ಕರಣಂ ಅವರ 'ಕರ್ಮ' ಇ ಬುಕ್ ರೂಪದಲ್ಲಿ ಈಗ ಲಭ್ಯ
ಬೆಂಗಳೂರು, ಜುಲೈ 21: ಸಾಹಿತ್ಯ ದಿಗ್ಗಜ ಎಸ್ ಎಲ್ ಭೈರಪ್ಪ ಅವರಿಂದ ಮೆಚ್ಚುಗೆ ಪಡೆದ ಕರಣಂ ಪವನ್ ಪ್ರಸಾದ್ ಅವರ ಚೊಚ್ಚಲ ಕನ್ನಡ ಕಾದಂಬರಿ ಈಗ ಇ-ಬುಕ್ ರೂಪದಲ್ಲಿ ಲಭ್ಯವಿದೆ. ಲಂಡನ್ ಮತ್ತು ಧಾರವಾಡವನ್ನು ಕೇಂದ್ರವಾಗಿರಿಸಿಕೊಂಡು www.vividlipi.com ಅಂತರ್ಜಾಲ ತಾಣದ ಉತ್ಸಾಹಿ ಸಾಹಿತ್ಯಾಸಕ್ತ ತಂಡ "ಕರ್ಮ" ಕಾದಂಬರಿಯ ಇ-ಬುಕ್ ಅನ್ನು ತಮ್ಮ ತಾಣದ ಮೂಲಕ ಎಲ್ಲರಿಗೂ ತಲುಪಿಸಲು ಸಜ್ಜಾಗಿದ್ದಾರೆ.
ಈ ಮೂಲಕದ ಸಾಹಿತ್ಯಾಸಕ್ತರು ಬೆರಳಂಚಿನಲ್ಲಿ ಕಾದಂಬರಿಯನ್ನು ಖರೀದಿಸಿ ಡೌನ್ ಲೋಡ್ ಮಾಡಿಕೊಂಡು ತಮ್ಮ ಎಲೆಕ್ಟ್ರಾನಿಕ್ ಉಪಕರಣದಲ್ಲಿ ಓದಬಹುದಾಗಿದೆ. ಈ ಬಗ್ಗೆ ಮಾತನಾಡಿದ ಲೇಖಕ ಕರಣಂ ಪವನ್ ಪ್ರಸಾದ್, ಇ-ಬುಕ್ ಆವೃತ್ತಿ ಮುಖ್ಯವಾಗಿ ಅನಿವಾಸಿ ಭಾರತೀಯರನ್ನು ಗುರಿಯಾಗಿಸಿಕೊಂಡು ಹೊರ ತರಲಾಗಿದೆ.[ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ 'ನನ್ನಿ']
ಮುಂದಿನ
ಹಂತದಲ್ಲಿ
ನನ್ನ
ಇತರ
ಕೃತಿಗಳಾದ
'ನನ್ನಿ',
'ಪುರಹರ'
ಇವುಗಳನ್ನು
ಸಹ
ಇ-ಬುಕ್
ಆವೃತ್ತಿಯಲ್ಲಿ
ಹೊರತರಲಾಗುವುದು.
ಈ
ಅಂತರ್ಜಾಲ
ತಾಣದಲ್ಲಿ
ಪ್ರಚಲಿತದಲ್ಲಿರುವ
ಇತರ
ಲೇಖಕರಾದ
ಯುಆರ್
ಅನಂತಮೂರ್ತಿ,
ಗಿರೀಶ್
ಕಾರ್ನಾಡ್,
ವಿವೇಕ್
ಶಾನಭಾಗ್
ಅವರ
ಕೃತಿಗಳ
ಇ-ಪುಸ್ತಕ
ಆವೃತ್ತಿ
ಕೂಡ
ಲಭ್ಯವಿದೆ
ಕೊಂಡು
ಓದಿ'
ಎಂದರು.['ನನ್ನಿ'
ಎಂದರೆ
ನನ್
ಓರ್ವಳ
ಸತ್ಯಾನ್ವೇಷಣೆಯ
ಕಥೆ]
*
ಎಲ್ಲಿ
ಖರೀದಿಸಬಹುದು
:
ಇ-
ಪುಸ್ತಕಗಳನ್ನು
ಖರೀದಿಸಿ...ಓದಿರಿ..ವಿವಿಡ್ಲಿಪಿಯಲ್ಲಿ..
