ಹೆಬ್ಬಾಳ ಉಪ ಚುನಾವಣೆಯಲ್ಲಿ ಹಣ ಹಂಚಿಕೆ
ಬೆಂಗಳೂರು, ಫೆಬ್ರವರಿ 13 : 'ಹೆಬ್ಬಾಳ ಕ್ಷೇತ್ರದಲ್ಲಿ ಮತದಾರರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ. ಭೈರತಿ ಬಸವರಾಜ್ ಬೆಂಬಲಿಗರು ಬೂತ್ ಹೊರಗೆ ಹಣ ಹಂಚುತ್ತಿದ್ದಾರೆ' ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ಶನಿವಾರ
ಮಾಧ್ಯಮಗಳ
ಜೊತೆ
ಮಾತನಾಡಿದ
ವೈ.ಎ.ನಾರಾಯಣಸ್ವಾಮಿ
ಅವರು,
'ಶುಕ್ರವಾರ
ರಾತ್ರಿ
ಸಂಜಯ
ನಗರ
ವಾರ್ಡ್ನಲ್ಲಿ
ಕಾಂಗ್ರೆಸ್
ಕಾರ್ಯಕರ್ತರಾದ
ರವಿಕುಮಾರ್
ಹಾಗೂ
ಸಚಿವ
ದಿನೇಶ್
ಗುಂಡೂರಾವ್
ಅವರ
ಶಿಷ್ಯರು
ಮತದಾರರಿಗೆ
ಹಣ
ಹಂಚುತ್ತಿದ್ದ
ವೇಳೆ
ನಮ್ಮ
ಕಾರ್ಯಕರ್ತರ
ಕೈಗೆ
ಸಿಕ್ಕಿಬಿದ್ದಿದ್ದಾರೆ'.
[Live
:
ಮೂರು
ಕ್ಷೇತ್ರಗಳ
ಚುನಾವಣೆ
ವಿವರ]
'ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ, ಹಣ ಹಂಚುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ರಿಪ್ಲಬಿಕ್ ಆಫ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಭೈರತಿ ಬಸವರಾಜ್ ಬೆಂಬಲಿಗರು ಇಂದು ಬೂತ್ ಹೊರಗೆ ಹಣ ಹಂಚುತ್ತಿದ್ದಾರೆ' ಎಂದು ದೂರಿದರು. [ಹೆಬ್ಬಾಳ ಚುನಾವಣೆಯ ಮುನ್ನ ಡಿ ಕೆ ಶಿವಕುಮಾರ್ ಸಿಡಿಸಿದ ಬಾಂಬ್!]
'ಕಾಂಗ್ರೆಸ್ನವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಪೊಲೀಸರ ಸಹಾಯದಿಂದಲೇ ಇಂತಹ ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚುನಾವಣಾ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು' ಎಂದು ನಾರಾಯಣಸ್ವಾಮಿ ಒತ್ತಾಯಿಸಿದರು. [ಹೆಬ್ಬಾಳ ಶಾಸಕ ಜಗದೀಶ್ ಕುಮಾರ್ ಇನ್ನಿಲ್ಲ]
ಹೆಬ್ಬಾಳದ ಶಾಸಕರಾಗಿದ್ದ ಜಗದೀಶ್ ಕುಮಾರ್ (ಬಿಜೆಪಿ) ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಶನಿವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.