ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿತ್ತುಹೋದ ರಸ್ತೆಗುಂಡಿಗೆ ಪೂಜೆ, ಬಿಬಿಎಂಪಿಗೆ 'ಮಂಗಳಾರತಿ'

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 09: ಕಿತ್ತು ಹೋಗಿರುವ ರಸ್ತೆ ಗುಂಡಿಗಳಿಗೆ ಎಚ್ ಎಸ್ ಆರ್ ಲೇಔಟ್ ನಿವಾಸಿಗಳು ಪೂಜೆ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳೆ ಎಲ್ಲಿದ್ದೀರಿ?.. ಬನ್ನಿ ಸಾರ್ ಬನ್ನಿ, ಬಂದು ತೀರ್ಥ-ಪ್ರಸಾದ ಸ್ವೀಕರಿಸಿ...

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೇನು ಬರವೇ? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಸ್ತೆ ದುರಸ್ತಿ ಮಾಡಿದೆ ಇನ್ನಾದರೂ ಆರಾಮವಾಗಿ ಓಡಾಡಬಹುದು ಎಂದು ಅಂದುಕೊಂಡಿದ್ದರೆ ಮರುದಿನ ಅದೇ ಜಾಗವನ್ನು ಜಲಮಂಡಳಿ ಅಗೆದು ಹಾಕಿರುತ್ತದೆ. ಈ ಬಗ್ಗೆ ಎಷ್ಟು ಹೇಳಿದರೂ ಅಷ್ಟೇ ಬಿಡಿ..[ರಸ್ತೆ ನಿಯಮ ಉಲ್ಲಂಘಿಸಿದವನ ಫೋಟೋ ತೆಗೆದಿದ್ದು ತಪ್ಪಾ?]

bbmp

ರಸ್ತೆಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ, ಬೀದಿಗಿಳಿದು ಹೋರಾಟ ಮಾಡಿ ಮನವಿ ಸಲ್ಲಿಕೆ ಮಾಡಿದ್ದನ್ನು ನೋಡಿದ್ದೇವೆ. ಆದರೆ ಇದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಎಚ್ ಎಸ್ ಆರ್ ಲೇಔಟ್ ನಾಗರಿಕರು ರಸ್ತೆ ಗುಂಡಿಗೆ ಪೂಜೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.[ಹೊಂಡ ಬಿದ್ದ ರಸ್ತೆ, ಕಟ್ಟಿದ ಚರಂಡಿ, ಕೊಳೆತ ಕಸ, ಅಯ್ಯಪ್ಪಾ..!]

bbmp

ರಸ್ತೆ ಗುಂಡಿಯ ಸುತ್ತ ಕಲಶ ಇಟ್ಟು, ರಂಗೋಲಿ ಹಾಕಿ ಪೂಜೆ ಮಾಡಿ ಪ್ರಸಾದವನ್ನು ನೀಡಿದ್ದಾರೆ. #PotholePooje ಎಂಬ ಹಾಶ್ ಟ್ಯಾಗ್ ನ್ನು ಟ್ವಿಟ್ಟರ್ ನಲ್ಲಿ ಕ್ರಿಯೆಟ್ ಮಾಡಿದ್ದಾರೆ.[ಮಳೆ ಬಂದರೆ ಮಹಾನಗರ..!]

bbmp

ಪೂಜೆ ಹೇಗೆ ನಡೆಯಿತು?
ಬಿದ್ದ ಮಳೆಗೆ ನೀರು ತುಂಬಿಕೊಂಡ ರಸ್ತೆ ಗುಂಡಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ನಂತರ ರಂಗೋಲಿ ಬಳಿದು, ತೆಂಗಿನ ಕಾಯಿ ಒಡೆಯಲಾಯಿತು. ಸರಿಯಾದ 'ಮಂಗಳಾರತಿ'ಯನ್ನು ಮಾಡಲಾಯಿತು.

bbmp
bbmp
English summary
Bengaluru: HSR Layout residents offered a puja to Pothole! And they posted pooja pictures in Twitter. They created a # tag potholepooje. where are you BBMP officers please come and take Prasada!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X