www.vividlipi.com
*
ಕರ್ಮ
ಕೃತಿ
ಡೌನ್
ಲೋಡ್
ಮಾಡಲು
ಈ
ಲಿಂಕ್
ಕ್ಲಿಕ್
ಮಾಡಿ
*
ಆಂಡ್ರಾಯ್ಡ್
ಮತ್ತು
ವಿಂಡೋಸ್
ಡೆಸ್ಕ್
ಟಾಪ್
ಅಪ್ಲಿಕೇಷನ್
ರೂಪದಲ್ಲಿ
ಲಭ್ಯ
*
ಶೀಘ್ರದಲ್ಲಿ
ಧ್ವನಿ
ಮುದ್ರಿತ
ಪುಸ್ತಕಗಳು
(ಆಡಿಯೋ
ಪುಸ್ತಕಗಳು)
ವಿವಿಡ್ಲಿಪಿಯಲ್ಲಿ...
*
ಗೂಗಲ್
ಪ್ಲೇ
ಸ್ಟೋರ್
ನಲ್ಲಿರುವ
ವಿವಿಡ್
ಲಿಪಿ
ಅಪ್ಲಿಕೇಷನ್
ಡೌನ್
ಲೋಡ್
ಲಿಂಕ್
ಇಲ್ಲಿದೆ[ಭೈರಪ್ಪ
ಹೊಗಳಿದ
'ಕರ್ಮ'
ಕೃತಿ
ವಿಶ್ವದೆಲ್ಲೆಡೆ
ಲಭ್ಯ]
* ವಿವಿಡ್ಲಿಪಿ ತಂಡ ಆನ್ ಲೈನ್ ಪುಸ್ತಕ ಮಾರಾಟವಲ್ಲದೆ, ಸಾಹಿತ್ಯ ಹಾಗೂ ನಾಟಕಗಳ ಲೈವ್ ಸ್ಟ್ರೀಮಿಂಗ್ ಗೂ ಮುಂದಾಗಿದೆ.
ಕರ್ಮ ಕೃತಿ ಬಗ್ಗೆ : ಭೌತಿಕವಾಗಿಯೂ ಪಾರಮಾರ್ಥಿಕವಾಗಿಯೂ ಶ್ರದ್ಧೆ ಮತ್ತು ನಂಬಿಕೆಯ ನಡುವಿನ ವ್ಯತ್ಯಾಸ ಇದ್ದೇ ಇದೆ. ಈ ವ್ಯತ್ಯಾಸವನ್ನು ಪ್ರಾಯೋಗಿಕವಾಗಿ ಈ ಕೃತಿಯಲ್ಲಿ ಚರ್ಚಿಸಲಾಗಿದೆ.
ಪ್ರಸ್ತುತ ನಗರ ಸಮಾಜದಲ್ಲಿನ ವ್ಯಕ್ತಿ ತನ್ನ ತಂದೆಯ ಸಾವಿನ ನಂತರ ತನ್ನ ಊರಿಗೆ ಅಪ್ಪನ ಕ್ರಿಯೆ ಮಾಡಲು ಹೋಗಿ ಆ ಅಪರಕ್ರಿಯೆಯ ದಿನಗಳಲ್ಲಿ ಸಂಭವಿಸುವ ತೊಳಲಾಟ, ಭೂತ, ವರ್ತಮಾನಗಳ ಜಗ್ಗಾಟ, ಬಂಧಗಳ ಮನೋ ವ್ಯಾಪಾರ ಇವೆಲ್ಲವನ್ನೂ ಸಮಕಾಲೀನ ಶೈಲಿಯಲ್ಲಿ ಕಟ್ಟಿಕೊಟ್ಟಿರುವ ಕಾದಂಬರಿ ಕರ್ಮ.
ಬಿಡುಗಡೆಯಾದ ಎರಡೇ ವರ್ಷದಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿರುವ ಈ ಕೃತಿ ಅಪಾರ ಜನಮನ್ನಣೆ ಮತ್ತು ತಾತ್ವಿಕ ಚರ್ಚೆಯನ್ನು ಸಾಹಿತ್ಯ ವಲಯದಲ್ಲಿ ಹುಟ್ಟುಹಾಕಿದೆ. ನಾಟಕಕಾರ ಮತ್ತು ಕಾದಂಬರಿಕಾರರಾದ ಕರಣಂ ಪವನ್ ಪ್ರಸಾದರ ಮೊದಲ ಕಾದಂಬರಿಯಿದು. (ಒನ್ಇಂಡಿಯಾ ಸುದ್ದಿ)