
ಎಸಿಬಿ
ರಚನೆ
ಮಾಡಿದ್ದಾರೆ.
ಆದೇಶವನ್ನು
ಸರ್ಕಾರ
ವಾಪಸ್
ಪಡೆಯುವ
ತನಕ
ಬಿಜೆಪಿ
ವಿವಿಧ
ಹಂತಗಳಲ್ಲಿ
ಹೋರಾಟ
ಮಾಡಲಿದೆ'
ಎಂದು
ಬಿಜೆಪಿ
ರಾಜ್ಯಾಧ್ಯಕ್ಷ
ಪ್ರಹ್ಲಾದ್
ಜೋಶಿ
ಹೇಳಿದರು.
[ಭ್ರಷ್ಟಾಚಾರ
ನಿಗ್ರಹ
ದಳದ
ಯಾವ
ಕಚೇರಿ
ಎಲ್ಲಿರುತ್ತದೆ?]
ಭ್ರಷ್ಟಾಚಾರ
ನಿಗ್ರಹ
ದಳ
(Anti
Corruption
Bureau-
ACB)
ಸ್ಥಾಪನೆ
ಮಾಡಿರುವ
ಕುರಿತು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಸ್ಪಷ್ಟನೆಗಳನ್ನು
ನೀಡುತ್ತಲೇ
ಇದ್ದಾರೆ.
ಆದರೆ,
ಪ್ರತಿಪಕ್ಷಗಳಾದ
ಬಿಜೆಪಿ
ಮತ್ತು
ಜೆಡಿಎಸ್
ಇದನ್ನು
ವಿರೋಧಿಸುತ್ತಿದ್ದು,
ಸರ್ಕಾರ
ತನ್ನ
ಆದೇಶವನ್ನು
ವಾಪಸ್
ಪಡೆಯಬೇಕು
ಎಂದು
ಹೋರಾಟ
ನಡೆಸುತ್ತಿವೆ.