ಫೆ.8ರಂದು ಬೆಂಗಳೂರಿನಲ್ಲಿ ಹಿಂದೂ ಸಮಾಜೋತ್ಸವ
ಬೆಂಗಳೂರು, ಜ.20 : ಬೆಂಗಳೂರು ನಗರದಲ್ಲಿ ಹಿಂದೂ ಸಮಾಜೋತ್ಸವ ನಡೆಸಲು ನಿರ್ಧರಿಸಲಾಗಿದೆ. ಸಮಾಜೋತ್ಸವವನ್ನು ಯಶಸ್ವಿಗೊಳಿಸುವ ಕುರಿತು ಸಂಘ ಪರಿವಾರದ ಮುಖಂಡರು ಮತ್ತು ರಾಜ್ಯ ಬಿಜೆಪಿ ನಾಯಕರು ಸೋಮವಾರ ಸಭೆ ನಡೆಸಿದ್ದಾರೆ.
ಚಾಮರಾಜಪೇಟೆಯಲ್ಲಿರುವ
ರಾಷ್ಟ್ರೀಯ
ಸ್ವಯಂಸೇವಕ
ಸಂಘದ
(ಆರ್ಎಸ್ಎಸ್)
ಕೇಂದ್ರ
ಕಚೇರಿ
'ಕೇಶವ
ಕೃಪಾ'ದಲ್ಲಿ
ಸೋಮವಾರ
ಆರ್ಎಸ್ಎಸ್
ಮತ್ತು
ಬಿಜೆಪಿ
ನಾಯಕರ
ಸಭೆ
ನಡೆಯಿತು.
ಸಭೆಯಲ್ಲಿ
ಹಿಂದೂ
ಸಮಾಜೋತ್ಸವ
ಆಯೋಜನೆ
ಸೇರಿದಂತೆ
ವಿವಿಧ
ವಿಷಯಗಳ
ಕುರಿತು
ಚರ್ಚೆ
ನಡೆಸಲಾಗಿದೆ.
ಫೆಬ್ರವರಿ 8ರಂದು ಬೆಂಗಳೂರಿನಲ್ಲಿ ಹಿಂದೂ ಸಮಾಜೋತ್ಸವ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನು ಯಶಸ್ವಿಗೊಳಿಸುವ ಕುರಿತು ಬಿಜೆಪಿ ನಾಯಕರ ಜೊತೆ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ಅರಮನೆ ಮೈದಾನದಲ್ಲಿ ಸಮಾಜೋತ್ಸವ ನಡೆಯುವ ಸಾಧ್ಯತೆ ಇದೆ.[ಹಿಂದೂ ಹೃದಯ ಸಂಗಮ ಶೋಭಾಯಾತ್ರೆ ಚಿತ್ರಗಳು]
ಸಮಾಜೋತ್ಸವದ ಜೊತೆ ಜೊತೆಗೆ ಪಕ್ಷ ಸಂಘಟನೆ, ಮಠಗಳ ನಿಯಂತ್ರಣ ವಿಧೇಯಕ, ಸದಸ್ಯತ್ವ ನೋಂದಣಿ ಅಭಿಯಾನ ಮುಂತಾದ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಆರ್ಎಸ್ಎಸ್ ಮುಖಂಡರಾದ ಮಂಗೇಶ್ ಬೆಂಡೆ, ಮೈ.ಚ.ಜಯದೇವ್, ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂಪ್ಪ, ಅನಂತ ಕುಮಾರ್, ಡಿ.ವಿ.ಸದಾನಂದಗೌಡ, ಆರ್.ಅಶೋಕ್, ಅರವಿಂದ್ ಲಿಂಬಾವಳಿ ಮುಂತಾದವರು ಪಾಲ್ಗೊಂಡಿದ್ದರು.