ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಕ್ಷದ ಕೆಲಸಕ್ಕೆ ಸರ್ಕಾರದ ಕಾರು ಬೇಡವೆಂದ ವೇಣುಗೋಪಾಲ್

'ನಾನು ಬಂದಿರುವುದು ಪಕ್ಷದ ಕೆಲಸಕ್ಕೆ, ಸರ್ಕಾರದ ಕೆಲಸಕ್ಕಲ್ಲ. ಪಕ್ಷದ ಕೆಲಸಕ್ಕಾಗಿ, ಸರ್ಕಾರದ ಕಾರನ್ನು ಬಳಸುವುದು ಸರಿಯಲ್ಲ' ಎಂದು ಕರ್ನಾಟಕ ಸರ್ಕಾರ ನೀಡಿದ್ದ ಐಷಾರಾಮಿ ಕಾರನ್ನು, ಕೆ.ಸಿ.ವೇಣುಗೋಪಾಲ್ ಹಿಂದಿರುಗಿಸಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 24: ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ, ಪಕ್ಷದ ಚಟುವಣೆಕೆಗೆ ಅಗತ್ಯವಿದೆಯೆಂದು ಕರ್ನಾಟಕ ಸರ್ಕಾರ ನೀಡಿದ್ದ ಐಷಾರಾಮಿ ಕಾರನ್ನು ಅವರು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.

ನಾನು ಬಂದಿರುವುದು ಪಕ್ಷದ ಕೆಲಸಕ್ಕೆ, ಸರ್ಕಾರದ ಕೆಲಸಕ್ಕಲ್ಲ. ಪಕ್ಷದ ಕೆಲಸಕ್ಕಾಗಿ, ಸರ್ಕಾರದ ಕಾರನ್ನು ಬಳಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.[ಕರ್ನಾಟಕ ಕಾಂಗ್ರೆಸಿನ ಹೊಸ ಉಸ್ತುವಾರಿ, ಇವರೇ ಕೆ.ಸಿ ವೇಣುಗೋಪಾಲ್!]

K C Venugopal returns car given by Karnataka government

2018ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿರುವ ವೇಣುಗೋಪಾಲ್, ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿರುವ ಅತಿ ದೊಡ್ಡ ರಾಜ್ಯವಾದ ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲೂ ಅಧಿಕಾರವನ್ನು ಉಳಿಸಿಕೊಳ್ಳುವ ಸವಾಲು ಕಾಂಗ್ರೆಸ್ಸಿಗಿದೆ. ಸದ್ಯಕ್ಕೆ ಕೇಂದ್ರ ಕಾಂಗ್ರೆಸ್ ನಾಯಕರಿಗೂ ಭರವಸೆ ಇರುವ ರಾಜ್ಯವೆಂದರೆ ಕರ್ನಾಟಕವೇ. ಆದ್ದರಿಂದ ಕೆ.ಸಿ.ವೇಣುಗೋಪಾಲ್ ರಂಥ ಸಮರ್ಥರಿಗೆ ಕರ್ನಾಟಕದ ಉಸ್ತುವಾರಿಯನ್ನು ಪಕ್ಷ ನೀಡಿದೆ.

English summary
K C Venugopal, All-India Congress Committee (AICC) general secretary in charge of Karnataka has returned a high-end car given by the state government for his use. I am doing party work, not government's he told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X