ಎಚ್ಡಿಕೆ ವಿರುದ್ಧ ಸಾಕ್ಷಿ ಒದಗಿಸಲು ಕಾಲಾವಕಾಶ ಕೇಳಿದ ಗಾಲಿ ರೆಡ್ಡಿ!
2006ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಳ್ಳಾರಿ ಗಣಿಧಣಿಗಳಿಂದ 150 ಕೋಟಿ ರು ಲಂಚ ಪಡೆದಿದ್ದರು ಎಂಬ ಆರೋಪ ಮಾಡಿದ್ದ ಅಂದಿನ ಬಿಜೆಪಿ ಎಂಎಲ್ ಸಿ ಜನಾರ್ದನ ರೆಡ್ಡಿಗೆ ಇಂದು ಎಸ್ ಐಟಿ ಮುಂದೆ ಸಾಕ್ಷಿಯಾಗಿ ನಿಂತಿದ್ದಾರೆ.
ಬೆಂಗಳೂರು, ಮೇ 19: 2006ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಳ್ಳಾರಿ ಗಣಿಧಣಿಗಳಿಂದ 150 ಕೋಟಿ ರು ಲಂಚ ಪಡೆದಿದ್ದರು ಎಂಬ ಆರೋಪ ಮಾಡಿದ್ದ ಅಂದಿನ ಬಿಜೆಪಿ ಎಂಎಲ್ ಸಿ ಜನಾರ್ದನ ರೆಡ್ಡಿಗೆ ಇಂದು ಎಸ್ ಐಟಿ ಮುಂದೆ ಸಾಕ್ಷಿಯಾಗಿ ನಿಂತರು.
ವಿಚಾರಣೆ ಬಳಿಕ ಮಾತನಾಡಿದ ಗಾಲಿ ರೆಡ್ಡಿ, ಎಸ್ ಐಟಿಗೆ ಸೂಕ್ತ ಸಾಕ್ಷಿ ಒದಗಿಸಿದ್ದೇನೆ. ಹೆಚ್ಚಿನ ಸಾಕ್ಷಿ ಒದಗಿಸಲು ಮೂತು ವಾರಗಳ ಕಾಲ ಕಾಲಾವಕಾಶ ಕೋರಿದ್ದೇನೆ. ಎಸ್ ಐಟಿ ಅಧಿಕಾರಗಳು ಇದಕ್ಕೆ ಒಪ್ಪಿದ್ದಾರೆ ಎಂದರು.
ಚಿತ್ರದುರ್ಗ ಜಿಲ್ಲೆಯ ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣಕ್ಕೆ ಅನುಮತಿ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ 2006ರಂದೇ ಯಾವುದೇ ಸಾಕ್ಷಿ ಒದಗಿಸದ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ಏನು ಸಾಕ್ಷಿ ಒದಗಿಸುತ್ತಾರೆ ಎಂಬ ಕುತೂಹಲವಿದೆ.[ಎಚ್ಡಿಕೆ ಗಣಿ ಲಂಚ ಸಿಡಿ ಪ್ರಕರಣಕ್ಕೆ ಮತ್ತೆ ಜೀವ, ಗಾಲಿ ರೆಡ್ಡಿಗೆ ನೋಟಿಸ್]
ವಿಶೇಷ ತನಿಖಾ ದಳ(ಎಸ್ಐಟಿ) ಐಜಿಪಿ ಚರಣ್ ರೆಡ್ಡಿ ಮುಂದೆ ಹಾಜರಾಗಿರುವ ಜನಾರ್ದನರೆಡ್ಡಿ ಅವರು 150 ಕೋಟಿ ಗಣಿ ಕಪ್ಪ ಕೇಸಲ್ಲಿ ನನ್ನನ್ನು ಸಾಕ್ಷಿಯಾಗಿಸಿದ್ದಾರೆ. ಈ ಸಂಬಂಧ ಎಸ್ಐಟಿ ಮುಂದೆ ಹಾಜರಾಗಿ ಸಾಕ್ಷಿ ನುಡಿಯಲಿದ್ದೇವೆ ಎಂದರು.ಆರೋಪವೇನು?: ಬಳ್ಳಾರಿ ಗಣಿ ಉದ್ಯಮಿಗಳಿಂದ ಮುಖ್ಯಮಂತ್ರಿ(2006ರಲ್ಲಿ ಎಂದು ಓದಿಕೊಳ್ಳಿ) ಕುಮಾರಸ್ವಾಮಿ, ಅರಣ್ಯ ಸಚಿವ ಸಿ ಚೆನ್ನಿಗಪ್ಪ ಹಾಗೂ ಗೃಹ ಸಚಿವ ಎಂ.ಪಿ ಪ್ರಕಾಶ್ ಅವರು 150 ಕೋಟಿ ರು ಲಂಚ ಪಡೆದಿದ್ದಾರೆ.
ಈ ಕುರಿತಂತೆ ನನ್ನ ಬಳಿ ಮಾತಕತೆ ನಡೆಸಿದ ವಿಡಿಯೋ ಸಿಡಿ ಲಭ್ಯವಿದೆ ಎಂದು ಎಂಎಲ್ಸಿ ಗಾಲಿ ರೆಡ್ಡಿ ಆರೋಪಿಸಿದ್ದರು. ಈ ಬಗ್ಗೆ ವಿಶೇಷ ತನಿಖಾ ತಂಡ (ಎಸ್ ಐಟಿ) ಸ್ಪಷ್ಟನೆ ಕೋರಿ, ಸಾಕ್ಷ್ಯ ಒದಗಿಸುವಂತೆ ಗಾಲಿ ರೆಡ್ಡಿಗೆ ನೋಟಿಸ್ ಜಾರಿ ಮಾಡಿತ್ತು. ಅದರೆ,ರೆಡ್ಡಿ ಬಳಿ ಸಿಡಿ ಇದೆಯಾ ಇದ್ರೂ ದಶಕಗಳ ಕಾಲ ಅದೇ ಸಿಡಿ ಉಳಿಸಿಕೊಂಡಿದ್ದಾರಾ? ಉತ್ತರ ನಿರೀಕ್ಷಿಸಿ