1 ರೂ. ಚೆಕ್ ಕಳುಹಿಸಿದ ಐಐಎಸ್ಸಿ ವಿದ್ಯಾರ್ಥಿಗಳು
ಬೆಂಗಳೂರು, ಫೆ. 26 : ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಸಂಶೋಧನಾ ವಿದ್ಯಾರ್ಥಿಗಳು ಮಾನವ ಸಂಪನ್ಮೂಲ ಇಲಾಖೆಗೆ ಒಂದು ರೂ.ಚೆಕ್ ಕಳಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ಏಕರೂಪದ ಫೆಲೋಶಿಪ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬುಧವಾರ
ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಸೈನ್ಸ್
ಸರ್ಕಲ್ನಿಂದ
ಎಂ.ಎಸ್.ರಾಮಯ್ಯ
ಆಸ್ಪತ್ರೆ
ತನಕ
ಮಾನವ
ಸರಪಳಿ
ನಿರ್ಮಿಸಿದ
ನೂರಾರು
ವಿದ್ಯಾರ್ಥಿಗಳು
ನಾವು
ಭಿಕ್ಷೆ
ಕೇಳುತ್ತಿಲ್ಲ,
ನಮ್ಮ
ಬಳಿ
ಹಣವಿದೆ
ಎಂದು
ತಿಳಿಸಲು
ಒಂದು
ರೂ.
ಚೆಕ್
ಕಳುಹಿಸುತ್ತಿದ್ದೇವೆ
ಎಂದು
ಕೇಂದ್ರ
ಸರ್ಕಾರದ
ವಿರುದ್ಧ
ಪ್ರತಿಭಟನೆ
ನಡೆಸಿದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಸಂಶೋಧನಾ ವಿದ್ಯಾರ್ಥಿಗಳಿಗೆ ಏಕರೂಪದ ಫೆಲೋಶಿಪ್ ನಿಗದಿಪಡಿಸಬೇಕು ಮತ್ತು ಅದು ಏಕಕಾಲದಲ್ಲಿಯೇ ಎಲ್ಲಾ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಎಲ್ಲಾ
ಸಂಶೋಧನಾ
ವಿದ್ಯಾರ್ಥಿಗಳಿಗೆ
ಈಗಾಗಲೇ
ಫೆಲೋಶಿಪ್
ಘೋಷಿಸಲಾಗಿದೆ.
ಆದರೆ,
ಕೇಂದ್ರ
ಮಾನವ
ಸಂಪನ್ಮೂಲ
ಇಲಾಖೆ
ಹೊರಡಿಸಿರುವ
ಅಧಿಸೂಚನೆ
ಅನ್ವಯ
ಫೆಲೋಶಿಪ್ನಲ್ಲಿ
ತಾರತಮ್ಯವಿದೆ.
ಎಲ್ಲಾ
ವಿದ್ಯಾರ್ಥಿಗಳಿಗೆ
ಏಕ
ರೂಪದ
ಫೆಲೋಶಿಪ್
ನೀಡಬೇಕು
ಎಂಬುದು
ವಿದ್ಯಾರ್ಥಿಗಳ
ಒತ್ತಾಯ.
ಸಂಶೋಧನಾ
ವಿದ್ಯಾರ್ಥಿಗಳು
ಸರ್ಕಾರದ
ಬಳಿ
ಭಿಕ್ಷೆ
ಕೇಳುತ್ತಿಲ್ಲ.
ದೇಶದ
ಎಲ್ಲಾ
ಸಂಶೋಧನಾ
ವಿದ್ಯಾರ್ಥಿಗಳಿಗೆ
ಏಕ
ರೂಪದ
ಫೆಲೋಶಿಪ್
ನೀಡಿ,
ನಮ್ಮ
ಸಂಶೋಧನಾ
ಚಟುವಟಿಕೆಗಳಿಗೆ
ನೆರವು
ನೀಡಿ
ಎಂದು
ವಿದ್ಯಾರ್ಥಿಗಳು
ಘೋಷಣೆ
ಕೂಗಿದರು.
ಒಂದು ರೂ. ಚೆಕ್ : ನಮ್ಮ ಬಳಿ ಹಣವಿಲ್ಲ ಎಂದು ಏಕರೂಪದ ಫೆಲೋಶಿಪ್ ಕೇಳುತ್ತಿಲ್ಲ, ನಮ್ಮ ಬಳಿ ಹಣವಿದೆ ಎಂದು ತಿಳಿಸುವ ಸಲುವಾಗಿಯೇ 1 ರೂ. ಚೆಕ್ ಅನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಕಳುಹಿಸುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಈಡೇರಿಸಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.