ನಟ ಹುಚ್ಚಾ ವೆಂಕಟ್ಗೆ ಷರತ್ತು ಬದ್ಧ ಜಾಮೀನು
ಬೆಂಗಳೂರು, ನವೆಂಬರ್ 25 : ನಟ, ನಿರ್ದೇಶಕ ಹುಚ್ಚ ವೆಂಕಟ್ಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಸಿಕ್ಕರೂ ವೆಂಕಟ್ ಇಂದು ಜೈಲಿನಿಂದ ಬಿಡುಗಡೆಗೊಳ್ಳುವುದು ಅನುಮಾನವಾಗಿದೆ. ನವೆಂಬರ್ 19ರಂದು ಹುಚ್ಚಾ ವೆಂಕಟ್ ಬಂಧನವಾಗಿತ್ತು.
ಡಾ.ಬಿ.ಆರ್.ಅಂಬೇಡ್ಕರ್
ಅವರ
ವಿರುದ್ಧ
ಅವಹೇಳನಕಾರಿ
ಹೇಳಿಕೆ
ನೀಡಿರುವ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಜ್ಞಾನಭಾರತಿ
ಠಾಣೆ
ಪೊಲೀಸರು
ವೆಂಕಟ್ನನ್ನು
ಬಂಧಿಸಿದ್ದರು.
ನವೆಂಬರ್
20ರಂದು
ಕೋರ್ಟ್ಗೆ
ಹಾಜರುಪಡಿಸಲಾಗಿತ್ತು.
ಕೋರ್ಟ್
ಡಿಸೆಂಬರ್
4ರ
ತನಕ
ವೆಂಕಟ್
ಅನ್ನು
ನ್ಯಾಯಾಂಗ
ಬಂಧನಕ್ಕೆ
ಒಪ್ಪಿಸಿ
ಆದೇಶ
ನೀಡಿತ್ತು.
[ಹುಚ್ಚಾ
ವೆಂಕಟ್
ಯಾರು?]
ಇದರಿಂದಾಗಿ ಹುಚ್ಚಾ ವೆಂಕಟ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಇದರ ನಡುವೆಯೇ ವೆಂಕಟ್ ಪರ ವಕೀಲರು ಸಿಟಿ ಸಿವಿಲ್ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಬುಧವಾರ ತೀರ್ಪು ಹೊರಬಿದ್ದಿದ್ದು, ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದೆ. [ಹುಚ್ಚಾ ವೆಂಕಟ್ ಬಂಧನ]
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನವೆಂಬರ್ 18ರಂದು ಜ್ಞಾನಭಾರತಿ ಕ್ಯಾಂಪಸ್ ಆವರಣದಲ್ಲಿ ಪ್ರತಿಭಟನೆ ನಡೆಸಿ ಹುಚ್ಚಾ ವೆಂಕಟ್ ವಿರುದ್ಧ ದೂರು ನೀಡಿದ್ದರು. ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ವೆಂಕಟ್ ವಿರುದ್ಧ ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು.
ಇಂದು ಬಿಡುಗಡೆ ಅನುಮಾನ : ಜಾಮೀನು ಸಿಕ್ಕರೂ ಬುಧವಾರ ವೆಂಕಟ್ ಜೈಲಿನಿಂದ ಬಿಡುಗಡೆಗೊಳ್ಳುವುದು ಅನುಮಾನವಾಗಿದೆ. ಜಾಮೀನಿನಲ್ಲಿ ಸೂಚಿಸಿರುವ ಬಾಂಡ್ ಮೊತ್ತವನ್ನು ಪಾವತಿ ಕಾರಣ ಅವರು ಇಂದು ಜೈಲಿನಲ್ಲಿಯೇ ಕಳೆಯಬೇಕಾಗಿದೆ.